ಡಿವಿಜಿ ಸುದ್ದಿ, ಬೆಂಗಳೂರು: ಗಾಂಜಾವನ್ನು ತುಳಸಿಗೆ ಹೋಲಿಸಿದ್ದ ನಟಿ ನಿವೇದಿತಾ ವಿರುದ್ಧ ಮಲ್ಲೇಶ್ವರಂ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಗಾಂಜಾ ಔಷಧಿ ಗುಣವುಳ್ಳ ಸಸಿ. ತುಳಸಿ ತರವೇ ಅದನ್ನು ಬಳಕೆ ಮಾಡಬೇಕು ಎಂಬುದಾಗಿ ನಟಿ ನಿವೇದಿತಾ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದರು. ಇದರಿಂದ ಸಮಾಜಕ್ಕೆ ಗಾಂಜಾ ಸೇವನೆಗೆ ಪ್ರಚೋದನೆ ನೀಡಿದ ಆರೋಪದಡಿ ನಿವೇದಿತಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಎ. ದೀಪಕ್ ಎಂಬುವರು ದೂರಿನ ಆಧಾರದ ಮೇಲೆ ಬಂಧಿಸಲಾಗಿದೆ.
ಗಾಂಜಾವನ್ನು ತುಳಸಿಗೆ ಹೋಲಿಸಿ, ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ದೀಪಕ್ ದೂರು ನೀಡಿದ್ದರು. ಈ ದೂರು ಇದೀಗ ಎಫ್ಐಆರ್ ದಾಖಲಾಗಿದೆ.