Connect with us

Dvgsuddi Kannada | online news portal | Kannada news online

ಎರಡು ದಿನ 18 ಜಿಲ್ಲೆಯಲ್ಲಿ ಭಾರೀ ಮಳೆ..!

ಪ್ರಮುಖ ಸುದ್ದಿ

ಎರಡು ದಿನ 18 ಜಿಲ್ಲೆಯಲ್ಲಿ ಭಾರೀ ಮಳೆ..!

ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯದ ಉತ್ತರ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಇಂದು, ನಾಳೆ ಭಾರೀ  ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವುದರಿಂದ ರಾಜ್ಯದ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ  ಎರಡು ದಿನ  ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ. ಇನ್ನು ಕರಾವಳಿ ಭಾಗದಲ್ಲಿ ಜು.19 ವರೆಗೆ ಮಳೆ ಮುಂದುವರಿಯಲಿದೆ.

ಮಂಗಳವಾರ ಉತ್ತರ ಕನ್ನಡ ಜಿಲ್ಲೆಯ ಮಂಕಿಯಲ್ಲಿ ಗರಿಷ್ಠ 7 ಸೆಂ.ಮೀ ಮಳೆಯಾಗಿದೆ. ಉಡುಪಿ 6, ಕಾರ್ಕಳ 5, ಕುಂದಾಪುರ 4, ಮೂಡುಬಿದರೆ, ಮಂಗಳೂರು, ಬೆಳ್ತಂಗಡಿ, ಕಾರವಾರ, ಶಿಕಾರಿಪುರ 3, ಭಟ್ಕಳ, ಅಂಕೋಲಾ, ಹಿರೇಕೆರೂರು, ಭಾಗಮಂಡಲ, ಹೊಸನಗರ, ತೀರ್ಥಹಳ್ಳಿ, ಶ್ರವಣಬೆಳಗೊಳ 2, ರಾಯಚೂರು, ಸೊರಬ, ಕೊಪ್ಪ ಹಾಗೂ ನಾಗಮಂಗಲದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.ಬಳ್ಳಾರಿ, ಧಾರವಾಡ, ಹಾವೇರಿ , ದಾವಣಗೆರೆ ಜಿಲ್ಲೆಯಯಲ್ಲಿ ಸಾಧಾರಣ ಮಳೆ ಆಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top