Connect with us

Dvgsuddi Kannada | online news portal | Kannada news online

ದಿನ ಭವಿಷ್ಯ

ಜ್ಯೋತಿಷ್ಯ

ದಿನ ಭವಿಷ್ಯ

ಶುಭ ಭಾನುವಾರ-ಜೂನ್-14,2020 ರಾಶಿ ಭವಿಷ್ಯ.

ಮಿಥುನ ಸಂಕ್ರಾಂತಿ
ಸೂರ್ಯೋದಯ: 05:57, ಸೂರ್ಯಸ್ತ: 18:42
ಶಾರ್ವರಿ ನಾಮ ಸಂವತ್ಸರ
ಜ್ಯೇಷ್ಠ ಮಾಸ,ಉತ್ತರಾಯಣ

ತಿಥಿ: ನವಮೀ – 27:18+ ವರೆಗೆ
ನಕ್ಷತ್ರ: ಉತ್ತರಾ ಭಾದ್ರ – 24:21+ ವರೆಗೆ
ಯೋಗ: ಆಯುಷ್ಮಾನ್ – 11:53 ವರೆಗೆ
ಕರಣ: ತೈತಲೆ – 14:07 ವರೆಗೆ ಗರಜ – 27:18+ ವರೆಗೆ

ದುರ್ಮುಹೂರ್ತ: 17:00 – 17:51

ರಾಹು ಕಾಲ: 16:30 – 18:00
ಯಮಗಂಡ: 12:00 – 13:30
ಗುಳಿಕ ಕಾಲ: 15:00 – 16:30

ಅಮೃತಕಾಲ: 18:59 – 20:46
ಅಭಿಜಿತ್ ಮುಹುರ್ತ: 11:54 – 12:45

ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.

ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಮೇಷ
ಕೃಷಿಕರಿಗೆ ಜಮೀನಿನಿಂದ ಉತ್ತಮ ಆದಾಯ. ಜಮೀನಿಗೆ ಸಂಬಂಧಿಸಿದ ಕೋರ್ಟ್ ಕೇಸ್ ಜಯವಿರುತ್ತದೆ. ಬ್ಯಾಂಕ್ ಮತ್ತು ಸಂಘ ಸಂಸ್ಥೆಗಳಿಂದ ಸಾಲ ಮಂಜೂರಾತಿ. ಸ್ವಂತ ಹಿತಾಸಕ್ತಿಯ ನಿಮ್ಮ ಗೆಲುವು. ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯೆ ಒದಗುವ ಕಾಲ. ವಿಚ್ಛೇದನದ ಮಕ್ಕಳ ಮರು ಮದುವೆ. ಚರ್ಮದ ಕಾಯಿಲೆಗಳು, ಎದೆ ನೋವು, ಮಂಡಿ ನೋವು, ಸೊಂಟ ನೋವು ತಲೆದೋರಬಹುದು. ಪಾಲುದಾರಿಕೆಯಿಂದ ಅಥವಾ ಜಾಮೀನಿಂದ ಧನನಷ್ಟ ಉಂಟಾಗಬಹುದು. ಸಂಗಾತಿಗೆ ಸರ್ಕಾರಿ ಧನ ಸಹಾಯ ನಿಮ್ಮ ಪ್ರಯತ್ನದಿಂದ ಸಿಗುತ್ತವೆ. ಇದರಿಂದ ಪ್ರೀತಿ-ವಿಶ್ವಾಸ ವೃದ್ಧಿಯಾಗುವುದು.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ವೃಷಭ
ಆತ್ಮೀಯ ಸ್ನೇಹಿತರಿಗೆ ಸಹಾಯಸ್ತ ಮಾಡುವಿರಿ.ಆದರೆ ಅತಿಯಾದ ದಾನದಿಂದ ತೊಂದರೆ. ತಂತ್ರಜ್ಞಾನದಲ್ಲಿ ಪದವಿ ಪಡೆದಿರುವ ವ್ಯಕ್ತಿಗೆ ಉತ್ತಮ ಕೆಲಸ ಒಳಿತಾಗುವುದು.ತೆರಿಗೆ ತಜ್ಞರಿಗೆ ಕೈತುಂಬಾ ಹಣ ಸಂಪಾದನೆ ಹಾಗೂ ಕೆಲಸವಿರುತ್ತದೆ. ಸಂಗಾತಿಯ ಸಂತೋಷಕ್ಕಾಗಿ ಪ್ರೇಮದ ಕಾಣಿಕೆ ನೀಡುವಿರಿ. ಪಿತ್ರಾರ್ಜಿತ ಆಸ್ತಿಗಾಗಿ ಕಾಯುತ್ತಿರುವವರಿಗೆ ಈಗ ಸಿಗುವ ಸಂದರ್ಭ ಇದೆ. ದೈವ ಕಾರ್ಯಕ್ಕಾಗಿ ಸ್ವಲ್ಪ ಸಹಾಯ ಮಾಡುವಿರಿ. ಕೃಷಿ ಪಂಡಿತರಿಗೆ ಗೌರವ ದೊರೆತು ನಿಮ್ಮಿಂದ ಸಾಕಷ್ಟು ಕೃಷಿಕರಿಗೆ ಮಾರ್ಗದರ್ಶನ ಮಾಡುವಿರಿ. ವಿಧವೆಯರ ಮರುಮದುವೆ ಚಿಂತನೆ. ಮಕ್ಕಳು ಚರ್ಮದ ಕಾಯಿಲೆ,ಉದರ ದೋಷದಿಂದ ತೊಂದರೆ ಕಾಡಲಿದೆ. ಪತಿ-ಪತ್ನಿ ಮಧ್ಯೆ ಭಿನ್ನಾಭಿಪ್ರಾಯ. ವಿಚ್ಛೇದನದ ಮನಸ್ತಾಪ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ಮಿಥುನ
ಪ್ರಾಮಾಣಿಕತೆಯ ಕೆಲಸ ನಿಮಗೆ ಕೀರ್ತಿ ತರಬಹುದು. ಆರ್ಥಿಕ ಪರಿಸ್ಥಿತಿ ಮಧ್ಯಮ ಇರುತ್ತದೆ. ಧಿಡೀರನೆ ಪ್ರೀತಿ-ಪ್ರೇಮಕ್ಕೆ ಸಿಲುಕುವಿರಿ. ವಿವಾಹಿತರಿಗೆ ಸಂಗಾತಿಯ ವೈರಾಗ್ಯ ಒಮ್ಮೊಮ್ಮೆ ಬೇಸರ ತರಬಹುದು. ವೃತ್ತಿಯಲ್ಲಿ ನಿಮ್ಮ ಕೆಳಗಿನ ಕೆಲಸಗಾರರಿಂದ ಸ್ವಲ್ಪ ಕಿರಿಕಿರಿ ಎದುರಾಗಬಹುದು. ಸೈನ್ಯಕ್ಕೆ ಸೇರಲು ಬಯಸುವವರಿಗೆ ಅವಕಾಶ ಒದಗುತ್ತದೆ. ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆ. ದುಡುಕಿ ಆಡಿದ ಮಾತು ಸಮಾಜದಿಂದ ಟೀಕೆಗೆ ಒಳಗಾಗುವಿರಿ. ನಿಮಗೆ ಅಥವಾ ನಿಮ್ಮ ಮಾತಾಪಿತೃ ಗೆ ಶಸ್ತ್ರಚಿಕಿತ್ಸೆ ಸಂಭವ. ಕೃಷಿಕರು ಜಮೀನಿನಲ್ಲಿ ಹೊಸ ಅನ್ವೇಷಣೆ. ತಂದೆ-ಮಗನ ಮಧ್ಯೆ ವೈರಾಗ್ಯ. ಅತ್ತೆ-ಸೊಸೆ ಮಧ್ಯೆ ಸದಾ ಕಿರಿಕಿರಿ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ಕಟಕ
ನಿರುದ್ಯೋಗಿಗಳಿಗೆ ಕೆಲಸದ ಭಾಗ್ಯ. ಮಿತ್ರರಿಂದ ಸಹಾಯ.
ಅವಿವಾಹಿತರಿಗೆ ವಿವಾಹ ಭಾಗ್ಯ . ವೃತ್ತಿಯಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ಮಕ್ಕಳಿಗೆ ಶೀತಬಾಧೆ. ಸಾಲದ ಕಂತುಗಳಿಗೆ ಕಾಲಾವಕಾಶ ಸಿಕ್ಕು ಸ್ವಲ್ಪ ನಿರಾಳವಾಗುತ್ತದೆ. ಹೆಂಡತಿಯ ಮಾರ್ಗದರ್ಶನದಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ ಮತ್ತು ಎದುರಾಳಿಗಳನ್ನು ಸಾಮರ್ಥ್ಯದಿಂದ ಎದುರಿಸುವಿರಿ. ನಿಂತಿದ್ದ ಶುಭ ವಿವಾಹ ಕಾರ್ಯ ವ್ಯವಹಾರಗಳು ಪ್ರಗತಿ ಕಾಣುವಿರಿ. ಒಡಹುಟ್ಟಿದವರ ಕೆಲಸ ಕಾರ್ಯಗಳಿಗೆ ಸಾಕಷ್ಟು ಸಹಾಯ ನೀಡುವಿರಿ ಆದರೂ ಕೃತಜ್ಞತೆ ನಿಮಗೆ ಸಿಗುವುದಿಲ್ಲ. ಧಾರ್ಮಿಕ ಮುಖಂಡರಿಗೆ ಸಾಮಾಜಿಕ ಜವಾಬ್ದಾರಿ ಹೆಚ್ಚುತ್ತದೆ ಜಾಗ್ರತೆವಹಿಸಿ. ಬೇರೆಯವರು ಮಾಡಿರುವ ಕೆಲಸದಿಂದ ನಿಮಗೆ ಕಂಟಕ ಎದುರಾಗಿದೆ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ಸಿಂಹ
ಸರ್ಕಾರಿ ಅಧಿಕಾರಿಗಳು ಸಹೋದ್ಯೋಗಿಗಳೊಡನೆ ಆಡಳಿತವನ್ನು ಸುಸೂತ್ರವಾಗಿ ನಡೆಸುತ್ತೀರಿ. ಸರಕಾರಿ ನೌಕರಿ ಪೂರ್ವಸಿದ್ಧತೆ ಮಾಡಿರುವಿರಿ ಆದರೆ ಪರೀಕ್ಷೆಗಾಗಿ ಕಾಯಬೇಕು. ಸಂಬಂಧಿಕರಲ್ಲಿ ಭುಗಿಲೆದ್ದಿದ್ದ ಆಸ್ತಿ ವಿವಾದವು ಕೋರ್ಟ್ ಮೆಟ್ಟಿಲು ಹತ್ತುವ ಸಂಭವ. ಒಡಹುಟ್ಟಿದವರೊಡನೆ ಶೀತಲ ಸಮರ ಮುಂದುವರೆಯುವುದು. ಮಕ್ಕಳಿಂದ ನಿರೀಕ್ಷಿತ ಸಹಾಯ ಕಷ್ಟ. ಬಾಧಿಸುತ್ತಿದ್ದ ಮೂಳೆ ತೊಂದರೆಗಳು ಈಗ ಶಸ್ತ್ರಚಿಕಿತ್ಸೆ ಸಂಭವ. ಮಕ್ಕಳ ಮದುವೆಗಾಗಿ ಹಂಬಲಿಸುತ್ತಿರಿ. ನವದಂಪತಿಗಳು ಸದಾ ಕಿರಿಕಿರಿ. ದಂಪತಿಗಳಿಗೆ ಸಂತಾನ ವೇದನೆ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ಕನ್ಯಾ
“ಕಾಯಕವೇ ಕೈಲಾಸ “ಎಂದು ಕೆಲಸ ಮಾಡಿದರೂ ಮೇಲಿನ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವಿರಿ. ಹಿರಿಯರಿಂದ ಸಹಾಯಧನ. ಹೆಣ್ಣುಮಕ್ಕಳಿಗೆ ತವರಿನ ಕಡೆ ಆಸ್ತಿ ಬಗ್ಗೆ ಶುಭ ಸಮಾಚಾರವಿರುತ್ತದೆ. ಮಕ್ಕಳ ಏಳಿಗೆಯು ನಿಮ್ಮ ಕನಸಾಗಲಿದೆ. ಪಿತ್ತದಿಂದ ಅಥವಾ ಉಷ್ಣದಿಂದ ದೇಹ ಬಳಲುವುದು. ಹಣದ ಪ್ರಗತಿ ಪರವಾಗಿಲ್ಲ. ಪತ್ರಿಕೋದ್ಯಮದವರಿಗೆ ವೇತನ ಹಾಗೂ ಗೌರವ ಸಿಕ್ಕು ಹೆಚ್ಚಿನ ಜವಾಬ್ದಾರಿ ಒದಗುತ್ತದೆ. ಮನೆ ಕಟ್ಟಡದ ಚಿಂತನೆ. ಹಳೆಯ ಮನೆ ವಾಸ್ತು ಪ್ರಕಾರ ಪರಿವರ್ತನೆ ಚಿಂತನೆ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ತುಲಾ
ನಿಮ್ಮಆಲಸ್ಯ ಭಾವನೆ ಇಂದ ಕಂಟಕ ಬರಬಹುದು. ಕಟು ಮಾತಿನಿಂದ ಹಿರಿಯರೊಡನೆ ನಿಷ್ಠುರ. ಆಸ್ತಿ ವಿಚಾರಕ್ಕಾಗಿ ಕಾವೇರಿದ ವಾತಾವರಣ ತಿಳಿಯಾಗುತ್ತದೆ. ಸಹೋದ್ಯೋಗಿಗಳೊಡನೆ ಒಗ್ಗಟ್ಟು ಬೆಳೆದು ನಿಮ್ಮ ಆಸ್ತಿ ವಿಚಾರ ಪಾಲುದಾರಿಕೆ ಸರಳ. ಹೊಸ ಸಾಲ ಮಾಡುವುದು ಬೇಡ. ಮಕ್ಕಳ ವಿದ್ಯಾಭ್ಯಾಸದ ಖರ್ಚಿಗೆ ಸಂಬಂಧಿಕರಿಂದ ಸಹಾಯ ಬರುತ್ತದೆ. ಉದ್ಯೋಗದಲ್ಲಿ ಉತ್ತಮ ಪ್ರತಿಕ್ರಿಯೆ. ಅನಿರೀಕ್ಷಿತ ಖರ್ಚು. ಮನೆಗಾಗಿ ಎಲೆಕ್ಟ್ರಾನಿಕ್ಸ್ ವಸ್ತುಗಳ ಖರೀದಿ. ಸಂಗತಿಗಾಗಿ ಬೆಲೆಬಾಳುವ ಪ್ರೇಮದ ಕಾಣಿಕೆ ನೀಡುವಿರಿ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ವೃಶ್ಚಿಕ
ಕೆಲವು ಸಮಾಜ ಸೇವೆ ಮಾಡಿ ಅವಮಾನ ಅನುಭವಿಸುವಿರಿ. ಹಿರಿಯರರೊಡನೆ ವಾದವಿವಾದ ಬೇಡ. ಕುಟುಂಬದಲ್ಲಿ ಸಂತೋಷ ಇರುತ್ತದೆ. ಬಂಧುಗಳಿಗೆ ಸಹಾಯ ಮಾಡುವಿರಿ. ಹಿರಿಯರಿಗೆ ಕೆಲವೊಮ್ಮೆ ಪಶ್ಚಾತ್ತಾಪ ಭಾವನೆ ಮೂಡುತ್ತದೆ. ಸರ್ಕಾರದ ಸೂಚನೆ ಪಾಲಿಸಿರಿ. ಇಲ್ಲವಾದಲ್ಲಿ ನಿಮ್ಮ ವ್ಯವಹಾರಗಳಿಗೆ ತೊಡಕು ಆಗಬಹುದು. ವೃದ್ಧಾಶ್ರಮಗಳಿಗೆ ಸಹಾಯ ಮಾಡುವಿರಿ. ಕೃಷಿ ಚಟುವಟಿಕೆಗಳಿಗೆ ಉತ್ತೇಜನ ಸಿಗುತ್ತದೆ. ಹೈನುಗಾರಿಕೆ ಉದ್ಯಮ ಪ್ರಾರಂಭ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ಧನು
ಆಧ್ಯಾತ್ಮದತ್ತ ಭಾಗವಹಿಸುವಿರಿ. ಹಣ ಕಾಸಿನ ವ್ಯವಹಾರ ಕೊಂಚ ನೆಮ್ಮದಿ ಸಿಗಲಿದೆ. ನಿಮ್ಮ ದಾಯಾದಿ ನಿಮ್ಮೊಡನೆ ಸಲುಗೆಯಿಂದ ಇರುವರು. ಕೃಷಿಯಿಂದ ಸ್ವಲ್ಪ ಆದಾಯ ಬರುತ್ತದೆ. ಸರ್ಕಾರಿ ಸಾಲ ಪಡೆದು ಉಳಿದ ಸಾಲ ಸಾಲಗಳನ್ನು ತೀರಿಸಬಹುದು. ಬೋಧನೆ ಪ್ರಿಯರಿಗೆ ಉತ್ತಮ ಕೆಲಸ ಹಾಗೂ ಸಂಬಳ . ನಿಂತಿದ್ದ ವ್ಯವಹಾರಗಳು ನಿಧಾನವಾಗಿ ಆರಂಭಗೊಳ್ಳುತ್ತವೆ. ಬರಬೇಕಾಗಿದ್ದ ಸಾಲಗಳಲ್ಲಿ ಸ್ವಲ್ಪಭಾಗ ಬರುತ್ತದೆ. ಉದ್ಯೋಗದಲ್ಲಿ ಇದ್ದ ಗೊಂದಲಗಳು ನಿವಾರಣೆಯಾಗುವುದು.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ಮಕರ
ಉದ್ಯೋಗದಲ್ಲಿ ಅಭದ್ರತೆ. ಉದ್ಯೋಗಕ್ಕಾಗಿ ಸಂದರ್ಶನ ಭಾಗ್ಯ. ದ್ರವರೂಪದ ವಸ್ತುಗಳನ್ನು ಮಾರಾಟ ಮಾಡುವವರಿಗೆ ಲಾಭ. ಕೃಷಿಕರಿಗೆ ಉತ್ತಮ ಸಹಾಯಧನ. ಸಹೋದ್ಯೋಗಿಗಳೊಡನೆ ಹೊಂದಾಣಿಕೆ ಹೆಚ್ಚಾಗಿ ಕೆಲಸ ಸುಲಭವೆನಿಸುತ್ತದೆ. ಮಕ್ಕಳ ಪ್ರಗತಿಯು ಆಶಾದಾಯಕವಾಗಿ ಇರುತ್ತದೆ. ನರ ದೌರ್ಬಲ್ಯ ತೊಂದರೆ. ಸಂಗಾತಿಯ ಸಲಹೆಗಳು ಧನ ನಷ್ಟ. ಮಕ್ಕಳ ಮದುವೆ ಮಧ್ಯಸ್ಥಿಕೆ ಜನರಿಂದ ವಿಳಂಬ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ಕುಂಭ
ಚಾಣಕ್ಷತನದಿಂದ ಕೆಲಸ ಮಾಡುವಿರಿ. ಹಣಕಾಸಿನ ವ್ಯವಹಾರ ಮಧ್ಯಮ. ಉದ್ಯೋಗಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲವಿರುತ್ತದೆ. ತೆರಿಗೆಯ ತಜ್ಞರಿಗೆ ಲೆಕ್ಕ ಪರಿಶೋಧಕರಿಗೆ ಬೇಡಿಕೆ ಹೆಚ್ಚುತ್ತದೆ. ಶೀತ ಬಾಧೆಯ ಬಗ್ಗೆ ಗಮನ ಹರಿಸಿರಿ. ಸಂಗಾತಿಯೊಡನೆ ಸಂತೋಷವಾಗಿ ಕಾಲವನ್ನು ಕಳೆಯುವಿರಿ. ಹಿರಿಯರೊಂದಿಗೆ ಸಂಬಂಧಗಳು ವೃದ್ಧಿಯಾಗುತ್ತವೆ. ವೃತ್ತಿಯಲ್ಲಿ ನಿಮ್ಮ ಸಲಹೆಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ. ಗ್ರಂಧೀ ಮಾಲೀಕರಿಗೆ ನಿಧಾನವಾಗಿ ವ್ಯವಹಾರ ವೃದ್ಧಿಸುತ್ತದೆ. ಮಾತಾಪಿತೃ ಆರೋಗ್ಯದ ಬಗ್ಗೆ ಗಮನವಿರಲಿ. ಏಕಾಂಗಿತನ ಓಡಾಟ ಬೇಡ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ಮೀನ
ವೃತ್ತಿಯಲ್ಲಿನ ಶ್ರಮವು ಈಗ ಪ್ರತಿಷ್ಠೆಯ ಸಂಕೇತವಾಗಿದೆ. ಭೂಮಿಯ ಮೇಲೆ ಹೂಡಿದ್ದ ಹಣದ ಮೌಲ್ಯವು ಕಡಿಮೆಯಾಗಬಹುದು. ನಿಮ್ಮ ಸಂಕಷ್ಟಗಳಿಗೆ ಬಂಧುಗಳು ಸ್ಪಂದಿಸುವರು. ಹಿರಿಯರ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವನ್ನು ಕಾಣಬಹುದು. ಹೊಸ ಉದ್ಯಮ ಪ್ರಾರಂಭ ಸಂಪಾದನೆ ಹಂತಹಂತವಾಗಿ ಆರಂಭಗೊಳ್ಳುತ್ತದೆ. ಸಂಗಾತಿಗೆ ವೃತ್ತಿಯಲ್ಲಿದ್ದ ಒತ್ತಡಗಳು ನಿಧಾನವಾಗಿ ಕರಗುತ್ತವೆ. ಖರ್ಚಿನ ಮೇಲೆ ಹಿಡಿತವಿರಲಿ. ಹೊಸ ನಿವೇಶನ ಖರೀದಿ. ತಾವು ಕಟ್ಟಿಸಿರುವ ಹೊಸ ಮನೆಗೆ ಹೋಗುವ ಚಿಂತನೆ. ಮಧ್ಯಸ್ಥಿಕೆ ಸಾಲದಿಂದ ಮನಸ್ತಾಪ. ಪ್ರೀತಿ-ಪ್ರೇಮ ಸರಸ-ಸಲ್ಲಾಪ ಗಳಿಂದ ವೇದನೆ. ದಂಪತಿಗಳಿಗೆ ಸಂತಾನದ ಚಿಂತನೆ. ಎಷ್ಟೇ ದುಡಿದರೂ ಹಣ ಕೂಡಿಹಾಕುವ ಸಮಸ್ಯೆ ಎದುರಾಗಲಿದೆ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಜ್ಯೋತಿಷ್ಯ

ದಾವಣಗೆರೆ

Advertisement
Advertisement Enter ad code here

Title

To Top