ಡಿವಿಜಿ ಸುದ್ದಿ, ದಾವಣಗೆರೆ: ಇತ್ತೀಚೆಗೆ ನಡೆದ ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಭಾರೀ ಜಿದ್ದಾಜಿದ್ದಿನ ಕಣವಾಗಿದ್ದ 17 ನೇ ವಾರ್ಡ್ ಸಿಪಿಐ ಅಭ್ಯರ್ಥಿ ಶ್ರೀಕಾಂತ್ ಚುನಾವಣೆಯಲ್ಲಿ ನಡೆದಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರಿಗೆ ದೂರು ನೀಡಲು ಹೋಗಿದ್ದರು. ಮನವಿ ಕೊಡುವಾಗ ಭಾವುಕರಾದ ಶ್ರೀಕಾಂತ್ ಕಣ್ಣಲ್ಲಿ ನೀರು ತುಂಬಿಕೊಂಡರು.
ಈ ದೃಶ್ಯ ಕಂಡ ಡಿಸಿ ಮತ್ತು ಎಸ್ಪಿ ಅವರು ಸಿಪಿಐ ಅಭ್ಯರ್ಥಿ ಶ್ರೀಕಾಂತ್ ಅವರನ್ನು ಸಮಾಧಾನ ಮಾಡಿದರು. ನಾನು ಕಷ್ಟಪಟ್ಟು ಮನೆ ಮನೆ ಪ್ರಚಾರ ಮಾಡಿದ್ದೇನೆ. ಆದರೆ, ಇತರೆ ಅಭ್ಯರ್ಥಿಗಳು ವಾರ್ಡ್ ನಲ್ಲಿ ಹಣದ ಹೊಳೆನ್ನೇ ಹರಿಸಿದ್ದಾರೆ. ಗಲ್ಲಿ ಗಲ್ಲಿಯಲ್ಲಿ ಪಕ್ಷದ ಕಾರ್ಯಕರ್ತರು ಮತದಾರಿಗೆ ಆಮಿಷವೊಡ್ಡಿದ್ದಾರೆ. ಮತದಾರನ್ನು ಮನೆಯಿಂದ ಮತಗಟ್ಟೆ ಒಳಗಿನ ವರೆಗೂ ಆಟೋದಲ್ಲಿ ಕರೆದುಕೊಂಡು ಬಂದು ತಮ್ಮ ಅಭ್ಯರ್ಥಿಗೆ ಮತ ಹಾಕುವಂತೆ ಮನವೊಲಿಸುತ್ತಿದ್ದರು. ಈ ಬಗ್ಗೆ ಚುನಾವಣೆ ಅಧಿಕಾರಿಗೆ ಸಾಕ್ಷಿ ಸಮೇತ ದೂರು ಕೊಟ್ಟರು ಕ್ರಮ ಕೈಗೊಳ್ಳಲಿಲ್ಲ ಎಂದು ಭಾವುಕರಾದರು.

ದಾವಣಗೆರೆ 17 ನೇ ವಾರ್ಡ್ ನಿಂದ ಸ್ಪರ್ಧಿಸಿದ್ದ ಸಿಪಿಐ ಅಭ್ಯರ್ಥಿ ಶ್ರೀಕಾಂತ್ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಇನ್ನು ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಜಿಲ್ಲಾ ಘಟಕದ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಸೋಲು ಕಂಡಿದ್ದಾರೆ.



