ನೀರಿನಲ್ಲಿ ಎತ್ತಿನಗಾಡಿ ಮುಳುಗಿ ಎತ್ತು ಸಾವು

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ಡಿವಿಜಿ ಸುದ್ದಿ,ಹರಪನಹಳ್ಳಿ: ಹೊಲದಲ್ಲಿ ಕೆಲಸ ಮುಗಿಸಿ ದಣಿದ ಎತ್ತುಗಳನ್ನು ನೀರು ಕುಡಿಸಲು ತೆರಳಿದ್ದ ವೇಳೆ ಎತ್ತಿನ ಗಾಡಿ ಗೋಕಟ್ಟೆಯಲ್ಲಿ ಮುಳುಗಿ ಎತ್ತು ಮೃತಪಟ್ಟಿರುವ ಘಟನೆ ತಾಲೂಕಿನ ಉಚ್ಚಂಗಿದುರ್ಗ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಗ್ರಾಮದ ಹುಚ್ಚೆಂಗೆಪ್ಪ ಎಂಬುವವರ ಮೃತಪಟ್ಟ ಎತ್ತು ಎಂದು ತಿಳಿದು ಬಂದಿದೆ. ಸುಗ್ಗಿಯ ಕಾಲವಾಗಿದ್ದರಿಂದ ಹುಚ್ಚೆಂಗೆಪ್ಪ ಹೊಲದಲ್ಲಿನ ಪೈರನ್ನು ಎತ್ತಿನಗಾಡಿಯಲ್ಲಿ ಕಣಕ್ಕೆ ಸಾಗಿಸಿದ್ದಾರೆ. ಬಿಸಿಲು ದಗೆಯಿಂದ ಬಸವಳಿದ ಎತ್ತುಗಳನ್ನು ಗಾಡಿ ಸಹಿತ ನೀರು ಕುಡಿಸಲು ಗೋಕಟ್ಟೆಗೆ ತೆರಳಿದ್ದಾರೆ. ದಣಿದ ಎತ್ತುಗಳು ರಭಸವಾಗಿ ನೀರು ಕುಡಿಯಲು ಗೋಕಟ್ಟೆಗೆ ನುಗ್ಗಿದ್ದರಿಂದ ನಿಯಂತ್ರಣ ಸಿಗದೆ ಎತ್ತುಗಳು ಸಹಿತ ನೀರಲ್ಲಿ ನುಗ್ಗಿದೆ. ಒಂದು ಎತ್ತು ನೀರಿನಿಂದ ಹೂರಗಡೆ ಬಂದಿದ್ದು, ಮತ್ತೊಂದು ಎತ್ತು ಗಡಿಯ ಅಡಿಯಲ್ಲಿ ಸಿಲುಕಿ ಮೃತಪಟ್ಟಿದೆ. ಗಾಡಿಯಲ್ಲಿದ್ದ ರೈತ ಹುಚ್ಚೆಂಗೆಪ್ಪ ಹಾಗೂ ಅವರ ಮಗ ಈಜಿಕೊಂಡು ದಡಸೇರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *