Connect with us

Dvgsuddi Kannada | online news portal | Kannada news online

ಅನಿಲ ಸಿಲಿಂಡರ್ ಅಗ್ನಿ ಅವಘಡ ಪರಿಹಾರ ಪಡೆಯಲು ಏನು ಮಾಡಬೇಕು..?

ಪ್ರಮುಖ ಸುದ್ದಿ

ಅನಿಲ ಸಿಲಿಂಡರ್ ಅಗ್ನಿ ಅವಘಡ ಪರಿಹಾರ ಪಡೆಯಲು ಏನು ಮಾಡಬೇಕು..?

ಡಿವಿಜಿ ಸುದ್ದಿ, ದಾವಣಗೆರೆ: ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಡುಗೆ ಅನಿಲ ಸಿಲಿಂಡರ್ ಅವಘಡ ಪರಿಹಾರಕ್ಕೆ ನೀಡಲು ಸರ್ಕಾರ  ಅಗ್ನಿ ಸುರಕ್ಷಾ ಯೋಜನೆ ಜಾರಿಗೆ ತಂದಿದೆ. ಈ ಯೋಜನೆ ಮೂಲಕ ಅರ್ಜಿ ಸಲ್ಲಿಸಿದ್ದಲ್ಲಿ 5 ಲಕ್ಷದ ವರಗೆ  ಪರಿಹಾರ ನೀಡಲಾಗುವುದು.

ಈ ಯೋಜನೆ ಅನಿಲ ಸಂಪರ್ಕ ಹೊಂದಿರುವ ಪಡಿತರ ಚೀಟಿದಾರರಿಗೆ ತಲುಪಲು ಈಗಾಗಲೇ ಎಲ್ಲಾ ಜಿಲ್ಲೆಯ ಉಪನಿರ್ದೇಶಕರು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಗೆ ಅಗತ್ಯ ಕ್ರಮ ತೆಗೆದುಕೊಂಡಿದ್ದು, ನ್ಯಾಯ ಬೆಲೆ ಅಂಗಡಿದಾರರು ಅರ್ಜಿಗಳನ್ನು ಪಡೆಯಲು ಕಾರ್ಯ ಪ್ರವೃತ್ತರಾಗುತ್ತಿದ್ದಾರೆ.

ಅರ್ಜಿ ಸಲ್ಲಿಸಿದ ಪಡಿತರ ಚೀಟಿದಾರರಿಗೆ ಅಗ್ನಿ ಸುರಕ್ಷ ಯೋಜನೆಯ ಗುರುತಿನ ಪತ್ರ ನೀಡಲಾಗುವುದರಿಂದ ಎಲ್ಲಾ ಪಡಿತರ ಚೀಟಿದಾರರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿದಾರರ ಹತ್ತಿರ ನಿಯಮಾನುಸಾರ ಅರ್ಜಿ ಸಲ್ಲಿಸುವಂತೆ ತಿಳಿಸಲಾಗಿದೆ.

ಅಗ್ನಿ ಸುರಕ್ಷ ಯೋಜನೆಯ ಸೇವೆಗಳು: ಅಗ್ನಿ ಸುರಕ್ಷ ಯೋಜನೆ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಕಾರ್ಯ ನಿರ್ವಹಿಸುತ್ತಿದೆ. ಅಡುಗೆ ಅನಿಲ ಸಿಲಿಂಡರ್ ಮೂಲಕ ಅಗ್ನಿ ಅವಘಡಗಳು ಸಂಭವಿಸಿ ಸಾವು ನೋವಾದರೆ ಕಾನೂನು ರೀತಿಯಲ್ಲಿ ನಿಯಮಾನುಸಾರ ಪರಿಶೀಲಿಸಿ ರೂ. 5 ಲಕ್ಷ ತನಕ ಸಹಾಯಧನವನ್ನು ನೀಡಲಾಗುತ್ತದೆ.

ಮನೆಯಲ್ಲಿ ಉಪಯೋಗಿಸುವ ಅಡುಗೆ ಅನಿಲ ಸಿಲಿಂಡರ್, ಒಲೆ ಮತ್ತು ರೆಗ್ಯೂಲೇಟರ್‍ಗಳನ್ನು ಪರೀಕ್ಷಿಸಿ ಬದಲಾಯಿಸಬೇಕಾದ ವಸ್ತುಗಳ ಬಗ್ಗೆ ಗ್ಯಾಸ್ ವಿತರಕರಿಗೆ ಮಾಹಿತಿ ನೀಡಲಾಗುತ್ತದೆ.

ಅಗ್ನಿ ಸುರಕ್ಷ ಯೋಜನೆಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ಸ್ಥಳೀಯ ಮಟ್ಟದಲ್ಲಿ ಅಗ್ನಿ ಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೊಂದಿಗೆ ಅಗ್ನಿ ಅವಘಡಗಳಿಂದ ಆರೋಗ್ಯ, ಆರ್ಥಿಕ ಹಾಗೂ ಪರಿಸರದ ಮೇಲೆ ಆಗುತ್ತಿರುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.

ಅರ್ಜಿ ಸಲ್ಲಿಕೆ ಮಾಹಿತಿ: ನ್ಯಾಯಬೆಲೆ ಅಂಗಡಿದಾರರು ತಮ್ಮ ವ್ಯಾಪ್ತಿಯ ಕುಟುಂಬಗಳಿಂದ ಅರ್ಜಿಗಳನ್ನು ಪಡೆದ ನಂತರ ಅವರಿಗೆ ಅಗ್ನಿ ಸುರಕ್ಷ ಯೋಜನೆ ಗುರುತಿನ ಪತ್ರವನ್ನು ನೀಡಿ ಯೋಜನೆಯು ಕಾರ್ಯ ನಿರ್ವಹಿಸುತ್ತದೆ. ಗುರುತಿನ ಪತ್ರ ಸುರಕ್ಷಿತವಾಗಿದ್ದು, ಯಾವುದೇ ಸಮಯದಲ್ಲಿ ಬಾರ್ ಕೋಡ್ ಮತ್ತು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವುದರ ಮೂಲಕ ಯೋಜನೆಯ ಮೂಲದ ಬಗ್ಗೆ ಪರೀಕ್ಷಿಸಿಕೊಳ್ಳಬಹುದು. ಜೊತೆಗೆ ತಿತಿತಿ.ಚಿgಟಿisuಡಿಚಿಞshಚಿಥಿoರಿಚಿಟಿe.ಛಿom ಅಗ್ನಿ ಸುರಕ್ಷ ಯೋಜನೆಯ ವೆಬ್‍ಸೈಟ್ ವಿಳಾಸ ಸಂಪರ್ಕಿಸಿ ಅಗ್ನಿ ಸುರಕ್ಷ ಯೋಜನೆಯ ಸೇವೆಗಳನ್ನು ಸುಲಭವಾಗಿ ಪಡೆಯಬಹುದು.

ಅಗ್ನಿ ಸುರಕ್ಷ ಯೋಜನೆಗೆ ಸಂಬಂಧಿಸಿದಂತೆ ನ್ಯಾಯಬೆಲೆ ಅಂಗಡಿದಾರರು ತಮ್ಮ ವ್ಯಾಪ್ತಿಯ ಅಡುಗೆ ಅನಿಲ ಬಳಕೆದಾರರ ಕುಟುಂಬಕ್ಕೆ ಮಾಹಿತಿ ನೀಡಿ ಅರ್ಜಿಯನ್ನು ಭರ್ತಿ ಮಾಡಬೇಕು. ಸುರಕ್ಷ ಯೋಜನೆಯ ಗುರುತಿನ ಪತ್ರವನ್ನು ಪಡೆಯಲು ನಿಗದಿತ ಶುಲ್ಕವನ್ನು ಪ್ರತಿ ಕುಟುಂಬದವರು ತಮ್ಮ ನ್ಯಾಯ ಬೆಲೆ ಅಂಗಡಿದಾರರ ಅರ್ಜಿಯ ಜೊತೆ ಸಲ್ಲಿಸಬೇಕು. ಮತ್ತು ಸಂದಾಯ ಮಾಡಿದ ಶುಲ್ಕಕ್ಕೆ ರಶೀದಿಯನ್ನು ಪಡೆಯಬೇಕು.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top