ಹೊಸದಿಲ್ಲಿ: ನೇರ ನುಡಿಗಳಿಂದಲೇ ರಾಷ್ಟ್ರ ರಾಜಕಾರಣದಲ್ಲಿ ಹೆಸರು ವಿಭಿನ್ನ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ, ಪೌರತ್ವ ಕಾಯ್ದೆ ವಿರುದ್ಧ ತಮ್ಮದೇ ಸರಕಾರದ ವಿರುದ್ಧ ಗುಡುಗಿದ್ದಾರೆ.
ಭಾರತದಲ್ಲಿ ಜನಿಸಿದರೂ ಎಂಬ ಕಾರಣಕ್ಕಾಗಿ ಪಾಕಿಸ್ತಾನ ಮಾಜಿ ಪ್ರಧಾನಿ ಪರ್ವೇಜ್ ಮುಷರಫ್ ಗೆ ಭಾರತೀಯ ಪೌರತ್ವ ಕೊಡೋಣವೇ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
We can give Musharraf fast track citizenship since he is from Daryaganj and suffering persecution. All self—acknowledged descendants of Hindus are qualified in a new CAA to come
— Subramanian Swamy (@Swamy39) December 19, 2019
ದುಬೈಯಲ್ಲಿ ನಲೆಸಿರುವ ಪರ್ವೇಜ್ ಮುಷರ್ರಫ್ ದೇಶದ್ರೋಹ ಆರೋಪದಡ ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ. ಹೊಸದಿಲ್ಲಿ ಸಮೀಪದ ದರಿಯಾಗಂಜ್ನಲ್ಲಿ ಅವರು ಜನಿಸಿದ್ದರು. ಅವರು ತೊಂದರೆ ಅನುಭವಿಸುತ್ತಿದ್ದಾರೆ. ಅವರಿಗೆ ಭಾರತೀಯ ಪೌರತ್ವ ನೀಡಿದ್ರೆ ಹೇಗೆ ಎಂದು ಸುಬ್ರಮಣಿಯನ್ ಸ್ವಾಮಿ ಕೇಂದ್ರ ಸರ್ಕಾರವನ್ನು ಕೇಳಿದ್ದಾರೆ.



