ನವದೆಹಲಿ: ನಿರ್ಭಯಾ ಅತ್ಯಾಚಾರಿಗಳಿಗೆ ಮಾರ್ಚ್ 3ರಂದು ಬೆಳಗ್ಗೆ 6 ಗಂಟೆಗೆ ಗಲ್ಲಿಗೇರಿಸುವಂತೆ ದೆಹಲಿ ನ್ಯಾಯಾಲ ವಾರಂಟ್ ಜಾರಿ ಮಾಡಿದೆ.
ಮರಣ ದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸುವಂತೆ ಕೋರಿ ನಾಲ್ವರು ಅಪರಾಧಿಗಳ ಪೈಕಿ ವಿನಯ್ ರಾಷ್ಟ್ರಪತಿ ಮುಂದೆ ಕ್ಷಮಾದಾನ ಅರ್ಜಿ ಸಲ್ಲಿಸಿದ್, ರಾಷ್ಟ್ರಪತಿಗಳು ಈ ಅರ್ಜಿ ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ವಿನಯ್ ನ್ಯಾಯಾಲಯದ ಮೊರೆ ಹೋಗಿದ್ದ, ಇದೀಗ ಕೋರ್ಟ್ ಅಪರಾಧಿಗಳಾದ ಪವನ್ ಗುಪ್ತಾ (25), ವಿನಯ ಕುಮಾರ್ ಶರ್ಮಾ(26),ಅಕ್ಷಯ್ ಕುಮಾರ್(31) ಮತ್ತು ಮುಕೇಶ್ ಕುಮಾರ್ ಸಿಂಗ್ಗೆ (32) ಮಾ.2 ರಂದು ಗಲ್ಲಿಗೆ ಹಾಕುವಂತೆ ಆದೇಶಿಸಿದೆ.
ಇದಕ್ಕೂ ಮೊದಲು ಜನವರಿ 22ರಂದು ಗಲ್ಲು ಶಿಕ್ಷೆ ವಿಧಿಸುವಂತೆ ವಾರಂಟ್ ಜಾರಿಗೊಳಿಸಲಾಗಿತ್ತು. ಅನ್ನು ಫೆಬ್ರುವರಿ 1ಕ್ಕೆ ಮುಂದೂಡಲಾಗಿತ್ತು. ಇದೀಗ ದೆಹಲಿ ನ್ಯಾಯಾಲಯ ನಾಲ್ವರು ಅಪರಾಧಿಗಳಿಗೆ ಗಲ್ಲಿಗೇರಿಸಬೇಕು ಎಂದು ಹೊಸ ವಾರೆಂಟ್ ಹೊರಡಿಸಿದೆ.ಅಪರಾಧಿಗಳು ತಿಹಾರ್ ಜೈಲಿನಲ್ಲಿದ್ದಾರೆ.