Connect with us

Dvgsuddi Kannada | online news portal | Kannada news online

ಅಭಿನಂದನೆ ಸಮಾರಂಭಕ್ಕೆ ಕರಿಬೇಡಿ, ಕೆಲಸವಿದ್ರೆ  ಕರೆಯಿರಿ: ನೂತನ ಮೇಯರ್ ಅಜಯ್ ಕುಮಾರ್

ಪ್ರಮುಖ ಸುದ್ದಿ

ಅಭಿನಂದನೆ ಸಮಾರಂಭಕ್ಕೆ ಕರಿಬೇಡಿ, ಕೆಲಸವಿದ್ರೆ  ಕರೆಯಿರಿ: ನೂತನ ಮೇಯರ್ ಅಜಯ್ ಕುಮಾರ್

ಡಿವಿಜಿ ಸುದ್ದಿ, ದಾವಣಗೆರೆ: ಕೆಲಸ ಮಾಡುವ ಗುರಿ ಇಟ್ಟುಕೊಂಡು ಬಂದಿದ್ದೇನೆ. ನಿಮ್ಮ ಯಾವುದೇ ಕೆಲಸವಿದ್ದರೆ ಕರೆಯಿರಿ. ಅಭಿನಂದನೆ ಸಮಾರಂಭಕ್ಕೆ ಮಾತ್ರ ಕರಿಬೇಡಿ ಎಂದು ದಾವಣಗೆರೆಯ ನೂತನ ಮೇಯರ್ ಅಜಯ್ ಕುಮಾರ್ ಹೇಳಿದರು.

mayor ajaya kumar 2

ಇಂದು ನಡೆದ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ನೂತನ ಮೇಯರ್ ಆಗಿ ಆಯ್ಕೆಯಾದ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಇದುವರಿಗೆ ಪಾಲಿಕೆ ಸದಸ್ಯ ಮಾತ್ರ ಆಗಿದ್ದೆ. ಈಗ ಮೇಯರ್ ಆಗಿದ್ದೇನೆ. ಜವಾಬ್ದಾರಿ ಹೆಚ್ಚಿದೆ. ಪಕ್ಷ ಕೊಟ್ಟಂತಹ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತೇನೆ. ನನಗೆ ಒಂದು ವರ್ಷ ಅವಧಿ ಇದೆ. ಈ ಅವಧಿಯಲ್ಲಿ ಎಷ್ಟು ಕೆಲಸ ಮಾಡು ಸಾಧ್ಯವಿದೆಯೋ ಅಷ್ಟು ಮಾಡುತ್ತೇನೆ. ಹೀಗಾಗಿ ಸಭೆ, ಸಮಾರಂಭಕ್ಕೆ ಕರೆಯದೇ ಕೆಲಸವಿದ್ರೆ ಕರೆಯಿರಿ ಎಂದರು.

mayor ajayakumara 4

ಬಿಜೆಪಿ ದೊಡ್ಡ ಪಕ್ಷ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮುನ್ನೆಡೆಯುತ್ತಿದೆ. ನಾವು ಅವರ ಸಮನಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಅವರ ಮಾರ್ಗದರ್ಶನದಲ್ಲಿ ಪ್ರಮಾಣಿಕವಾಗಿ ಕೆಲಸ ಮಾಡುತ್ತೇನೆ. ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯನ್ನುಸಂಪೂರ್ಣಗೊಳಿಸುವ ಗುರಿ ಹೊಂದಿದ್ದೇನೆ ಎಂದರು.

ನಾವು ಯಾರು ಕೂಡ, ಯಾರಿಗೂ ದುಡ್ಡು ಕೊಟ್ಟಿಲ್ಲ. ಅಪಹರಣ ಮಾಡಿಲ್ಲ. ವಿರೋಧ ಪಕ್ಷದ ಸೋತದಾಗ ಆರೋಪ ಮಾಡುವುದು ಸಹಜ. ಹೀಗಾಗಿ ಕಾಂಗ್ರೆಸ್ ಆರೋಪ ಮಾಡಿದೆ. ಅವರ ಆರೋಪದಲ್ಲಿ  ಹುರುಳಿಲ್ಲ. ಅವರಿಗೆ ಕಾನೂನಾತ್ಮಕವಾಗಿ ಹೋರಾಟ ಮಾಡಲು ಅವಕಾಶವಿದೆ ಎಂದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top