ಡಿವಿಜಿ ಸದ್ದಿ, ದಾವಣಗೆರೆ: ದೆಹಲಿಯ ತಿಸ್ ಹಜಾರೆ ನ್ಯಾಯಾಲಯದ ಆವರಣದಲ್ಲಿ ವಕೀಲರ ಮೇಲೆ ಪೋಲಿಸರು ಹಲ್ಲೆ ನಡೆಸಿರುವುದನ್ನು ಖಂಡಿಸಿ ದಾವಣಗೆರೆ ಜಿಲ್ಲಾ ವಕೀಲರ ಸಂಘದ ಸದಸ್ಯರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ದೆಹಲಿಯಲ್ಲಿ ವಕೀಲರ ಮೇಲೆ ಪೋಲಿಸರು ನಡೆಸಿರುವ ಹಲ್ಲೆಯು ಅಮಾನವೀಯ.ಪೊಲೀಸರು ಕಾನೂನು ಕೈಗೆತ್ತಿಕೊಂಡಿರುವುದು ಸರಿಯಲ್ಲ. ಕೇಂದ್ರ ಸರ್ಕಾರ ಹಾಗೂ ಕಾನೂನು ಸಚಿವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ವಕೀಲರ ಮೇಲೆ ನಡೆಯುತ್ತಿರುವ ಹಲ್ಲೆಯನ್ನು ತಡೆಗಟ್ಟಬೇಕು. ಈ ಕೂಡಲೇ ಪ್ರಧಾನಿಯವರು, ಗೃಹಸಚಿವರು ಹಾಗೂ ರಷ್ಟ್ರಪತಿಗಳು ವಕೀಲರ ರಕ್ಷಣೆಯ ಬಗ್ಗೆ ಕಾಯ್ದೆ ಜಾರಿಗೆ ಬರುವಂತೆ ಮಾಡಬೇಕು. ವಕೀಲರಿಗೆ ರಕ್ಷಣೆ ನೀಡಲು ಸೂಚಿಸಬೇಕೆಂದು ಒತ್ತಾಯಿಸಿದರು.
ಕಾನೂನು ಉಲ್ಲಂಘನೆ ಮಾಡಿರುವ ಪೋಲೀಸರನ್ನು ತಕ್ಷಣ ವಜಾ ಮಾಡಬೇಕು ಹಾಗೂ ವಕೀಲರಿಗೆ ಧೈರ್ಯ ನೀಡಬೇಕೆಂದು ಒತ್ತಾಯಿಸಿದರು.ನಂತರ ಜಿಲ್ಲಾ ರಕ್ಷಣಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ವಕೀಲರಾದ ನಜೀರ್ ಅಹಮದ್,ರಜ್ವಿ ಖಾನ್,ಪ್ರದೀಪ್, ಶ್ಯಾಮ್,ಅನೀಸ್ ಪಾಷ,ಗಂಗಾಧರ ನಾಯ್ಕ್,ವಿನಯ್ ಕುಮಾರ್, ಅಬ್ದುಲ್ ಖಾದರ್ ಮತ್ತಿತರರಿದ್ದರು