ಡಿವಿಜಿ ಸುದ್ದಿ, ಹಿರೇಕೆರೂರು: ಚುನಾವಣೆಯಲ್ಲಿ ನನ್ನ ಮತ್ತು ಯು.ಬಿ. ಬಣಕಾರ್ ನಡುವೆ ಬಿರುಕು ತರಲು ಕೆಲವು ಕಿಡಿಗೇಡಿಗಳು ಯತ್ನಿಸುತ್ತಿದ್ದಾರೆ. ಇದರಲ್ಲಿ ಅವರು ಯಶಸ್ಸು ಕಾಣುವುದಿಲ್ಲ. ಕುತಂತ್ರದಿಂದ ಕಿಡಿ ಹಚ್ಚುವ ಕೆಲಸ ಆಗುವುದಿಲ್ಲ ಎಂದು ಹಿರೇಕೆರೂರು ಬಿಜೆಪಿ ಅಭ್ಯರ್ಥಿ ಬಿ.ಸಿ. ಪಾಟೀಲ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಈಗಾಗಲೇ ಪ್ರತಿ ಗ್ರಾಮದಲ್ಲಿ ಚುನಾವಣೆ ಪ್ರಚಾರ ಮಾಡಿದ್ದೇವೆ. ಉತ್ತಮ ಬೆಂಬಲ ಸಿಕ್ಕಿದೆ. ಕೆಲವು ಕಿಡಗೇಡಿಗಳು ನನ್ನ ಬಣಕಾರ ನಡುವೆ ಬಿರುಕು ತರಲು ಪ್ರಯತ್ನ ಮಾಡಿದ್ದಾರೆ. ಆದರೆ, ಅದರಲ್ಲಿ ಅವರು ಯಶಸ್ವಿಯಾಗಿಲ್ಲ. ಈ ಚುನಾವಣೆಯಲ್ಲಿ ನನಗಿಂತ ಹೆಚ್ಚಾಗಿ ಬಣಕಾರ ಕೆಲಸ ಮಾಡಿದ್ದಾರೆ. ಕುತಂತ್ರದಿಂದ ಕಿಡಿ ಹಚ್ಚುವ ಪ್ರಯತ್ನ ಆಗುವುದಿಲ್ಲ ಎಂದರು.
ಕಾರ್ಯಕರ್ತರು ಪ್ರತಿ ಭೂತ ಮಟ್ಟದಲ್ಲಿ ಕೆಲಸ ಮಾಡಬೇಕು.ಬಿಜೆಪಿಗೆ ಮತ ಹಾಕಿಸುವ ಕೆಲಸ ಕಾರ್ಯಕರ್ತರು ಮಾಡಬೇಕು ಕರೆ ನೀಡಿದರು.



