ಭವ್ಯ ಭಾರತದ ಪ್ರಜೆಗಳ ನಿಜ ಸ್ವಾತಂತ್ರ್ಯದ ಸುವರ್ಣ ರವಿಯಂತೆ ರಾರಾಜಿಸುತಾ ವಿಶ್ವ ಭೂಪಟದಿ ಮೆರೆಯುತ್ತಿರುವುದು
ನಮ್ಮ ಸಂವಿಧಾನ…
ಅಕ್ಷರ ನಿರಕ್ಷರಕುಕ್ಷಿಗಳ ಬಡವ ಬಲ್ಲಿದನ
ಅವನ ಇವಳ ಬಹು ಭಾಷೆಯ
ಶತಕೋಟಿ ಭಾರತೀಯರ ಭಾಗ್ಯದ ಬಟ್ಟಿಲು
ನಮ್ಮ ಸಂವಿಧಾನ…
ಬಹುಭಾಷೆಯ ಸಿರಿ ಸಂಸ್ಕೃತಿಯ
ತೊಟ್ಟಿಲಲ್ಲಿ ಬಹು ಧರ್ಮದ ಸಾಂಗತ್ಯದಲಿ
ಅರಳಿ ನಳನಳಿಸುವ ಬಾಡದ ಹೂವೇ
ನಮ್ಮ ಸಂವಿಧಾನ…
ಸಮಾನತೆ ಭಾತೃತ್ವ ಜಾತ್ಯತೀತೆಯ ನಂಬಿದ
ಬಹು ಜೀವಿಗಳ ಪೊರೆಯುತ್ತಿರುವ
ಕರುಣಾಮಯಿ ಅಮ್ಮನ ಪ್ರತಿರೂಪವೇ
ನಮ್ಮ ಸಂವಿಧಾನ…
ಸಾರ್ವಭೌಮತ್ವ ನೆಮ್ಮದಿ ಆಶಯಗಳ
ಪ್ರಜೆಗಳ ಪ್ರಭುತ್ವವ ರಕ್ಷಿಸುತಾ
ಗೌರಿಶಂಕರದಂತೆ ಅಚಲ ಅಮರ
ನಮ್ಮ ಸಂವಿಧಾನ….
– ವಿ ಕೆ ನರಸಿಂಹ ಮೂರ್ತಿ
ದಾವಣಗೆರೆ
9886477771



