ಡಿವಿಜಿ ಸುದ್ದಿ, ಕೂಡ್ಲಿಗಿ: ತಾಲೂಕಿನ ಶಿವಪುರ ಗೊಲ್ಲರಹಟ್ಟಿ ಗ್ರಾಮದಲ್ಲಿ ನೈಮ೯ಲ್ಯ ಕೊರತೆಯಿಂದ ಡೆಂಗ್ಯೂ, ಮೆಲೇರಿಯಾ, ಟೈಫಾಯಿಡ್ ಹರಡುವ ಭೀತಿ ಉಂಟಾಗಿದೆ.

ಗ್ರಾಮದಲ್ಲಿ ರಸ್ತೆಗಳು ಕಾಲುವೆಗಳಾಗಿ ಮಾಪ೯ಟ್ಟಿದ್ದು, ಕಾಲುವೆಗಳು ಮುಚ್ಚಿ ಕಸದ ತಿಪ್ಪೆಗಳಾಗಿ ನಾರುತ್ತಿವೆ. ಕಾಲುವೆಗಳಲ್ಲಿ ಕಸ ತುಂಬಿ ವಷ೯ಗಳೇ ಕಳೆದರೂ ಕಸ ತಗೆದಿಲ್ಲ. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೊಣಕಾಲುದ್ದ ಗುಂಡಿಗಳಿದ್ದು ತ್ಯಾಜ್ಯ ನೀರು ನಿಂತು ಸೊಳ್ಳೆ, ಕ್ರಿಮಿ ಕೀಟಗಳು ವಾಸ ಸ್ಥಳವಾಗಿದೆ. ಇದರಿಂದ ಗ್ರಾಮದಲ್ಲಿ ಸಾಂಕ್ರಾಮಿಕ ರೋಗ ಹರಡುತ್ತಿದೆ.

ಈಗಾಗಲೇ ಗ್ರಾಮವನ್ನು ಹತ್ತಾರು ಗ್ರಾಮಸ್ಥರು ಕೂಡ್ಲಿಗಿ, ಹೊಸಪೇಟೆ, ಬಳ್ಳಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಇದುವರೆಗೂ ಸೌಜನ್ಯಕ್ಕೂ ಭೇಟಿ ನೀಡಿಲ್ಲ. ಅಧಿಕಾರಿಗಳ ನಿಲ೯ಕ್ಷ್ಯ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಗ್ರಾಮ ಪಂಚಾಯ್ತಿ, ತಾಲೂಕು ಕಾಯ೯ನಿವ೯ಣಾಧಿಕಾರಿಗಳು ಗ್ರಾಮಕ್ಕೆ ಖುದ್ದು ಭೇಟಿ ನೀಡಿ ನೈಮ೯ಲ್ಯ ವಾತಾವರಣ ಕಲ್ಪಿಸಲು ಕ್ರಮ ಜರುಗಿಸಬೇಕಿದೆ. ಇಲ್ಲವಾದಲ್ಲಿ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳಲ್ಲಿ ದೂರು ನೀಡಲಾಗುವುದೆಂದು ಗ್ರಾಮಸ್ಥರು ಶಿವಪುರ ಗೊಲ್ಲೆಹಟ್ಟಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.



