Connect with us

Dvgsuddi Kannada | online news portal | Kannada news online

ಬೆಂಗಳೂರಲ್ಲಿ ಒಂದು ತಿಂಗಳು ವರೆಗೂ ಲಾಕ್ ಡೌನ್ ಮುಂದುವರೆಯುತ್ತಾ..?

ಪ್ರಮುಖ ಸುದ್ದಿ

ಬೆಂಗಳೂರಲ್ಲಿ ಒಂದು ತಿಂಗಳು ವರೆಗೂ ಲಾಕ್ ಡೌನ್ ಮುಂದುವರೆಯುತ್ತಾ..?

ಡಿವಿಜಿ ಸುದ್ದಿ, ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಈಗಾಗಲೇ ಮಂಗಳವಾರದಿಂದ ಒಂದು ವಾರ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಇದೀಗ ಈ ಲಾಕ್ ಡೌನ್ ಒಂದು ತಿಂಗಳ ವರೆಗೂ ಮುಂದುವರೆಯುತ್ತಾ ಅನ್ನೋ ಅನುಮಾನವ ಮೂಡಿದೆ.

ಈ ಅನುಮಾನಕ್ಕೆ ಷುಷ್ಟಿಕರಿಸುಂತೆ ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿದ್ದು , ಸದ್ಯಕ್ಕೆ ಒಂದು ವಾರ ಲಾಕ್ ಡೌನ್ ಹೇರಲಾಗಿದೆ. ಮುಂದೆ ಪರಿಸ್ಥಿತಿ ನೋಡಿಕೊಂಡು ಲಾಕ್ ಡೌನ್ ಮಾಡಬೇಕಾ.‌ ಬೇಡವಾ ಅನ್ನೋ ಬಗ್ಗೆ ಚಿಂತನೆ ನಡೆಸಲಾಗುವುದು ಅಂತಾ ಹೇಳಿದ್ದಾರೆ. ಇದಲ್ಲದೇ ಬೆಂಗಳೂರು ಬಿಟ್ಟು ಹೋಗುವವರು ಸೋಮವಾರವೇ ಹೋಗಿಬಿಡಿ. ಇನ್ನು ಅಗತ್ಯ ವಸ್ತುಗಳನ್ನು ಸೋಮವಾರವೇ ಕೊಂಡುಕೊಂಡಕೊಳ್ಳಿ ಎಂದಿದ್ದಾರೆ.

ಜನರು ಬೆಂಗಳೂರಿಂದ ಹೋಗುವುದು, ಬರುವಂತಿಲ್ಲ ಮಾಡುವಂತಲ್ಲ. ಪರಿಸ್ಥಿತಿ ಯಾವ ಹಂತಕ್ಕೆ ಹೋಗುತ್ತೋ ಗೊತ್ತಿಲ್ಲ. ಹೀಗಾಗಿ ಕಳೆದ ಸಲ ಎಲ್ಲಿ ಇದ್ದರೂ ಅಲ್ಲೇ ಲಾಕ್ ಆಗಿದ್ದರೂ, ಆದರೆ ಈಗ ಒಂದು ಎರಡು ದಿನ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಬೆಂಗಳೂರು ಬಿಟ್ಟು ಹೋಗುವರು ಸೋಮವಾರವೇ ಹೋಗಿ ಬಿಡಿ ಎಂದಿದ್ದಾರೆ. ಇದರಿಂದ ಲಾಕ್ ಡೌನ್ ಒಂದು ವಾರಕ್ಕೆ ನಿಯಂತ್ರಣಕ್ಕೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಒಂದು ತಿಂಗಳ ವರೆಗೂ ವಿಸ್ತರಣೆ ಆದರೂ ಅಚ್ಚರಿ ಪಡಬೇಕಿಲ್ಲ.

ಈ ಬಾರಿಯ ಕಠಿಣ ಲಾಕ್ ಡೌನ್
ಇನ್ನು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾತನಾಡಿ, ಈ ಬಾರಿಯ ಲಾಕ್ ಡೌನ್ ನಿಯಮ ಸಡಿಲ ಇರಲ್ಲ. ಕಟ್ಟುನಿಟ್ಟಾಗಿ ಆದೇಶ ಪಾಲಿಸುವಂತೆ ಸೂಚನೆ ನೀಡಿದ್ದಾರೆ. ಜನರು ಸಹ ಸರ್ಕಾರದ ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top