ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್, ಸ್ಥಾಯಿ ಸಮಿತಿಗೆ ಇಂದು ಚುನಾವಣೆ ನಡೆಯಲಿದ್ದು, ಮೇಯರ್ ಆಯ್ಕೆಗೆ ಕ್ಷಣಗಣನೆಯ ಆರಂಭವಾಗಿದೆ.
ಬಿಜೆಪಿಯಿಂದ ಅಜಯ್ ಕುಮಾರ್, ಕಾಂಗ್ರೆಸ್ ನಿಂದ ದೇವರಮನಿ ಶಿವಕುಮಾರ್ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಅಜಯ್ ಕುಮಾರ್ ಅವರಿಗೆ ಸೂಚಕರಾಗಿ ಪ್ರಸನ್ನಕಮಾರ್,ಅನುಮೋದಕರಾಗಿ ರಾಕೇಶ್ ಜಾಧವ್. ದೇವರಮನಿ ಶಿವಕುಮಾರ್ ಅವರಿಗೆ ಸೂಚಕರಾಗಿ ಜಿ.ಎಸ್.ಮಂಜುನಾಥ್, ಅನುಮೋದಕರಾಗಿ ಚಮನ್ ಸಾಬ್ ಸಹಿ ಹಾಕಿದ್ದಾರೆ. ಉಪಮೇಯರ್ ಸ್ಥಾನಕ್ಕೆ ಸೌಮ್ಯ ನರೇಂದ್ರ ಕುಮಾರ್, ಆಶಾ ಡಿ.ಎಸ್ ನೂರ್ ಜಹಾನ್. ಬಿ ನಾಮಪತ್ರ ಸಲ್ಲಿಸಿದ್ದಾರೆ.

ಒಟ್ಟು 45 ಪಾಲಿಕೆ ಸದಸ್ಯರಿದ್ದು ಬಿಜೆಪಿ 17, ಕಾಂಗ್ರೆಸ್ 22 , ಪಕ್ಷೇತರ 5 , ಜೆಡಿಎಸ್ 1 ಸ್ಥಾನ ಗೆದ್ದಿದೆ. ಬಿಜೆಪಿ 17 ಸದಸ್ಯರು ದಾವಣಗೆರೆ ಮಹಾನಗರಪಾಲಿಕೆಗೆ ಹಾಜರಾಗಿದ್ದಾರೆ. ನಾವೆಲ್ಲಾ ಬಂದಿದ್ದೇವೆ ಎಂದು ಹಾಜರಾತಿ ಪ್ರಕಟಿಸಿದ ಬಿಜೆಪಿ ಸದಸ್ಯರು. ಕಾಂಗ್ರೆಸ್ ಪಕ್ಷದ ಕೆಲವೇ ಸದಸ್ಯರು ಮಾತ್ರ ಅಭ್ಯರ್ಥಿ ದೇವರಮನೆ ಶಿವಕುಮಾರ್ ಜೊತೆ ಹಾಜರಾಗಿದ್ದಾರೆ.



