ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ಪಿ.ಬಿ. ರಸ್ತೆ, ಕೆ.ಇ.ಬಿ. ಬಡಾವಣೆ, ವಿದ್ಯಾನಗರ ಮತ್ತು ಶಾಮನೂರು ರಸ್ತೆಯಲ್ಲಿನ ಪ್ಲಾಸ್ಟಿಕ್ ವಸ್ತುಗಳ ಮಾರಾಟಗಾರರ ಮೇಲೆ ಪಾಲಿಕೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ದಂಡ ವಿಧಿಸಿ ಪ್ಲಾಸ್ಟಿಕ್ ವಶಪಡಿಸಿಕೊಂಡರು.
ಈ ಸಂದರ್ಭದಲ್ಲಿ ಪಾಲಿಕೆ ಸಹಾಯಕ ನಿರ್ದೇಶಕರಾದ ಡಾ. ಸಂತೋಷ್. ಜಿ. ಎಂ, ಪರಿಸರ ಅಭಿಯಂತರರಾದ ಬಸವಣ್ಣ, ಚಿನ್ಮಯಿ. ಕೆ, ಹಾಗೂ ಆರೋಗ್ಯ ನಿರೀಕ್ಷಕ ನಿಖಿಲ್, ಜೆ. ಹೆಚ್, ರಾಘವೇಂದ್ರ. ಜಿ. ಶಶಾಂಕ್. ಜಿ. ಆರ್, ಕರ್ಣ. ಎನ್ ಮತ್ತು ದಫೇದಾರರು ಉಪಸ್ಥಿತರಿದ್ದರು .



