Connect with us

Dvgsuddi Kannada | online news portal | Kannada news online

ಬರದ ನಾಡು ಹರಪನಹಳ್ಳಿಯಲ್ಲಿ ವರುಣನ ಅಬ್ಬರ

ದಾವಣಗೆರೆ

ಬರದ ನಾಡು ಹರಪನಹಳ್ಳಿಯಲ್ಲಿ ವರುಣನ ಅಬ್ಬರ

ಡಿವಿಜಿ ಸುದ್ದಿ , ಹರಪನಹಳ್ಳಿ: ಬರದ ನಾಡು ಹರಪನಹಳ್ಳಿಯಲ್ಲಿ ಮಳೆಯ ಅಬ್ಬರ ಜನ ಜೀವನ ತತ್ತರಿಸಿ ಹೋಗಿದೆ. ತಾಲೂಕಿನಾದ್ಯಾಂತ ಸೋಮವಾರ ಸಂಜೆಯಿಂದ ಇಡೀ  ರಾತ್ರಿ ಸುರಿದ ಧಾರಕಾರ ಮಳೆಗೆ ಭತ್ತ, ಈರುಳ್ಳಿ ಸೇರಿದಂತೆ ನೂರಾರು ಎಕರೆ ಬೆಳೆ ಜಲಾವೃತಗೊಂಡಿವೆ. ಸಿಡಿಲು ಬಡಿದು 1 ಆಕಳು, 2 ಕುರಿಗಳು ಬಲಿಯಾಗಿವೆ. ಹಲವು ಕೆರೆಗಳು ಕೋಡಿ ಬಿದ್ದ ಹರಿಯುತ್ತಿದ್ದು, 200 ಕ್ಕೂ ಹೆಚ್ಚು ಮನೆಗಳು ಧರೆಗುರುಳಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.

harapanhalli rain dvgsuddi 2

ಯಡಿಹಳ್ಳಿ ಗ್ರಾಮದಲ್ಲಿ 2, ದ್ಯಾಪನಾಯಕನಹಳ್ಳಿ- ಬೆಣ್ಣೆಹಳ್ಳಿ ಗ್ರಾಮದ ೪ ಮನೆಗಳಿಗೆ ನೀರು ನುಗ್ಗಿ ಆಹಾರ ಧಾನ್ಯಗಳೆಲ್ಲಾ ನೀರು ಪಾಲಾಗಿವೆ. ಚಿಗಟೇರಿ ಹೋಬಳಿಯಲ್ಲಿ ಅತೀ ಹೆಚ್ಚು ಈರುಳ್ಳಿ ಬೆಳೆ ನೀರು ಪಾಲಾಗಿದೆ. ಲೋಕೇಶ್ವರ ಗ್ರಾಮದಲ್ಲಿಈಶಪ್ಪ ಎಂಬುವವರ ಈರುಳ್ಳಿ ಬೆಳೆ ಹಗರಿಹಳ್ಳದ ನೀರಿಗೆ ಕೊಚ್ಚಿ ಹೋಗಿದೆ.

harapanhalli rain dvgsuddi 3

ತೆಲಿಗಿ, ಚಿಗಟೇರಿ, ಹರಪನಹಳ್ಳಿ ಕಸಬಾ ಹೋಬಳಿಯಲ್ಲಿ ಈರುಳ್ಳಿ 66 ಹೆಕ್ಟರ್ ಮತ್ತು ಟಮೋಟೊ20 ಹೆಕ್ಟರ್ ಬೆಳೆ ಹಾನಿಯಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ತಾಲ್ಲೂಕಿನಾದ್ಯಂತ  ಒಟ್ಟು 248 ಕ್ಕೂ ಮನೆಗಳು ಭಾಗಶಃ ಹಾನಿಯಾಗಿವೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top