ಡಿವಿಜಿ ಸುದ್ದಿ, ದಾವಣಗೆರೆ: ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ನಗರದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವ ಶಿವಧ್ಯಾನ ಮಂದಿರದದಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿತ್ತು. ಬೆಳಗ್ಗೆಯಿಂದಲೇ ಭಕ್ತಾಧಿಕಗಳು ದೇವಸ್ಥಾನಕ್ಕೆ ಬಂದು ಶಿವನ ಆರಾಧನೆ ಮಾಡಿದರು. ಮಾಜಿ ಸಚಿವ ಎಸ್ .ಎಸ್ ಮಲ್ಲಿಕಾರ್ಜುನ ಪತ್ನಿ ಪ್ರಭಾ ಮಲ್ಲಿಕಾರ್ಜುನ ಅವರು ಮಕ್ಕಳ ಸಹಿತಿ ಶಿವ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಇಂದು ಸಿಸ್ಟರ್ ನಿವೇದಿತಾ ಸಂಘ ದಿಂದ ಭಜನೆ ನಡೆಯಲಿದ್ದು, ರಾತ್ರಿ ಜಾಗರಣೆ ನಡೆಯಲಿದೆ. ಸ್ವಾಮಿ ವಿವೇಕಾನಂದ ಬಡಾವಣೆ ಮುಖಂಡರು ವೀರೇಶ್ ಪಾಟೀಲ್ ,ಶಿವಗಂಗ ಶ್ರೀನಿವಾಸ್ ,ಎ.ಕೊಂಡಯ್ಯ , ಬಿ.ಎನ್.ರಂಗನಾಥ್ ಸ್ವಾಮಿ , ರಾಮಕೃಷ್ಣ, ಬಾಡದ ರವಿ ,ರಮೇಶ್ ಲೋಹಿತ್ ,ಮಂಜುನಾಥ್ , ಜಯಪ್ಪ .ವೈ.ಎನ್ ಸೇರಿದಂತೆ ಬಡಾವಣೆ ನಾಗರಿಕರು ಉಪಸ್ಥಿತರಿದ್ದರು.




