Connect with us

Dvgsuddi Kannada | online news portal | Kannada news online

ಚುನಾವಣೆ ಅಕ್ರಮ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಕೊಡಲು ಹೋಗಿದ್ದ ಅಭ್ಯರ್ಥಿ ಏನು ಮಾಡಿದ್ರು ಗೊತ್ತಾ ..?

ದಾವಣಗೆರೆ

ಚುನಾವಣೆ ಅಕ್ರಮ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಕೊಡಲು ಹೋಗಿದ್ದ ಅಭ್ಯರ್ಥಿ ಏನು ಮಾಡಿದ್ರು ಗೊತ್ತಾ ..?

ಡಿವಿಜಿ  ಸುದ್ದಿ, ದಾವಣಗೆರೆ:  ಇತ್ತೀಚೆಗೆ ನಡೆದ ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಭಾರೀ ಜಿದ್ದಾಜಿದ್ದಿನ ಕಣವಾಗಿದ್ದ 17 ನೇ ವಾರ್ಡ್ ಸಿಪಿಐ ಅಭ್ಯರ್ಥಿ ಶ್ರೀಕಾಂತ್ ಚುನಾವಣೆಯಲ್ಲಿ ನಡೆದಿದೆ ಎಂದು  ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರಿಗೆ ದೂರು ನೀಡಲು ಹೋಗಿದ್ದರು.  ಮನವಿ  ಕೊಡುವಾಗ ಭಾವುಕರಾದ ಶ್ರೀಕಾಂತ್ ಕಣ್ಣಲ್ಲಿ ನೀರು ತುಂಬಿಕೊಂಡರು.

ಈ ದೃಶ್ಯ ಕಂಡ ಡಿಸಿ ಮತ್ತು ಎಸ್ಪಿ  ಅವರು ಸಿಪಿಐ ಅಭ್ಯರ್ಥಿ ಶ್ರೀಕಾಂತ್ ಅವರನ್ನು ಸಮಾಧಾನ ಮಾಡಿದರು. ನಾನು ಕಷ್ಟಪಟ್ಟು ಮನೆ ಮನೆ ಪ್ರಚಾರ ಮಾಡಿದ್ದೇನೆ. ಆದರೆ, ಇತರೆ ಅಭ್ಯರ್ಥಿಗಳು ವಾರ್ಡ್ ನಲ್ಲಿ ಹಣದ ಹೊಳೆನ್ನೇ ಹರಿಸಿದ್ದಾರೆ. ಗಲ್ಲಿ ಗಲ್ಲಿಯಲ್ಲಿ ಪಕ್ಷದ ಕಾರ್ಯಕರ್ತರು ಮತದಾರಿಗೆ ಆಮಿಷವೊಡ್ಡಿದ್ದಾರೆ. ಮತದಾರನ್ನು ಮನೆಯಿಂದ ಮತಗಟ್ಟೆ ಒಳಗಿನ ವರೆಗೂ ಆಟೋದಲ್ಲಿ ಕರೆದುಕೊಂಡು  ಬಂದು ತಮ್ಮ ಅಭ್ಯರ್ಥಿಗೆ ಮತ ಹಾಕುವಂತೆ ಮನವೊಲಿಸುತ್ತಿದ್ದರು. ಈ ಬಗ್ಗೆ ಚುನಾವಣೆ ಅಧಿಕಾರಿಗೆ ಸಾಕ್ಷಿ ಸಮೇತ ದೂರು ಕೊಟ್ಟರು ಕ್ರಮ ಕೈಗೊಳ್ಳಲಿಲ್ಲ ಎಂದು ಭಾವುಕರಾದರು.

shrikanth

ದಾವಣಗೆರೆ 17 ನೇ ವಾರ್ಡ್ ನಿಂದ ಸ್ಪರ್ಧಿಸಿದ್ದ ಸಿಪಿಐ ಅಭ್ಯರ್ಥಿ ಶ್ರೀಕಾಂತ್ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಇನ್ನು ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಜಿಲ್ಲಾ ಘಟಕದ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಸೋಲು ಕಂಡಿದ್ದಾರೆ.

 

 

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top