Connect with us

Dvgsuddi Kannada | online news portal | Kannada news online

ಚನ್ನಗಿರಿ: ಲೋಕಾಯುಕ್ತ ಅಧಿಕಾರಿಗಳಿಂದ ಕೆರೆ ಒತ್ತುವರಿ ವೀಕ್ಷಣೆ

ಚನ್ನಗಿರಿ

ಚನ್ನಗಿರಿ: ಲೋಕಾಯುಕ್ತ ಅಧಿಕಾರಿಗಳಿಂದ ಕೆರೆ ಒತ್ತುವರಿ ವೀಕ್ಷಣೆ

ಡಿವಿಜಿ ಸುದ್ದಿ, ಚನ್ನಗಿರಿ:  ತಾಲ್ಲೂಕಿನ ಕೆರೆ ಒತ್ತುವರಿ ವೀಕ್ಷಣೆಯನ್ನು ದಾವಣಗೆರೆ ಲೋಕಾಯುಕ್ತ ಡಿವೈಎಸ್ಪಿ ಜಿ.ಸಿ. ರವಿಕುಮಾರ್ ನೇತೃತ್ವದಲ್ಲಿ ನಡೆಸಲಾಯಿತು.

ತಾಲೂಕಿನ ಕೋಗಲೂರು, ಬೆಳ್ಳಿಗನೂಡು, ಮೆದಿಕೆರೆ, ಸೂಳೆಕೆರೆ, ಈರಗನಹಳ್ಳಿ, ಕೆಂಪನಹಳ್ಳಿ ಗ್ರಾಮಗಳ ಕೆರೆಗಳನ್ನು ಒತ್ತುವರಿ ವೀಕ್ಷಿಸಿದರು.  ಭದ್ರನಾಲ ಉಪವಿಭಾಗದ ಸಹಾಯಕ ಕಾರ್ಯಪಾಲಕ ಜಿಎಂ ಗುಡ್ಡಪ್ಪ  ಮಾರ್ಗದರ್ಶನದಲ್ಲಿ ದಾವಣಗೆರೆ ಲೋಕಾಯುಕ್ತ ಡಿವೈಎಸ್ಪಿ  ಜಿಸಿ.ರವಿಕುಮಾರ್ , ನಿರೀಕ್ಷಕರಾದ ಟಿಎಸ್ ಮುರುಘೇಶ್ ರವರ ತಂಡವು ಕೆರೆಗಳನ್ನು ಪರಿವೀಕ್ಷಣೆ ನಡೆಸಿದರು. ಸಹಾಯಕ ಇಂಜೀನಿಯರುಗಳಾದ ಹೆಚ್ ತಿಪ್ಪೇಸ್ವಾಮಿ , ವಿಜಯಕುಮಾರ್ ತೇತಂಬಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

channagiri lake 2

ತಾಲೂಕಿನಲ್ಲಿ ಕೋಗಲೂರು ಕೆರೆಗೆ ಸಂಬಂದಿಸಿದಂತೆ ಒತ್ತುವರಿಯಾಗಿರುವ ಜಮೀನಿನ ಬಗ್ಗೆ ದಾಖಲೆಗಳು ಗ್ರಾಮಸ್ಥರುಗಳಲ್ಲಿ ಲಭ್ಯವಿದ್ದು,  ಉಳಿದಂತೆ ಕೆರೆಗಳ ಸ್ಕೆಚ್ ಇನ್ನಿತರೆ ದಾಖಲೆಗಳು ಭದ್ರನಾಲ ಉಪವಿಭಾಗಧಿಕಾರಿಗಳ ಕಚೇರಿ ದಾಖಲೆಗಳು ಅಸ್ಪಷ್ಟವಾಗಿದ್ದು ಮುಂದಿನ ದಿನಗಳಲ್ಲಿ ಸಂಪೂರ್ಣ ದಾಖಲಾತಿಗಳನ್ನು ಪಡೆದು ಒತ್ತುವರಿಯಾಗಿರುವ ಕೆರೆಗಳನ್ನು ತೆರವುಗೊಳಿಸುವ ಕಾರ್ಯವನ್ನು ಲೋಕಾಯುಕ್ತ ಇಲಾಖೆ ನಡೆಸಲಿದೆ ಎಂದು ಲೋಕಾಯುಕ್ತ ಡಿವೈಎಸ್ಪಿ ಜಿ.ಸಿ. ರವಿಕುಮಾರ್ ತಿಳಿಸಿದರು.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಚನ್ನಗಿರಿ

ದಾವಣಗೆರೆ

Advertisement
Advertisement Enter ad code here

Title

To Top