ಕವಿತೆ-ನಾವು ಭಾರತೀಯರು

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ಪ್ರಾಂತ್ಯ, ಭಾಷೆ, ವೇಷಗಳು ಹಲವಿದ್ದರೇನು

ಪ್ರೀತಿ ಸ್ನೇಹ ಸಹಬಾಳ್ವೆಯ ನೆಲವೊಂದೇ
ಜಾತಿ ಮತ ಧರ್ಮಗಳು ಹಲವಿದ್ದರೇನು
ಜಾತ್ಯತೀತ ಮನೋಭಾವದೊಲವೊಂದೇ.

ಭಾರತೀಯರ ಒಗ್ಗಟ್ಟಿನ ಜೇನುಗೂಡಿಗೆ
ಪರಕೀಯರ ವಕ್ರದೃಷ್ಟಿಯ ಕಲ್ಲು ಬಿದ್ದಿತು
ಬ್ರೀಟಿಷರ ಹೊಡೆದಾಳುವ ಕುತಂತ್ರ ನೀತಿಗೆ
ಭಾರತೀಯರ ಐಕ್ಯತೆಯು ಚೂರಾಯಿತು.

india flag

ಪ್ಲಾಸಿ ಕದನದ ತರುವಾಯ ಭಾರತ ದೇಶ
ಪರಂಗಿಗಳ ದಾಸ್ಯ ಸಂಕೋಲೆಗೆ ಸಿಲುಕಿತು
ಚೆನ್ನಮ್ಮ, ಲಕ್ಷ್ಮೀ, ತಾತ್ಯಾ, ಪಾಂಡೆಯರೆಲ್ಲ
ಹೋರಾಟ ಸ್ವಾತಂತ್ರ್ಯ ಕಹಳೆ ಮೊಳಗಿಸಿತು.

ರಾನಡೆ, ನವರೋಜಿ, ಬ್ಯಾನರ್ಜಿ, ಗೋಖಲೆಯರಪ್ರಾರ್ಥನೆ, ಬಿನ್ನಹ, ಪ್ರತಿಭಟನೆ ನೀತಿ ತಂತ್ರ

ಲಾಲ್, ಪಾಲ್, ಬಾಲರ ಸ್ವರಾಜ್ಯ ನಮ್ಮ ಆಜನ್ಮಸಿದ್ಧ ಹಕ್ಕೆಂಬ ದೇಶಾಭಿಮಾನದ ತಾರಕ ಮಂತ್ರ.

ಭಗತ್, ಅಜಾದ್, ಸುಭಾಷ್, ಪಟೇಲ್, ಸಾವರ್ಕರ್
ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟದ ಫಲವು
ಲಕ್ಷಾಂತರ ದೇಶಭಕ್ತರ ತ್ಯಾಗ ಬಲಿದಾನದಿಂದಲೇ
ಭಾರತಾಂಬೆಯ ಮಕ್ಕಳಿಗೆ ದೊರಕಿತು ಸ್ವಾತಂತ್ರ್ಯವು.

ನಡುರಾತ್ರಿ ದೊರೆತ ಸ್ವಾತಂತ್ರ್ಯವ ನಡುಬೀದಿಗೆ ತರದೆ
ಭಾರತಾಂಬೆಯ ಮಡಿಲಲ್ಲಿ ಕೂಡಿಕೊಂಡು ಬಾಳುವ
ರಾಷ್ಟ್ರ ಸಂವಿಧಾನದ ಆಶೋತ್ತರಗಳ ಚಾಚು ತಪ್ಪದೆ
ಪಾಲಿಸಿಕೊಂಡು ನಾವು ಭಾರತೀಯರೆಲ್ಲ ಒಂದೆನ್ನುವ.

-ಶಿವಮೂರ್ತಿ.ಹೆಚ್. ಕನ್ನಡ ಶಿಕ್ಷಕರು
ಶ್ರೀ ತರಳಬಾಳು ಜಗದ್ಗುರು ರೆಸಿಡೆನ್ಸಿಯಲ್ ಸ್ಕೂಲ್
ಅನುಭವಮಂಟಪ, ದಾವಣಗೆರೆ.
ದೂ.ಸಂ.9740050150.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *