ಭತ್ತದ ಸಸಿ ಮಡಿ ನಿರ್ವಹಣೆ ಬಗ್ಗೆ ಇಲ್ಲಿದೆ ಮಾಹಿತಿ..!

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ ಭತ್ತದ ಸಸಿ ಮಡಿ ಮಾಡುವ ಕಾರ್ಯ ಪ್ರಗತಿಯಲ್ಲಿದೆ.  ಬಿತ್ತನೆಯಾಗಿ ೧೦ ರಿಂದ ೧೨ ದಿವಸದ ಸಸಿಮಡಿಯಲ್ಲಿ ಹಳದಿ ಕಾಂಡ ಕೊರಕದ ಕೀಟವು ಎಲೆಯ ತುದಿಯಲ್ಲಿ ತತ್ತಿಗಳ ಗುಂಪು ಇಡುತ್ತದೆ.

ಒಂದು ಗುಂಪಿನಲ್ಲಿ ಸುಮಾರು 15 ರಿಂದ 80 ಮೊಟ್ಟೆಗಳು ಇರುತ್ತವೆ.  ಈ ಮೊಟ್ಟೆಗಳಿಂದ ಮರಿ ಹುಳುವು ಭತ್ತದ ಕಾಂಡವನ್ನು ಕೊರೆದು ಸುಳಿಯನ್ನು ಒಣಗುವಂತೆ ಮಾಡುತ್ತದೆ.  ಇಂತಹ ಸಸಿಗಳು ನಾಟಿ ಮಾಡಲು ಯೋಗ್ಯವಾಗಿರುವುದಿಲ್ಲ.

paddy cultivation kvkv davangere

ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಮಲ್ಲಿಕಾರ್ಜುನ ಬಿ.ಓ. ಅವರು ಭತ್ತದ ಸಸಿ ಮಡಿಗಳಿಗೆ ಭೇಟಿ ಮಾಡಿದ ಸಂದರ್ಭದಲ್ಲಿ ಹಳದಿ ಕಾಂಡ ಕೊರಕದ ಬಾಧೆ ನಿರ್ವಹಣಗೆ ತತ್ತಿನಾಶಕ ಪ್ರೋಫೇನೋಪಾಸ್ 2 ಮಿ.ಲೀ. ಅಥವಾ  ಕ್ಲೋರ್‌ಪೈರಿಫಾಸ್ 2 ಮಿ.ಲೀ. ಲೀಟರ್‌ನಲ್ಲಿ ಕರಗಿಸಿ ಸಸಿ ಮಡಿಗೆ ಸಿಂಪರಣೆ ಮಾಡಬೇಕು. 2 ಮೋಹಕ ಬಲೆಗಳ ಅಳವಡಿಸುವುದು ಸೂಕ್ತವೆಂದು ತಿಳಿಸಿದರು.

ಸಸಿಗಳನ್ನು ನಾಟಿ ಮಾಡುವ ಸಂದರ್ಭದಲ್ಲಿ ತುದಿಯ ಎಲೆಗಳನ್ನು ಚಿವುಟಿ ನಾಟಿ ಮಾಡುವುದರಿಂದ ಹಳದಿ ಕಾಂಡಕೊರಕದ ಬಾಧೆಯನ್ನು ತಡೆಯಬಹುದು ಎಂದು ಕೇಂದ್ರದ ಮಣ್ಣು ವಿಜ್ಞಾನಿ ಸಣ್ಣಗೌಡ್ರು ಹೆಚ್.ಎಂ. ತಿಳಿಸಿದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *