ಡಿವಿಜಿ ಸುದ್ದಿ, ರಾಯಚೂರು: ರೇಪ್ ಇನ್ ಇಂಡಿಯಾ ಎಂದಿರುವ ರಾಹುಲ್ ಗಾಂಧಿ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ಧಾರೆ. ಅವರು ಪಾರ್ಟ್ ಟೈಮ್ ರಾಜಕಾರಣಿಯಾತಾಗಿದ್ದು, ಅವರ ಬಗ್ಗೆ ಕನಿಕರ ಮೂಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದರು.
ರಾಯರ ಮಠದಲ್ಲಿ ಶನಿವಾರದಿಂದ ಆರಂಭವಾದ ಸುಧಾ ಮಂಗಳಮಹೋತ್ಸವ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ನಾಯಕ ರಾಹುಲ್ಗಾಂಧಿಗೆ ಬುದ್ಧಿಭ್ರಮಣೆಯಾಗಿದ್ದು, ಮಹಿಳೆಯರ ಮೇಲೆ ನಡೆದ ದೌರ್ಜನ್ಯವನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿಲ್ಲ. ರೇಪ್ ಇನ್ ಇಂಡಿಯಾ ಹೇಳಿಕೆ ರಾಹುಲ್ ಗಾಂಧಿ ಮನೋ ಸ್ಥಿತಿ ಬಯಲು ಮಾಡುತ್ತದೆ ಎಂದರು.
ವಲಸೆ ಬಂದವರನ್ನು ದೇಶದ ನಾಗರಿಕರು ಎಂದು ಪರಿಗಣಿಸುವುದು ಪೌರತ್ವ ಮಸೂದೆ ಜಾರಿಯ ಉದ್ದೇಶ. ಆದರೆ, ಕಾಂಗ್ರೆಸ್ ಅನಗತ್ಯವಾಗಿ ಗೊಂದಲ ಮೂಡಿದೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪೌರತ್ವ ಮಸೂದೆ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದ್ರು.



