ಡಿವಿಜಿ ಸುದ್ದಿ, ದಾವಣಗೆರೆ: ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಎರಡು ದಶಕಗಳಲ್ಲೆ ಅತ್ಯಂತ ಕುಸಿತ ಕಂಡಿದೆ ಇದರ ಲಾಭವನ್ನು ದೇಶದ ಗ್ರಾಹಕರಿಗೆ ನೀಡದೆ ಪೆಟ್ರೋಲ್ ಗೆ 10 ರೂಪಾಯಿ ಡಿಸೇಲ್ ಗೆ 13 ರೂಪಾಯಿ ತೆರಿಗೆ ಹೆಚ್ಚಳ ಮಾಡಿ ದೇಶದ ಜನತೆಗೆ ದ್ರೋಹ ಮಾಡಿದ್ದಾರೆಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್ ಕೆಂದ್ರ ಸಕಾ೯ರದ ನೀತಿಯನ್ನು ಖಂಡಿಸಿದ್ದಾರೆ .
ದೇಶದ ಜನತೆ ಕೋರಾನ ವೈರಸ್ ಸಂಕಷ್ಟದಿಂದ ಉದ್ಯೋಗ, ವ್ಯಾಪಾರ, ದುಡಿಮೆ ಇಲ್ಲದೆ ತೀವ್ರ ಸಂಕಷ್ಟದಲ್ಲಿರುವ ಜನತೆಗೆ ಗಾಯದ ಮೇಲೆ ಬರೆ ಎಳೆಯಲಾಗಿದೆ ಎಂದು ಅವರು ದೂರಿದ್ದಾರೆ. ಕಚ್ಚಾ ತೈಲದ ಬೆಲೆ ಕುಸಿತದ ಲಾಭವನ್ನು ಗ್ರಾಹಕರಿಗೆ ನೀಡುವ ಬದಲು ಮೋದಿ ತಮ್ಮ ಬೊಕ್ಕಸಕ್ಕೆ ಪಡೆಯುವ ಮೂಲಕ ಮೋದಿ ಸಕಾ೯ರ ಆಥಿ೯ಕ ಅರಾಜಕತೆಗೆ ನಿಂತಿದೆ ಎಂದು ಅವರು ಟೀಕಿಸಿದ್ದಾರೆ.
ಪೆಟ್ರೋಲ್, ಡಿಸೇಲ್ ಹೆಚ್ಚುವರಿ ತೆರಿಗೆಯಿಂದ ಗ್ರಾಹಕರಿಗೆ ಹಂಚಿಕೆಯಾಗ ಬೇಕಾಗಿದ್ದ ಪ್ರಸಕ್ತ ಸಾಲಿನ ರೂ ಒಂದು ಲಕ್ಷ ಅರವತ್ತು ಸಾವಿರ ಕೋಟಿ ಹೆಚ್ಚುವರಿ ಆದಾಯವನ್ನು ಮೋದಿ ಸಕಾ೯ರ ಪಡೆಯುವ ಮೂಲಕ ಪರೋಕ್ಷವಾಗಿ ಬೆಲೆ ಏರಿಕೆಗೆ ಕಾರಣರಾಗಿದ್ದರೆಂದು ಮೋದಿ ಸಕಾ೯ರವನ್ನು ಟೀಕಿಸಿದ್ದಾರೆ. ಕಳೆದ ಎರಡು ತಿಂಗಳಲ್ಲಿ ತೆರಿಗೆ ಹೆಚ್ಚಳ ಮಾಡಿರುವುದು ಎರಡನೇ ಬಾರಿ ದೆಹಲಿಯಲ್ಲಿ ಪೆಟ್ರೋಲ್ ಮೂಲ ಬೆಲೆ 18.28 ರೂ ಆಗಿದೆ ಅದರೆ ಅಬಕಾರಿ ತೆರಿಗೆ 32.98 ರೂ ಡೀಲರ್ ಕವೀುಷನ್ 3. 56 ರೂ ಹಾಗೂ ವ್ಯಾಟ್ 16.44 ರೂ ಅಗಿದೆ ಇದರಿಂದ ಪೆಟ್ರೋಲ್ ಬೆಲೆ 1 ಲೀಟರ್ ಗೆ 71.26 ರೂಪಾಯಿ ಬೆಲೆ ತೆರ ಬೇಕಾಗಿದೆ. ಅದೇ ರೀತಿ ಡಿಸೇಲ್ ಬೆಲೆಯೂ ಸಹ ಲೀಟರ್ ಗೆ ರೂ 18.78 ರೂ ಇದ್ದು ಕೆಂದ್ರ ರಾಜ್ಯ ತೆರಿಗೆ ಸೇರಿ ಒಂದು ಲೀಟರ್ ಡಿಸೇಲ್ ಬೆಲೆ 69.39 ರೂ ಅಗಿದೆ .ಪೆಟ್ರೋಲ್ ಡಿಸೇಲ್ ಮೇಲಿನ ತೆರಿಗೆ ಹೆಚ್ಚಳ ನೋಡಿದರೆ ಮೂಗಿಗಿಂತ ಮೂಗುತಿ ಭಾರವಾಗಿದೆ ಎಂದಿದ್ದಾರೆ.



