ಜ್ಯೋತಿಷ್ಯ
ರಾಶಿ ಭವಿಷ್ಯ
ಶುಭ ಮಂಗಳವಾರ-ಜೂನ್-23,2020 ರಾಶಿ ಭವಿಷ್ಯ
ಜಗನ್ನಾಥ ರಥಯಾತ್ರ
ಸೂರ್ಯೋದಯ: 05:59
ಸೂರ್ಯಸ್ತ: 18:44
ಶಾರ್ವರಿ ನಾಮ ಸಂವತ್ಸರ
ಆಷಾಢ ಮಾಸ ಉತ್ತರಾಯಣ
ತಿಥಿ: ಬಿದಿಗೆ – 11:18 ವರೆಗೆ
ನಕ್ಷತ್ರ: ಪುನರ್ವಸು – 13:33 ವರೆಗೆ
ಯೋಗ: ಧ್ರುವ – 11:02 ವರೆಗೆ
ಕರಣ: ಕೌಲವ – 11:18 ವರೆಗೆ ತೈತಲೆ – 22:49 ವರೆಗೆ
ದುರ್ಮುಹೂರ್ತ: 08:32 – 09:23
ದುರ್ಮುಹೂರ್ತ : 23:14 – 23:59
ರಾಹು ಕಾಲ: 15:00- 16:30
ಯಮಗಂಡ: 09:00 – 10:30
ಗುಳಿಕ ಕಾಲ: 12:00 – 13;30
ಅಮೃತಕಾಲ: 11:08 – 12:44
ಅಭಿಜಿತ್ ಮುಹುರ್ತ: 11:56 – 12:47
ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.
ಸೋಮಶೇಖರ್B.Sc
ಜೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ನಾಡಿ ಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರಪ್ರವೀಣರು.
Mob.No. 93534 88403
ಮೇಷ ರಾಶಿ
ಕೃಷಿಕರು ಉತ್ತಮ ಲಾಭಾಂಶ ಪಡೆಯುವಿರಿ. ಕುರಿ ಸಾಕಾಣಿಕೆ, ಹೈನುಗಾರಿಕೆ ಉದ್ಯಮದಿಂದ ಉತ್ತಮ ಲಾಭ ಸಿಗಲಿದೆ. ತಾವು ವಾಸವಾಗಿರುವ ಮನೆಯನ್ನು ವಾಸ್ತು ಪ್ರಕಾರ ನವೀಕರಣ ಮಾಡುವಿರಿ . ನಾಲ್ಕು ಚಕ್ರದ ವಾಹನ ಖರೀದಿಸುವ ಶುಭ ಯೋಗ ಕೂಡಿ ಬರಲಿದೆ . ವಿಧವೆ ಅಥವಾ ವಿಚ್ಛೇದನದ ಹೆಣ್ಣುಮಕ್ಕಳ ಕಂಕಣ ಬಲ ಕೂಡಿ ಬರಲಿದೆ. ನಿಮ್ಮ ಅಭಿವೃದ್ಧಿ ಕಂಡು ಬಂಧುಬಳಗದವರು ಅಸೂಯೆಪಡುವ ಸಾಧ್ಯತೆ. ಸ್ವಲ್ಪ ಕಡಿಮೆ ಖರ್ಚು ಮಾಡುವುದು ಒಳಿತು. ನಿಮ್ಮ ಮಕ್ಕಳು ನಿಮ್ಮಿಂದ ಧನಸಹಾಯ ಅಪೇಕ್ಷಿಸುವವರು ನಿರಾಸೆ ಮಾಡಬೇಡಿ .ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಯಾವುದೇ ಹೊಸ ವಿಚಾರ ಅಳವಡಿಸಿಕೊಳ್ಳುವ ಮೊದಲು ಪತ್ನಿಯ ಸಹಾಯ ಪಡೆಯಿರಿ. ಸಣ್ಣಕೈಗಾರಿಕಾ ನಡೆಸುವವರಿಗೆ ಆದಾಯದಲ್ಲಿ ಏರಿಕೆ. ಕಾರ್ಮಿಕರ ಜೊತೆ ಒಳ್ಳೆಯ ಬಾಂಧವ್ಯ ರೂಡಿಸಿಕೊಳ್ಳಿ. ಕೆಲಸದಲ್ಲಿ ಶ್ರದ್ಧೆಯಿಂದ ಮಾಡುವುದು ಉತ್ತಮ, ಇಲ್ಲಾಂದ್ರೆ ಅಭದ್ರತೆ. ಉತ್ತಮ ರೀತಿಯಲ್ಲಿ ಧನ ಪ್ರಾಪ್ತಿಯಾಗುವುದು ಅಹಂಕಾರ ತೋರಿಸಬೇಡಿ. ಸರಕಾರಿ ಉನ್ನತ ಹುದ್ದೆಯಲ್ಲಿರುವವರು ಕಿತ್ತಾಟದಿಂದ ನಿಮಗೆ ಅನಿರೀಕ್ಷಿತವಾಗಿ ಉನ್ನತ ಹುದ್ದೆ ದೊರೆಯಬಹುದು ಪ್ರಯತ್ನ ಮಾಡಿ. ಸರಿಯಾದ ಸಮಯಕ್ಕೆ ಸರಿಯಾದ ರೀತಿಯಲ್ಲಿ ಕೆಲಸ ಮಾಡುವುದರಿಂದ ಮೇಲಾಧಿಕಾರಿಗಳಿಂದ ಒಳ್ಳೆಯ ಪ್ರಶಂಸೆ ಸಿಗಲಿದೆ. ಪ್ರೀತಿ-ಪ್ರೇಮ ವಿಚಾರದಲ್ಲಿ ತಲೆಕೆಡಿಸಿಕೊಳ್ಳಬೇಡಿ. ಮಾತಾಪಿತೃ ಬೆಂಬಲದೊಂದಿಗೆ ನೀವು ಅಂದುಕೊಂಡ ಕೆಲಸದಲ್ಲಿ ಜಯ ಸಾಧಿಸುವಿರಿ. ಪ್ರೇಮ ವಿಚಾರದಲ್ಲಿ ಪ್ರಾಯಶ್ಚಿತ್ತವಾಗುವ ಸಾಧ್ಯತೆ ಇದೆ. ಆರ್ಥಿಕ ಪರಿಸ್ಥಿತಿಯಲ್ಲಿ ಒತ್ತಡ ಹೆಚ್ಚಾಗಲಿದೆ.
“ವೃಷಭ ರಾಶಿ
ಕ್ಷುಲ್ಲಕ ವಿಚಾರಗಳಿಗಾಗಿ ಬಂಧುಗಳು ನಿಮ್ಮನ್ನು ದ್ವೇಷಿಸಬಹುದು. ಹಿರಿಯರು ತಾವು ಈ ಹಿಂದೆ ಮಾಡಿದ ತಪ್ಪುಗಳು ಮರುಕಳಿಸದಂತೆ ಎಚ್ಚರವಹಿಸಿ. ಕೃಷಿ ವಿಚಾರದ ಸಂಕೀರ್ಣದಲ್ಲಿ ನೀವು ಮಂಡಿಸಿದ ವಿಚಾರಗಳಿಗೆ ಪ್ರಶಂಸೆ .ಕೃಷಿಭೂಮಿ ಅಥವಾ ಸ್ಥಿರಾಸ್ತಿಗಳನ್ನು ಖರೀದಿಸಲು ಈಗ ಸರಿಯಾದ ಸಮಯವಲ್ಲ. ಆಪ್ತರನ್ನು ಅವರು ತಪ್ಪು ಮಾಡಿದಾಗಲೂ ಸಮರ್ಥಿಸ ಬೇಡಿ. ಅನಾವಶ್ಯಕವಾಗಿ ಯಾರನ್ನು ನಿಂದಿಸಬೇಡಿ ಮತ್ತು ಅವಮಾನ ಮಾಡಬೇಡಿ. ಬೇರೆ ಕೆಲಸ ಸಿಗುವವರೆಗೂ ಅಲ್ಲಿಯೇ ಮುಂದುವರೆಯಿರಿ. ನಿಮ್ಮ ಎದುರಾಳಿಗಳ ಬಗ್ಗೆ ಗಮನವಿರಲಿ ಮತ್ತು ಎಚ್ಚರಿಕೆ ವಹಿಸಿ. ಸ್ಥಿರಾಸ್ತಿ ಬಗ್ಗೆ ಗೊಂದಲ ಸೃಷ್ಟಿಯಾಗಿಮಾನಸಿಕ ಮನಸ್ತಾಪ. ಉದ್ಯೋಗ ಹುಡುಕಾಟದಲ್ಲಿ ವಿಳಂಬ. ತಮ್ಮ ಮಕ್ಕಳ ಸಂತಾನದ ಬಗ್ಗೆ ಚಿಂತನೆ ಮಾಡುವಿರಿ. ಮಗನ ನಡವಳಿಕೆ ತಮಗೆ ಬೇಸರವಾಗಲಿದೆ. ನವದಂಪತಿಗಳಿಗೆ ಒಬ್ಬರಿಗೊಬ್ಬರು ಅರ್ಥೈಸಿಕೊಳ್ಳುವುದುರಲ್ಲಿ ಮೌನ. ಕುಟುಂಬ ಸದಸ್ಯರ ಅನಾರೋಗ್ಯ ಸಮಸ್ಯೆ ಕಾಡಲಿದೆ. ವಿಚ್ಛೇದನದ ಹೆಣ್ಣುಮಕ್ಕಳಿಗೆ ಮರುವಿವಾಹ ಸಂಭವ. ಬೇರೆಯವರ ಕುಟುಂಬದ ಬಗ್ಗೆ ಚಿಂತನೆ ಮಾಡಬೇಡಿ, ನೀವೇ ಅಪವಾದಕ್ಕೆ ಗುರಿಯಾಗುವಿರಿ. ಪ್ರೀತಿ-ಪ್ರೇಮ ಸರಸ-ಸಲ್ಲಾಪ ಗಳಿಂದ ವೇದನೆ.
“ಮಿಥುನ ರಾಶಿ”:
ಹೋಟೆಲ್ ಬಿಸಿನೆಸ್, ದಿನಸಿ ಅಂಗಡಿ, ಬಟ್ಟೆ ಅಂಗಡಿ ,ವ್ಯಾಪಾರಸ್ಥರಿಗೆ ಉತ್ತಮ ಧನಲಾಭಗುವುದು, ಆದರೂ ಜನರ ವಕ್ರದೃಷ್ಟಿಯಿಂದ ಏರಿಳಿತ ವಾಗುವ ಸಾಧ್ಯತೆ ಇದೆ. ವಿದೇಶ ಪ್ರವಾಸ ಬಯಸುವವರು ಯಶಸ್ವಿ. ಮನೆಯಲ್ಲಿ ವಾಸ್ತು ದೋಷ ಇರುವುದರಿಂದ, ಕಟ್ಟಡದ ನವೀಕರಣ ಬಗ್ಗೆ ಚಿಂತನೆ. ಸಂಗಾತಿಯ ಮನಸ್ಸನ್ನು ಅರಿತು ಹೆಜ್ಜೆ ಇಡಿ. ಒಂದು ಸಮಸ್ಯೆ ಮುಗಿಸಿದೆ ಎನ್ನುವುದರಒಳಗಡೆ ಮತ್ತೊಂದು ಸಮಸ್ಯೆ ಎದುರಾಗಬಹುದು, ನಿಧಾನವಾಗಿ ಎದುರಿಸಿಲಿದ್ದೀರಿ. ಹಿರಿಯರ ಮಧ್ಯಪ್ರವೇಶದಿಂದ ಕೆಲ ವಿಚಾರಗಳು ನಿಮ್ಮ ಪರ ಆಗುತ್ತವೆ. ಹೊಸ ವಾಹನ ಖರೀದಿ ಚಿಂತನೆ ಯಶಸ್ವಿ. ಬೆಲೆ ಬಾಳುವ ಒಡವೆ ವಸ್ತ್ರ ಖರೀದಿ ಚಿಂತನೆ. ಮಗನ ಅಥವಾ ಮಗಳ ಸಂಸಾರದ ಬಗ್ಗೆ ಗಂಭೀರವಾಗಿ ಚಿಂತನೆ ಮಾಡುವಿರಿ. ಮಗಳ ಸಂತಾನದ ಬಗ್ಗೆ ಚಿಂತನೆ ಮಾಡುವಿರಿ. ತಮಗೆ ಪದೇಪದೇ ಎದೆ ನೋವು, ಮಂಡಿ ನೋವು, ಸೊಂಟನೋವು ಕಾಣಿಸಲಿದೆ. ತಾವು ಎಷ್ಟೇ ಕಷ್ಟಪಟ್ಟು ದುಡಿದರೂ ಕೈಯಲ್ಲಿ ಹಣ ನಿಲ್ಲುತ್ತಿಲ್ಲ. ಅನಾವಶ್ಯಕವಾಗಿ ಸಾಲದ ಮೊತ್ತ ಸಮಸ್ಯೆ ಕಾಡಲಿದೆ. ಸಾಲಗಾರರಿಂದ ತುಂಬಾ ಕಿರಿಕಿರಿ ಅನುಭವಿಸುವಿರಿ. ಪ್ರೀತಿ-ಪ್ರೇಮ ಸರಸ-ಸಲ್ಲಾಪಗಳಿಂದ ಪ್ರಾಯಶ್ಚಿತ್ತ ಅನುಭವಿಸುವಿರಿ. ತಮ್ಮ ಪ್ರೀತಿಗೆ ಹಿರಿಯರು ಅಡಗೋಡಿ ಆಗಿ ನಿಲ್ಲುವರು.
“ಕರ್ಕ ರಾಶಿ”
ಕೃಷಿಕರಿಗೆ ಹೆಚ್ಚಿನ ಧನಾಗಮನ ನಿರೀಕ್ಷೆ. ಜಮೀನಿಗಾಗಿ ಹೊಸ ಯಂತ್ರೋಪಕರಣಗಳ ಖರೀದಿ ಸಾಧ್ಯತೆ. ಜಮೀನಿನಲ್ಲಿ ಬೋರ್ವೆಲ್ ಕೊರೆಯುವುದುಕ್ಕಾಗಿ ಚಿಂತಿಸುವಿರಿ. ಮಕ್ಕಳು ಅಡ್ಡದಾರಿ ಹೋಗುವುದರ ಬಗ್ಗೆ ಚಿಂತನೆ ಮಾಡುವಿರಿ. ಮಹಿಳಾ ರಾಜಕಾರಣಿಗಳಿಗೆ ಸಿಹಿಸುದ್ದಿ ಲಭಿಸಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಭಾಗ್ಯ. ನೌಕರಸ್ಥರು ಸಹೋದ್ಯೋಗಿಗಳಿಂದ ಮನಸ್ತಾಪ. ಬಂಧು ಮತ್ತು ಸ್ನೇಹಿತರಿಂದ ಅತಿಥಿಸತ್ಕಾರ ಭಾಗ್ಯ ಸಿಗಲಿದೆ. ನ್ಯಾಯಾಲದಲ್ಲಿ ಪೆಂಡಿಂಗ್ ಇರುವ ಕೆಲಸ ಕಾರ್ಯಗಳು ಯಶಸ್ವಿನ ಹಂತಕ್ಕೆ ಬಂದಿರುತ್ತದೆ. ಮಕ್ಕಳ ಕಂಕಣಬಲ ಕೂಡಿ ಬರುವ ಸಾಧ್ಯತೆ. ನಿಮ್ಮಿಂದ ದೇವರ ಪ್ರತಿಷ್ಠಾಪನಾ ಮಾಡುವುದರ ಬಗ್ಗೆ ಚಿಂತನೆ. ಜಮೀನಲ್ಲಿ ತಕರಾರು ನ್ಯಾಯ ಶುರುವಾಗುವುದು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಚಿಂತನೆ ಮಾಡುವಿರಿ. ಮಾತಾಪಿತೃ ಆರೋಗ್ಯದ ಶಸ್ತ್ರಚಿಕಿತ್ಸೆಯ ಬಗ್ಗೆ ಚಿಂತನೆ ಮಾಡುವಿರಿ. ಪ್ರೇಮಿಗಳು ಪ್ರೀತಿ-ಪ್ರೇಮ ಸರಸ-ಸಲ್ಲಾಪಗಳಿಂದ ಮನಸ್ತಾಪವಾಗಲಿದೆ.
“ಸಿಂಹರಾಶಿ”:
ನಾಲ್ಕು ಚಕ್ರದ ವಾಹನ ಖರೀದಿಸುವ ಚಿಂತನೆ ಮಾಡುವಿರಿ. ಮನೆ ಕಟ್ಟುವ ವಿಚಾರ ಪತ್ನಿಯ ಸಹಕಾರದಿಂದ ಯಶಸ್ಸು ಕಾಣುವಿರಿ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ನೆಮ್ಮದಿಯ ವಾತಾವರಣ ಸೃಷ್ಟಿಯಾಗಲಿದೆ. ವಿಧವಾ ಮಕ್ಕಳ ಮದುವೆ ಬಗ್ಗೆ ಚಿಂತನೆ. ಮಗಳ ಅಥವಾ ಮಗನ ಸಂತಾನದ ಬಗ್ಗೆ ಚಿಂತನೆ. ತಾವು ಕೊಟ್ಟಿರುವ ಹಣದ ಬಗ್ಗೆ ಚಿಂತನೆ ಮಾಡುವಿರಿ. ನಿಮ್ಮ ದುಡ್ಡು ನಿಮ್ಮ ಕೈ ಸೇರಲು ಹರಸಾಹಸ ಪಡುವಿರಿ. ಕೃಷಿಕರಿಗೆ ಉತ್ತಮ ಲಾಭಾಂಶ ನಿರೀಕ್ಷಣೆ ಮಾಡುವಿರಿ. ಸುವರ್ಣ ಅಭರಣಗಳ ಖರೀದಿ ಮಾಡುವ ಸಾಧ್ಯತೆ. ನಿಮ್ಮ ಅಮೃತ ಹಸ್ತದಿಂದ ದೇವರ ಪ್ರತಿಷ್ಠಾಪನಾ ಬಗ್ಗೆ ಚಿಂತನೆ ಮಾಡುವಿರಿ. ಬಹು ದಿನಗಳಿಂದ ಪೆಂಡಿಂಗ್ ಇರುವ ಕಾರ್ಯಗಳು ಇಂದು ನೆರವೇರುವ ಸಾಧ್ಯತೆ ಇದೆ. ತಮ್ಮ ಹಿತೈಷಿಗಳು ತಮಗೆ ಆಶೀರ್ವಾದ ಮಾಡುವಿರಿ. ತಾವು ನಂಬಿಕೆಯಿಟ್ಟಿರುವ ವ್ಯಕ್ತಿಗಳಿಂದ ಮನಸ್ತಾಪ ವಾಗುವುದು. ವಾಹನ ಸವಾರಿ ಮಾಡುವಾಗ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು. ಮನೆಗೆ ಎಲೆಕ್ಟ್ರಾನಿಕ್ಸ್ ಯಂತ್ರೋಪಕರಣಗಳ ಖರೀದಿ ಸಾಧ್ಯತೆ ಇದೆ. ತಾವು ತಮ್ಮ ಜಮೀನಿನಲ್ಲಿ ಮೇಕೆ ಸಾಕಾಣಿಕೆ, ಹೈನುಗಾರಿಕೆ, ಕೋಳಿ ಫಾರಂ ಉದ್ಯಮ ಪ್ರಾರಂಭ ಮಾಡುವುದರ ಬಗ್ಗೆ ಚಿಂತನೆ ಮಾಡುವಿರಿ. ಪ್ರೀತಿ-ಪ್ರೇಮ ಸರಸ-ಸಲ್ಲಾಪ ಗಳಿಂದ ಬೇಸರ ಜಿಗುಪ್ಸೆ ಸೃಷ್ಟಿಯಾಗಲಿದೆ.
“ಕನ್ಯಾ ರಾಶಿ”:
ಆರೋಗ್ಯದಲ್ಲಿ ಏರುಪೇರು ಸಂಭವ. ಹೊಸ ಮಾಧ್ಯಮವೊಂದರಲ್ಲಿ ತೊಡಗಿಕೊಳ್ಳುವ ಸಾಧ್ಯತೆ. ಕಾರ್ಯಕ್ಷೇತ್ರದಲ್ಲಿ ಸಮಸ್ಯೆಗಳ ಪರಿಹಾರ .ಮಿತ್ರರಿಂದ ಸಹಕಾರ ದೊರೆಯಲಿದೆ. ಕೃಷಿಕರಿಗೆ ಸಂಕಟಪಡುವ ಸಾಧ್ಯತೆ. ಮನೆಗೆ ವಿಶೇಷ ವ್ಯಕ್ತಿಗಳ ಆಗಮನ ಸಾಧ್ಯತೆ. ಧಾರ್ಮಿಕ ಸಮಾರಂಭಗಳಲ್ಲಿ ಭಾಗಿ. ಸಾಮಾಜಿಕ ಕಾರ್ಯಗಳಲ್ಲಿ ಯಶಸ್ಸನ್ನು ಕಾಣುವಿರಿ. ವ್ಯಾಪಾರಸ್ಥರಿಗೆ ವಿಶೇಷ ಲಾಭದ ನಿರೀಕ್ಷೆ. ಪ್ರೇಮ ಪ್ರಕರಣದಲ್ಲಿ ಸಮಸ್ಯೆಗೆ ಸಿಲುಕುವಿರಿ. ಆರ್ಥಿಕ ಚೇತರಿಕೆ ಇಂದ ನೆಮ್ಮದಿ. ಮಕ್ಕಳ ವಿದ್ಯಾಭ್ಯಾಸದ ಪ್ರಗತಿ. ಹೊಸ ಆಸ್ತಿ ಖರೀದಿ ಸಾಧ್ಯತೆ. ಮುರಿದುಹೋದ ತಮ್ಮ ಜೀವನದಲ್ಲಿ ಹೊಸ ಆಶಾಕಿರಣ ಮೂಡಿಬರಲಿದೆ. ಪ್ರತಿಯೊಂದು ಕಾರ್ಯಗಳಲ್ಲಿ ವಿಳಂಬವಾಗದೆ ಯಶಸ್ಸು ಕಾಣುವಿರಿ. ಗೃಹನಿರ್ಮಾಣ ಪತ್ನಿಯ ಸಹಾಯದಿಂದ ಯಶಸ್ಸು ದೊರೆಯಲಿದೆ. ವೃತ್ತಿ ಬದಲಾವಣೆ ಸದ್ಯಕ್ಕೆ ಬೇಡ. ಬಹುದಿನದ ಬೇಡಿಕೆ ಇಂದು ನೆರವೇರುವ ಸಾಧ್ಯತೆ. ಹಣಕಾಸಿನ ವಿಚಾರದಲ್ಲಿ ಯಾರಿಗೂ ಜಾಮೀನು ನೀಡಬೇಡಿ.
“ತುಲಾ ರಾಶಿ”:- ನಿರುದ್ಯೋಗಿಗಳಿಗೆ ಉದ್ಯೋಗದ ಪ್ರಾಪ್ತಿ ಸಾಧ್ಯತೆ. ನೌಕರಸ್ಥರು ಸಹೋದ್ಯೋಗಿಗಳಿಂದ ಮುಜುಗರದ ಸನ್ನಿವೇಶ ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಯಶಸ್ಸಿನ ದಿನವಾಗಿದೆ . ಖಾಸಗಿ ನೌಕರರು ಅಥವಾ ಸರಕಾರಿ ನೌಕರರರಿಗೆ ಬದಲಾವಣೆ ಅಥವಾ ವರ್ಗಾವಣೆ ಸಾಧ್ಯತೆ .ಮಹಿಳಾ ರಾಜಕಾರಣಿಗಳಿಗೆ ಅದೃಷ್ಟದ ದಿನ. ಕೃಷಿಕರಿಗೆ ಹೆಚ್ಚಿನ ಆದಾಯ ಸಿಗಲಿದೆ. ಬಂಧು ಅಥವಾ ಸ್ನೇಹಿತರ ಆಗಮನದ ನಿರೀಕ್ಷೆ .ಧಾರ್ಮಿಕ ಕ್ಷೇತ್ರಗಳ ದರ್ಶನ ಪಡುವಿರಿ. ಗೃಹ ನಿರ್ಮಾಣ ಕಾರ್ಯಗಳಲ್ಲಿ ಪ್ರಗತಿಪರ. ಆಸೆ-ಆಕಾಂಕ್ಷೆಗಳು ಕೈಬಿಡುವ ಸಾಧ್ಯತೆ. ಬಾಂಧವ್ಯದಲ್ಲಿ ಹಿತೈಷಿಗಳ ದರ್ಶನದಿಂದ ನೆಮ್ಮದಿ. ವೈಯಕ್ತಿಕ ಬದುಕಿನಲ್ಲಿ ಸಂತೃಪ್ತಿ. ಮಕ್ಕಳ ಆರೋಗ್ಯದ ಸಮಸ್ಯೆ ಕಾಡಲಿದೆ. ಪತ್ನಿಗೆ ಉದರ ಸಂಬಂಧಿತ ದೋಷ ಸಮಸ್ಯೆ ಕಾಡಲಿದೆ. ಪ್ರೇಮಿಗಳ ವಿರಸ ಸಮಸ್ಯೆ ಕಾಡಲಿದೆ. ಮಧ್ಯಸ್ಥಿಕೆ ಜನರಿಂದ ಪ್ರೇಮಿಗಳ ಮನಸ್ತಾಪ.
“ವೃಶ್ಚಿಕ ರಾಶಿ”
ಸ್ವಚ್ಛಂದ ಬದುಕಿಗೆ ನಾಂದಿ. ವಿದ್ಯಾಭ್ಯಾಸದಲ್ಲಿ ಯಶಸ್ಸು. ಸ್ವಂತ ಉದ್ಯೋಗದಲ್ಲಿ ಉತ್ತಮ ಅವಕಾಶ ವ್ಯವಸಾಯೋತ್ಪನ್ನ ಮಾರಾಟಗಾರರಿಗೆ ಲಾಭದಾಯಕವಾಗಲಿದೆ.ಸಂಧಿ ನೋವು, ಬೆನ್ನು ನೋವಿನಂತಹ ಸಮಸ್ಯೆಗಳಿಂದ ಕಿರಿಕಿರಿ. ಹೈನುಗಾರಿಕೆಯಲ್ಲಿ ಪ್ರಗತಿ ಕಾಣುವಿರಿ. ಕೃಷಿ ಕೆಲಸಗಳಿಂದ ಮುಕ್ತರಾಗುವ ಸಾಧ್ಯತೆ. ಪತ್ನಿ ವರ್ಗದವರ ಸಹಕಾರದಿಂದ ನೆಮ್ಮದಿ ಸಿಗಲಿದೆ. ಸಹೋದರರಿಂದ ಜಮೀನು ಸಂಬಂಧ ತಗಾದೆ ಹೆಚ್ಚುವ ಸಾಧ್ಯತೆ. ಅರಿತು ಬಾಳುವ ಸಂಗಾತಿಯ ಸಹಕಾರದಿಂದ ನೆಮ್ಮದಿಯ ಬದುಕು. ಬಹುದಿನಗಳ ಕೆಲಸ ಒತ್ತಡಗಳಿಂದ ಮುಕ್ತಿದೊರೆತು ನಿರಾಳ. ಉದ್ಯೋಗದಲ್ಲಿ ಬಡ್ತಿ ದೊರಕುವ ಸಾಧ್ಯತೆಗಳು. ಹೆಚ್ಚಾಗಿ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶಗಳು ಸಿಗುತ್ತದೆ. ಆತ್ಮೀಯರಿಂದ ವಂಚನೆ ಸಾಧ್ಯತೆ. ಎಚ್ಚರಿಕೆ ಒಳಿತು. ಹಣಕಾಸಿನಲ್ಲಿ ವಿಚಾರದಲ್ಲಿ ಚೇತರಿಕೆ. ದಾಂಪತ್ಯ ಜೀವನದಲ್ಲಿ ಸಂತೋಷ ಕಾಣುವಿರಿ. ಅಕ್ಕ ಪಕ್ಕದ ಹೊಲದ ಮಾಲೀಕರ ಕಡೆಯಿಂದ ಅಥವಾ ಅಕ್ಕಪಕ್ಕದ ಮನೆಯ ಮಾಲೀಕರ ಕಡೆಯಿಂದ ಮನಸ್ತಾಪವಾಗುವುದು. ಪ್ರೇಮಿಗಳಿಗೆ ವಿರಹದ ನೋವು ಕಾಣಲಿದೆ. ಬೆನ್ನು ನೋವು, ಮಂಡಿ ನೋವು, ಕತ್ತು ನೋವು ಕಾಣಲಿದೆ.
“ಧನಸು ರಾಶಿ”
ಮಗನ ನಡವಳಿಕೆಯ ಬಗ್ಗೆ ತಮಗೆ ತುಂಬಾ ಕಣ್ಣೀರುಡಿಸುವುದು. ಸಾಲ ತೆಗೆದವರ ಕಡೆಯಿಂದ ತುಂಬಾ ಹಿಂಸೆ ಅನುಭವಿಸುವಿರಿ. ಹೊಸ ಉದ್ಯಮ ಪ್ರಾರಂಭಿಸುವ ಬಗ್ಗೆ ಕುಟುಂಬ ಸದಸ್ಯರ, ಪತ್ನಿಯ, ಹಾಗೂ ಸ್ನೇಹಿತರ ಸಲಹೆ ಪಡೆದುಕೊಳ್ಳುವಿರಿ. ಗುರಿ ಸಾಧನೆಯ ಕನಸು ಕಾಣುವಿರಿ. ಸರ್ಕಾರಿ ಕಚೇರಿಯಲ್ಲಿನ ಕೆಲಸಕಾರ್ಯಗಳು ತಮಗೆ ಕಾಡಲಿದೆ. ಅದಕ್ಕೆ ಸಂಬಂಧಪಟ್ಟ ವ್ಯಕ್ತಿ ನಿಮಗೆ ಕಾಣಲಿದ್ದಾರೆ. ಕುಟುಂಬ ಸದಸ್ಯರೊಡನೆ ಸಂತೋಷದ ಕ್ಷಣಗಳನ್ನು ಅನುಭವಿಸುವಿರಿ. ಜನರ ಜೊತೆ ತಮ್ಮ ಒಡನಾಟ ಸುಂದರವಾಗಿದೆ. ಲೇವಾದೇವಿ, ವ್ಯಾಪಾರಸ್ಥರಿಗೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ. ಉದ್ಯೋಗ ಹುಡುಕಾಟದಲ್ಲಿ ಸ್ನೇಹಿತರ ಕಡೆಯಿಂದ ಸಹಾಯ ಸಿಗಲಿದೆ. ಮಕ್ಕಳ ಮದುವೆ ಕಾರ್ಯ ವಿಳಂಬವಾಗಲಿದೆ. ಆರೋಗ್ಯದಲ್ಲಿ ವೃದ್ಧಿಯಾಗುವುದು. ವ್ಯಾಪಾರಸ್ಥರಿಗೆ ಉತ್ತಮ ಪ್ರಗತಿ ಕಾಣಲಿದೆ. ಹಣಕಾಸಿನ ವ್ಯವಹಾರದಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆ ಕಾಣಲಿದೆ. ಅಕ್ಕಪಕ್ಕದ ಮನೆಯ ಕಡೆ ಮತ್ತು ಅಕ್ಕಪಕ್ಕದ ಹೊಲದ ಮಾಲೀಕರ ಕಡೆಯಿಂದ ಮನಸ್ತಾಪವಾಗುವ ಸಾಧ್ಯತೆ ಇದೆ. ಪ್ರೀತಿ ವಿಚಾರದಲ್ಲಿ ಕೊರಗುವಿರಿ.
“ಮಕರ ರಾಶಿ”:-
ಅಳಿಯನ ನಡವಳಿಕೆ ಬಗ್ಗೆ ಚಿಂತನೆ ಮಾಡುವಿರಿ. ಸಾಲದ ಚಿಂತನೆ ತನ್ಮಯೇ ಕಾಡಲಿದೆ ಆತ್ಮೀಯರು ವಿರೋಧಿಗಳಆಗುವರು.ಹೊಸ ಉದ್ಯಮ ಪ್ರಾರಂಭಿಸುವ ಬಗ್ಗೆ ಕುಟುಂಬ ಸದಸ್ಯರ, ಪತ್ನಿಯ, ಹಾಗೂ ಸ್ನೇಹಿತರ ಸಲಹೆ ಪಡೆದುಕೊಳ್ಳುವಿರಿ. ಗುರಿ ಸಾಧನೆಯ ಕನಸು ಕಾಣುವಿರಿ. ಸರ್ಕಾರಿ ಕಚೇರಿಯಲ್ಲಿನ ಕೆಲಸಕಾರ್ಯಗಳು ತಮಗೆ ಕಾಡಲಿದೆ. ಅದಕ್ಕೆ ಸಂಬಂಧಪಟ್ಟ ವ್ಯಕ್ತಿ ನಿಮಗೆ ಕಾಣಲಿದ್ದಾರೆ. ಕುಟುಂಬ ಸದಸ್ಯರೊಡನೆ ಸಂತೋಷದ ಕ್ಷಣಗಳನ್ನು ಅನುಭವಿಸುವಿರಿ. ಜನರ ಜೊತೆ ತಮ್ಮ ಒಡನಾಟ ಸುಂದರವಾಗಿದೆ. ಲೇವಾದೇವಿ, ವ್ಯಾಪಾರಸ್ಥರಿಗೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ. ಉದ್ಯೋಗ ಹುಡುಕಾಟದಲ್ಲಿ ಸ್ನೇಹಿತರ ಕಡೆಯಿಂದ ಸಹಾಯ ಸಿಗಲಿದೆ. ಮಕ್ಕಳ ಮದುವೆ ಕಾರ್ಯ ವಿಳಂಬವಾಗಲಿದೆ. ಆರೋಗ್ಯದಲ್ಲಿ ವೃದ್ಧಿಯಾಗುವುದು. ವ್ಯಾಪಾರಸ್ಥರಿಗೆ ಉತ್ತಮ ಪ್ರಗತಿ ಕಾಣಲಿದೆ. ಹಣಕಾಸಿನ ವ್ಯವಹಾರದಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆ ಕಾಣಲಿದೆ. ಅಕ್ಕಪಕ್ಕದ ಮನೆಯ ಕಡೆ ಮತ್ತು ಅಕ್ಕಪಕ್ಕದ ಹೊಲದ ಮಾಲೀಕರ ಕಡೆಯಿಂದ ಮನಸ್ತಾಪವಾಗುವ ಸಾಧ್ಯತೆ ಇದೆ. ಪ್ರೀತಿ ವಿಚಾರದಲ್ಲಿ ಕೊರಗುವಿರಿ.
“ಕುಂಭ ರಾಶಿ”:-
ಮಗಳ ಸಂಸಾರದ ಸಮಸ್ಯೆ, ತಮಗೆ ಚಿಂತನೆ ಮಾಡಲಿದ್ದೀರಿ . ಮಕ್ಕಳು ಅಡ್ಡದಾರಿ ಇಂದ ಚಿಂತನೆ ಮಾಡುವಿರಿ. ಮಕ್ಕಳ ಮದುವೆ ಸಂಬಂಧ ತಮಗೆ ದೊಡ್ಡ ಚಿಂತನೆ ಕಾಡಲಿದೆ. ತಮ್ಮ ಪ್ರಯತ್ನ ನಿರಾಶೆವಾಗಲಿದೆ. ಸಾಲದ ಬಾಧೆ ತುಂಬಾ ಕಾಡಲಿದೆ. ಪ್ರೇಮಿಗಳು ಒಬ್ಬರಿಗೊಬ್ಬರು ಅರ್ಥೈಸಿಕೊಳ್ಳುವಲ್ಲಿ ವಿಫಲವಾಗುವುದು. ಶಾರೀರಿಕ ನಷ್ಟವಾಗಲಿದೆ .ಮಾನಸಿಕ ಗೊಂದಲಗಳಿಂದ ಮನಸ್ತಾಪ ಹೆಚ್ಚಾಗಲಿದೆ .ಅನುಮಾನ ಸೃಷ್ಟಿಯಾಗಲಿದೆ .ಒಂದು ಕೆಲಸ ಕಾರ್ಯರೂಪಕ್ಕೆ ತರಲು ಹರಸಾಹಸ ಪಡುವಿರಿ. ಪ್ರಗತಿ ಕಾರ್ಯಗಳಲ್ಲಿ ಆಮೆ ನಡೆ ಎದುರಿಸುವಿರಿ. ಕುಟುಂಬದ ಸದಸ್ಯರು ಅನಾರೋಗ್ಯದಿಂದ, ಬಳಲುವ ಸಾಧ್ಯತೆ ಇದೆ. ಬೆಳಗ್ಗೆಯಿಂದ ಸಂಜೆಯವರೆಗೆ ಜೀವನ ಟೆನ್ಶನ್ ನಡೆಯುತ್ತದೆ. ಅಕ್ಕಪಕ್ಕದವರ ಕಡೆಯಿಂದ ಮನಸ್ಥಾಪ ಅನುಭವಿಸುವಿರಿ. ನಿಮ್ಮ ಘನತೆ ಮೇಲೆ ದುಷ್ಪರಿಣಾಮ ಬೀರಲಿದೆ. ಶಾಂತಿಯಿಂದ ಇದ್ದರೆ ಒಳಿತು. ಪ್ರೇಮ ವಿಚಾರದಲ್ಲಿ ಸಮಸ್ಯೆ ಕಾಡಲಿದೆ ಮತ್ತು ದೂರ ಸರಿಯುವ ಸಾಧ್ಯತೆ ಇದೆ. ಗೃಹ ಕಟ್ಟಡ ಅರ್ಧಕ್ಕೆ ನಿಲ್ಲುವುದು. ಗಂಡ-ಹೆಂಡತಿ ಮಧ್ಯೆ ಜಗಳ ಸೃಷ್ಟಿಯಾಗಲಿದೆ.
ಮೀನ ರಾಶಿ
ನಿವೇಶನದಲ್ಲಿ ತೊಂದರೆ, ಆರೋಗ್ಯದಲ್ಲಿ ತೊಂದರೆ ,ದೂರದ ಪ್ರಯಾಣ ಬೇಡ .ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಬಂದು ಬಳಗ ಸ್ನೇಹಿತರ ಕಡೆಯಿಂದ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಆಸ್ತಿ ವಿಚಾರದಲ್ಲಿ ತೊಂದರೆ. ಕೋರ್ಟ್ ವಿಚಾರದಲ್ಲಿ ಮುಂದೂಡುವುದು. ದೂರದ ಪ್ರಯಾಣ ಬೇಡ. ತುಂಬಾ ದಿನದಿಂದ ಕಾಡುವ ಸಮಸ್ಯೆಯನ್ನು ಬಗೆಹರಿಸುವ ಸನಿಹ ಬಂದಿರುತ್ತದೆ.ಕುಟುಂಬದಲ್ಲಿ ಕಲಹ ಅಣ್ಣತಮ್ಮಂದಿರಲ್ಲಿ ಕಲಹ ನಂಬಿ ದಲ್ಲಿ ಕಲಹ ಮನಸ್ತಾಪ ಆರೋಗ್ಯದಲ್ಲಿ ಏರುಪೇರು ದೂರದ ಪ್ರಯಾಣ ಬೇಡ ಯಾವುದೇ ವಾಹನ ಆಸ್ತಿ ವಿಚಾರದಲ್ಲಿ ಮನಸ್ತಾಪ ಕೋರ್ಟ್ ವಿಚಾರದಲ್ಲಿ ಮುಂದೆ ಹೋಗುವುದು ಯಾರೋ ಮಾಡಿರುವಂತ ಅಪವಾದಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಪ್ರೀತಿ-ಪ್ರೇಮ-ಪ್ರಣಯ ದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಉತ್ತಮ.
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
