Home
ದಿನ ಭವಿಷ್ಯ
ಶುಭ ಸೋಮವಾರ-ಜೂನ್-08,2020 ರಾಶಿ ಭವಿಷ್ಯ
ಸೂರ್ಯೋದಯ: 05:56, ಸೂರ್ಯಾಸ್: 18:41
ಶಾರ್ವರಿ ನಾಮ ಸಂವತ್ಸರ
ಜ್ಯೇಷ್ಠ ಮಾಸ ,ಉತ್ತರಾಯಣ
ತಿಥಿ: ತದಿಗೆ – 19:55 ವರೆಗೆ
ನಕ್ಷತ್ರ: ಪೂರ್ವ ಆಷಾಢ – 13:45 ವರೆಗೆ
ಯೋಗ: ಶುಕ್ಲ – 12:53 ವರೆಗೆ
ಕರಣ: ವಣಿಜ – 08:20 ವರೆಗೆ ವಿಷ್ಟಿ – 19:55 ವರೆಗೆ
ದುರ್ಮುಹೂರ್ತ: 12:44 – 13:35ದುರ್ಮುಹೂರ್ತ : 15:17 – 16:08
ರಾಹು ಕಾಲ: 07:30 – 09:00
ಯಮಗಂಡ: 10:30 – 12:0
ಗುಳಿಕ ಕಾಲ: 13:30 – 15:00
ಅಮೃತಕಾಲ: 09:02 – 10:36
ಅಭಿಜಿತ್ ಮುಹುರ್ತ: 11:53 – 12:44
ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.
ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ಮೇಷ ರಾಶಿ:
ಇಂದು ನೀವು ಅನಿರೀಕ್ಷಿತ ಲಾಭವನ್ನು ಮತ್ತು ಬರಬೇಕಾಗಿದ್ದ ಹಣ ನಿಮ್ಮ ಕೈಸೇರಬಹುದು.ಪ್ರೀತಿ-ಪ್ರೇಮ ಮದುವೆ ಪ್ರಸ್ತಾಪ ಆದರೆ ವಿರೋಧ. ದ್ವೇಷ, ಸಿಟ್ಟು ಬೇಡವೇ ಬೇಡ. ಪ್ರಮುಖ ಕೆಲಸಗಳು ಸಂಪನ್ನವಾಗಲಿವೆ. ಬಹಳ ಕಾಲದಿಂದ ಯಾರಿಗೂ ಹೇಳದ ಹಲವು ವಿಚಾರಗಳ ಬಗ್ಗೆ ಬಾಯಿ ಬಿಡುತ್ತೀರಿ. ಮಕ್ಕಳ ಮದುವೆ ಪ್ರಸ್ತಾಪ. ವ್ಯವಹಾರದಲ್ಲಿ ಪ್ರಗತಿಗೆ ನೀವು ಈ ದಿನ ಅವಕಾಶಗಳನ್ನು ಪಡೆಯುತ್ತೀರಿ. ಸಂತಾನ ಯೋಗ. ಪಾಲುದಾರಿಕೆಯಲ್ಲಿ ಹೊಸ ಉದ್ಯಮ ಪ್ರಾರಂಭದ ಚಿಂತನೆ.
ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನಕ್ಕಾಗಿ ಸಂಪರ್ಕಿಸಿರಿ.
ಸೋಮಶೇಖರ್ ಜ್ಯೋತಿಷ್ಯರುB.Sc
Mob.No.9353488403
ವೃಷಭ ರಾಶಿ:
ಕಾಯಕವೇ ಕೈಲಾಸ ಎಂದು ತಾವು ಭಾವಿಸಿದ್ದೀರಿ ಇದರಿಂದ ತುಂಬಾ ಪ್ರಯೋಜನವಾಗುವುದು. ಹೆಚ್ಚು ಕೆಲಸದಿಂದ ಆರೋಗ್ಯದಲ್ಲಿ ಏರುಪೇರು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.ಅನಗತ್ಯ ಕೆಲಸಗಳಿಗೆ ಪ್ರಯತ್ನ ಮಾಡಬೇಡಿ. ಕುಟುಂಬದೊಂದಿಗೆ ವಿರೋಧ ತಾವು ಏಕಾಂಗಿ. ಈ ದಿನ ಜಾಗರೂಕತೆಯಿಂದ ವರ್ತಿಸಿ. ಅಜಾಗರೂಕತೆಯು ಗಂಭೀರ ಸಮಸ್ಯೆಗಳಿಗೆ ಕಾಣಲಿದೆ. ದುಡುಕಿನ ನಿರ್ಧಾರ ಬೇಡ. ಮಕ್ಕಳ ಮದುವೆಗೆ ಅಡತಡೆ. ವಿಚ್ಛೇದನದ ಹೆಣ್ಣುಮಕ್ಕಳಿಗೆ ಮರುಮದುವೆ ಭಾಗ್ಯ. ಪ್ರೇಮಿಗಳಿಬ್ಬರಲ್ಲಿ ಮನಸ್ತಾಪ.
ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನಕ್ಕಾಗಿ ಸಂಪರ್ಕಿಸಿರಿ.
ಸೋಮಶೇಖರ್ ಜ್ಯೋತಿಷ್ಯರುB.Sc
Mob.No.9353488403
ಮಿಥುನ ರಾಶಿ:
ಹಿತೈಷಿಗಳ ಬಗ್ಗೆ ಎಚ್ಚರ ವಹಿಸಿ. ಒಂದೆಡೆ ಮನಸ್ಸಿನಲ್ಲಿ ದುಃಖವಿದ್ದರೂ, ಮತ್ತೊಂದೆಡೆ ಭವಿಷ್ಯದ ಕಾರ್ಯತಂತ್ರಗಳ ಬಗ್ಗೆ ಮನಸ್ಸು ಯೋಚಿಸುತ್ತದೆ. ದಾಂಪತ್ಯ ಜೀವನವೂ ಉತ್ತಮವಾಗಿರುತ್ತದೆ.ಹಣದ ವಿಚಾರದಲ್ಲಿ ಒಳ್ಳೆಯ ಫಲಿತಾಂಶ. ಸಮಯವು ನಿಮ್ಮ ಕಡೆಗಿದ್ದು ಶೀಘ್ರದಲ್ಲೇ ಹೊಸ ಯೋಜನೆಗಳನ್ನು ಕಾರ್ಯಗತಗೊಳಿಸುವಿರಿ. ಈ ಸಮಯದಲ್ಲಿ ಮಾಡಿದ ಕೆಲಸದಲ್ಲಿ ಲಾಭವನ್ನು ಪಡೆಯುವಿರಿ. ಪಾಲುದಾರಿಕೆ ವ್ಯವಹಾರ ಉದ್ಯಮ ಬೇಡವೇ ಬೇಡ. ಮಕ್ಕಳ ಸಂತಾನದ ಸಮಸ್ಯೆ ಕಾಡಲಿದೆ.
ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನಕ್ಕಾಗಿ ಸಂಪರ್ಕಿಸಿರಿ.
ಸೋಮಶೇಖರ್ ಜ್ಯೋತಿಷ್ಯರುB.Sc
Mob.No.9353488403
ಕಟಕ ರಾಶಿ:
ಅದೃಷ್ಟವು ಶುಭಫಲ. ಕುಟುಂಬದಲ್ಲಿ ಶಾಂತಿ ಇರುತ್ತದೆ. ನಿಮ್ಮ ಸಂಗಾತಿಯಿಂದ ಅಪಾರ ಸಂತೋಷವನ್ನು ಪಡೆಯುವಿರಿ. ಈ ಹಿಂದೆ ಸ್ಥಗಿತಗೊಂಡ ಕೆಲಸಗಳನ್ನು ಈಗ ಪ್ರಾರಂಭಿಸುವ ಭಾಗ್ಯ.
ಅದೃಷ್ಟ ಭಾಗ್ಯ ಅರ್ಧಕ್ಕೆ ನಿಂತಿರುವ ಕಟ್ಟಡ ಪೂರ್ಣಗೊಳಿಸಿ. ಅನಗತ್ಯ ವಾದವಿವಾದದಿಂದ ಅಪಮಾನ ವಿರೋಧ. ಇಂದು ಯಾವುದೇ ಹೊಸ ಯೋಜನೆಯನ್ನು ಪ್ರಾರಂಭಿಸಬಹುದು. ಅಪೂರ್ಣಗೊಂಡ ಕೆಲಸವನ್ನು ಮಾಡಿ ಮುಗಿಸಿ. ಪತ್ನಿಯ ವಿರಸ. ಪತ್ನಿ ಆರೋಗ್ಯದಲ್ಲಿ ಏರುಪೇರು. ಜನರ ವಕ್ರದೃಷ್ಟಿ ತಡೆಗಟ್ಟಿ.
ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನಕ್ಕಾಗಿ ಸಂಪರ್ಕಿಸಿರಿ.
ಸೋಮಶೇಖರ್ ಜ್ಯೋತಿಷ್ಯರುB.Sc
Mob.No.9353488403
ಸಿಂಹ ರಾಶಿ :
ತುಂಬಾ ಕೋಪ ಮಾಡಿಕೊಳ್ಳುತ್ತೀರಿ. ಮೃಷ್ಟಾನ್ನ ಸೇವಿಸುವ ಯೋಗವಿದೆ. ಹೊಸದಾಗಿ ಅಂಗಡಿ ಪ್ರಾರಂಭಿಸುವ ಪ್ರಯತ್ನ. ಆರ್ಥಿಕ ನೆಮ್ಮದಿ ಕೂಡ ಸಿಗಲಿದೆ. ನೀವು ಮಾಡಿದ ಶ್ರಮಕ್ಕೆ ತಕ್ಕ ಪ್ರಯೋಜನವನ್ನು ಪಡೆಯುವಿರಿ. ಸಾಲ ತೀರಿಸುವ ಆಲೋಚನೆ ಬರುತ್ತದೆ ಅಥವಾ ಸಾಲ ತೀರಿಸುವ ಅತ್ಯುತ್ತಮ ಅವಕಾಶ ಲಭಿಸುತ್ತದೆ. ನಿಮ್ಮ ಸೋಮಾರಿತನ ಆಲಸ್ಯ ಇಡೀ ದಿನವನ್ನು ಹಾಳುಮಾಡುವ ಸಾಧ್ಯತೆ ಇದೆ. ಅನೇಕ ದಿನಗಳಿಂದ ಅನುಭವಿಸುತ್ತಿದ್ದ ಕಾಯಿಲೆ, ಮಾನಸಿಕ ತೊಂದರೆಗಳಿಂದ ಪರಿಹಾರ ಪಡೆಯುವಿರಿ. ಕೃಷಿಕರಿಗೆ ಉತ್ತಮ ಲಾಭಾಂಶ. ರಾಜಕಾರಣಿಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ.
ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನಕ್ಕಾಗಿ ಸಂಪರ್ಕಿಸಿರಿ.
ಸೋಮಶೇಖರ್ ಜ್ಯೋತಿಷ್ಯರುB.Sc
Mob.No.9353488403
ಕನ್ಯಾ ರಾಶಿ:
ಧನಾತ್ಮಕ ಯೋಚಿಸಿ ಕೆಲಸ ಮಾಡಿ. ಗುಟ್ಟಾಗಿ ಏನೋ ಮಾಡಲು ಪ್ರಯತ್ನ ಮಾಡುತ್ತೀರಿ, ಯಶಸ್ಸು ಲಭ್ಯ. ನಿಮ್ಮ ನಡೆ-ನುಡಿ ಯೋಚನೆಗಳು ನಿಗೂಢ. ಕೆಲವು ಕೆಲಸಗಳು ನಿಷ್ಪ್ರಯೋಜಕ ಎಂದು ತಿಳಿದೂ ಮಾಡಬೇಕಾಗುತ್ತದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರುತ್ತದೆ, ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೆ ಎಲ್ಲವೂ ಸರಿಯಾಗಿರುತ್ತದೆ. ಮಾತಾಪಿತೃ ಆರೋಗ್ಯದ ಚಿಂತನೆ. ಅಳಿಯನ ನಡವಳಿಕೆಯಿಂದ ತುಂಬಾ ಬೇಸರ. ಮಗಳ ಸಂತಾನ ಹಾಗೂ ಭವಿಷ್ಯದ ಚಿಂತನೆ ಕಾಡಲಿದೆ.
ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನಕ್ಕಾಗಿ ಸಂಪರ್ಕಿಸಿರಿ.
ಸೋಮಶೇಖರ್ ಜ್ಯೋತಿಷ್ಯರುB.Sc
Mob.No.9353488403
ತುಲಾ ರಾಶಿ:
ನಿಶ್ಚಿಂತೆಯಿಂದ ಕಾಲ ಕಳೆಯಿರಿ, ಇಲ್ಲದಿದ್ದರೆ ನೀವು ಕಾರಣವಿಲ್ಲದೇ ಕೆಲವು ವಿಷಯಗಳಲ್ಲಿ ಸಿಕ್ಕಿಹಾಕಿಕೊಳ್ಳುವ ಮೂಲಕ ಇತರರಿಗೆ ನೋವುಂಟು ಮಾಡುವಿರಿಎಂದೋ ನಿಮಗೆ ಉಂಟಾದ ಅವಮಾನ ನೆನಪಾಗಿ ಬಹಳ ದುಃಖ ಆಗಬಹುದು. ಆ ಯೋಚನೆ ಮಾಡದಿರಿ. ಮಕ್ಕಳ ಆರೋಗ್ಯ ಬಹಳ ದಿನಗಳ ನಂತರ ಸರಿಹೋಗುತ್ತದೆ. ಮಕ್ಕಳ ಕಂಕಣ ಬಲ ಕೂಡಿ ಬರಲಿದೆ. ಮನೆ ಕಟ್ಟುವ ಭಾಗ್ಯ ಪತ್ನಿಯ ಸಹಾಯದಿಂದ ಯಶಸ್ಸು. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಗೊಂದಲ ನಿವಾರಣೆ. ಸಹೋದರ ಸಹೋದರಿಯರ ರಾಜಿ ಮೂಲಕ ಸಮಸ್ಯೆ ಪರಿಹಾರ. ತುಂಬಾ ದಿನದಿಂದ ಬಾಕಿ ಇರುವ ಕೆಲಸ ಇತ್ಯರ್ಥ. ಲೇವಾದೇವಿ ಗಾರರಿಗೆ ಉತ್ತಮ ಲಾಭಾಂಶ. ಪ್ರೇಮಿಗಳಿಗೆ ಕಂಕಣಬಲ ಭಾಗ್ಯ.
ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನಕ್ಕಾಗಿ ಸಂಪರ್ಕಿಸಿರಿ.
ಸೋಮಶೇಖರ್ ಜ್ಯೋತಿಷ್ಯರುB.Sc
Mob.No.9353488403
ವೃಚಿಕ ರಾಶಿ:
ಕೆಲವು ಒಳ್ಳೆಯ ಸುದ್ದಿಗಳಿಂದ ಆರೋಗ್ಯದಲ್ಲಿ ವೃದ್ಧಿ. ಇದರಿಂದಾಗಿ ಮನಸ್ಸಿನಲ್ಲಿ ಸಂತೋಷ. ಸ್ನೇಹಿತರ ಸಹಕಾರ ಹಾಗೂ ಹಿರಿಯರ ಆಶೀರ್ವಾದದಿಂದ ಹೊಸ ಯೋಜನೆಗಳು ಪ್ರಾರಂಭ. ಹಣಕಾಸಿನ ವೆಚ್ಚಗಳು ಇಂದು ಹೆಚ್ಚಾಗಬಹುದು. ಪ್ರೀತಿಪಾತ್ರರೊಂದಿಗೆ, ಹಿರಿಯರೊಂದಿಗೆ ಮಾತನಾಡುವಾಗ ಎಚ್ಚರವಿರಲಿ. ಸಮಾಜ ಕಾರ್ಯಕರ್ತರಿಗೆ ರಾಜಕಾರಣಿಗಳಿಗೆ ಉತ್ತಮ ಪ್ರಶಂಸೆ. ದೇವದರ್ಶನ ಭಾಗ್ಯ. ನೀವು ಬೇರೆಯವರ ಮಕ್ಕಳ ಮದುವೆಗೆ ಮುಂದಾಳತ್ವ.
ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನಕ್ಕಾಗಿ ಸಂಪರ್ಕಿಸಿರಿ.
ಸೋಮಶೇಖರ್ ಜ್ಯೋತಿಷ್ಯರುB.Sc
Mob.No.9353488403
ಧನುಸ್ಸು ರಾಶಿ:
ನಿಮಗೆ ಶತ್ರುಗಳ ಕಾಟ ಜಾಸ್ತಿ ಇದೆ ಪೂಜಾ ಶಾಂತಿಯಿಂದ ತಡೆಗಟ್ಟಿಸಿ. ಸಮಯಕ್ಕೆ ಸರಿಯಾಗಿ ಪಾಲಕರ ಹಾಗೂ ಸ್ನೇಹಿತರ ಹಣದ ಸಹಾಯ ಸಿಗಲಿದೆ. ಚಾಡಿ ಮಾತುಗಳಿಂದ ನಿಮ್ಮ ಮೇಲೆ ಆರೋಪ ಬರಬಹುದು. ತಪ್ಪಿಸಿಕೊಳ್ಳುವುದು ಕಷ್ಟ. ನೀವು ತಪ್ಪು ಮಾಡಿಲ್ಲಎಂದು ನಿರೂಪಿಸಲು ತುಂಬಾ ಕಷ್ಟ.ಮಾಡುತ್ತಿರುವ ಕೆಲಸಗಳು ನಿಮಗೆ ತಿರುಗುಬಾಣವಾಗಬಹುದು. ನಿಮ್ಮ ಸಹಾಯಕ್ಕೆ ಯಾರು ಬರಲಾರರು. ತಿಳಿಯದ್ದನ್ನು ಗೊತ್ತಿಲ್ಲಎಂದರೆ ತಪ್ಪಿಲ್ಲ. ಅರ್ಥವಾಗದ ಬೆಳವಣಿಗೆಯ ಬಗ್ಗೆ ಕೇಳಿ ತಿಳಿದರೆ ನಷ್ಟವಿಲ್ಲ. ಇಂದು ನೀವು ನಿಮ್ಮ ಅಮೂಲ್ಯ ವಸ್ತುಗಳ ಬಗ್ಗೆ ಜಾಗರೂಕರಾಗಿರಿ, ಕಳೆದುಹೋಗುವ ಸಂಭವವಿದೆ. ಹಣಕಾಸಿನ ವ್ಯವಹಾರದ ಕಾಗದಪತ್ರ, ಜಮೀನಿಗೆ ಸಂಬಂಧಿಸಿದ ಕಾಗದ ಪತ್ರಗಳ ಬಗ್ಗೆ ಜಾಗೃತಿವಹಿಸಿ.
ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನಕ್ಕಾಗಿ ಸಂಪರ್ಕಿಸಿರಿ.
ಸೋಮಶೇಖರ್ ಜ್ಯೋತಿಷ್ಯರುB.Sc
Mob.No.9353488403
ಮಕರ ರಾಶಿ:
ನಿಮ್ಮ ಮುಂದೆ ನಾಟಕ ಮಾಡುವ ವಿರೋಧಿಗಳು ಹೆಚ್ಚಾಗುವುದು. ನಿಮ್ಮ ಮಾತಿನ ಶೈಲಿ ಬದಲಾಗಲಿದೆ. ನಿಮ್ಮ ಅಭಿಪ್ರಾಯಕ್ಕೆ ವಿರುದ್ಧ ಎನಿಸಿದ ವಾದವೊಂದನ್ನು ಹೇರಲಾಗುತ್ತದೆ. ಕಾಣದ ಕೈಗಳ ಯೋಚನೆಯಿಂದ ನಿಮಗೆ ತೊಂದರೆ.ಮಾನಸಿಕ ತೊಡಕುಗಳನ್ನು ತೊಡೆದುಹಾಕಲು ಹೊಸ ಶಕ್ತಿ ಉದ್ಭವ . ಸಂಗಾತಿಯೊಡನೆ ಮನಸ್ಸನ್ನು ಸಂತೋಷವಾಗಿರಿಸುತ್ತದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ನೆಲೆಸುವುದು. ದಿನಸಿ ವ್ಯಾಪಾರಸ್ಥರಿಗೆ ಉತ್ತಮ ಲಾಭ. ಹೋಟೆಲ್ ಬೇಕರಿ ವ್ಯಾಪಾರದಲ್ಲಿ ಏರುಪೇರು.
ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನಕ್ಕಾಗಿ ಸಂಪರ್ಕಿಸಿರಿ.
ಸೋಮಶೇಖರ್ ಜ್ಯೋತಿಷ್ಯರುB.Sc
Mob.No.9353488403
ಕುಂಭ ರಾಶಿ:
ನಿಮಗೆ ಮಿಶ್ರ ಫಲ ಉಂಟಾಗಲಿದೆ. ಏನೋ ಮಾಡಲು ಹೋಗಿ ಮುಜುಗರ. ಒಣ ಜಂಬದಿಂದ ತೊಂದರೆ. ವ್ಯಾಯಾಮದ ಮಹತ್ವ ತಿಳಿಯುತ್ತದೆ ಮತ್ತು ವ್ಯಾಯಾಮ ಶಾಲೆ ಶುರುಮಾಡಿ. ತಮಗೆ ಬೇಕಾದುದನ್ನು ತಮ್ಮಿಂದ ಸಹಾಯ ಪಡೆದುಕೊಳ್ಳುತ್ತಾರೆ ನಿಮ್ಮ ಕಷ್ಟ ಕೇಳುವುದಿಲ್ಲ ಎನ್ನುವ ಭಾವ ಕಾಡುತ್ತದೆ. ಯಾರು ಎಲ್ಲಿಗೆ ಕರೆದರೂ ಹೋಗದೆ ಮನೆಯಲ್ಲೇ ಇದ್ದರೆ ನಿಮಗೆ, ನಿಮ್ಮ ಕುಟುಂಬದವರಿಗೆ ಲಾಭ. ನಿಮ್ಮದು ಏಕಾಂಗಿತನ ಹೋರಾಟದ ಬದುಕು. ಮದುವೆ ವಿನಾಕಾರಣ ಮುಂದೂಡುವುದು. ಪ್ರೇಮಿಗಳು ನ್ಯಾಯಾಲಯ ಕಟ್ಟೆ ಹತ್ತುವ ಸಂಭವ.
ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನಕ್ಕಾಗಿ ಸಂಪರ್ಕಿಸಿರಿ.
ಸೋಮಶೇಖರ್ ಜ್ಯೋತಿಷ್ಯರುB.Sc
Mob.No.9353488403
ಮೀನ ರಾಶಿ:
ಬೆನ್ನು, ಸೊಂಟ ,ಮಂಡಿ ,ಕುತ್ತಿಗೆ ನೋವಿನಿಂದ ಬಳಲುತ್ತೀರಿ. ಅನಿವಾರ್ಯವಾಗಿ ವಿಶ್ರಾಂತಿ ಇದರಿಂದ ಆರ್ಥಿಕದಲ್ಲಿ ಏರುಪೇರು. ಮನೆ ವಾಸ್ತು ಬದಲಾವಣೆ ನೆಮ್ಮದಿ ನೀಡುತ್ತದೆ. ಸಾಲಕ್ಕಾಗಿ ನಿಮ್ಮ ಸ್ನೇಹಿತ ಬರುವ ಸಾಧ್ಯತೆ ಇದೆ. ಸಾಲಕ್ಕಿಂತ ಸಹಾಯ ಉತ್ತಮ. ನೀವು ಪ್ರಾರಂಭಿಸಿದ ಕೋಳಿ ಫಾರಂ, ಹೈನುಗಾರಿಕೆ, ಮೇಕೆ ಸಾಕಾಣಿಕೆ ಉದ್ಯಮದಲ್ಲಿ ಉತ್ತಮ ಧನಲಾಭ ಆಗುತ್ತದೆ. ಹೊಸ ಯೋಗ ಶಾಲೆ ಪ್ರಾರಂಭಿಸುವ ಸಾಧ್ಯತೆ ಇದೆ. ನಿಮ್ಮ ಮೇಲಧಿಕಾರಿ ಮತ್ತು ನಿಮಗೆ ಮಾತಿನ ಚಕಮಕಿ ನಡೆಯುವುದು. ಸಿಟ್ಟು ಬರಿಸಿದರೂ ಎದುರಾಡದೆ ಮೌನವಾಗಿರಿ. ಸ್ಥಾನಪಲ್ಲಟ ಸಾಧ್ಯತೆ. ವೇತನಕ್ಕೆ ಕಡಿವಾಣ. ನಿಮ್ಮ ಸಹೋದ್ಯೋಗಿಗಳ ಬಗ್ಗೆ ಜಾಗೃತಿ ವಹಿಸಿ.
ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನಕ್ಕಾಗಿ ಸಂಪರ್ಕಿಸಿರಿ.
ಸೋಮಶೇಖರ್ ಜ್ಯೋತಿಷ್ಯರುB.Sc
Mob.No.9353488403
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
