ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಪಾಲಿಕೆ ಮಾಜಿ ಸದಸ್ಯ ಎಲ್.ಎಎಂ ಹನುಮಂತಪ್ಪ ಅವರ ಪುತ್ರ ಹಾಗೂ ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ಸಿನ ಜಿಲ್ಲಾ ಉಪಾಧ್ಯಕ್ಷ ಸಾಗರ್ ಎಲ್.ಎಮ್.ಹೆಚ್ ಬಡ ಕುಟುಂಬಗಳಿಗೆ ತರಕಾರಿ ವಿತರಿಸಿದರು.

ದಾವಣಗೆರೆ ಮಹಾನಗರ ಪಾಲಿಕೆಯ 45ನೇ ವಾರ್ಡ್ ಎಸ್.ಜೆ.ಎಂ ನಗರ, ಕರೂರು, ಎಸ್ ಎಂ ಕೃಷ್ಣ ನಗರದ ಬಡ ಕುಟುಂಬಗಳಿಗೆ ಲಾಕ್ ಡೌನ್ ಹಿನ್ನೆಲೆ ತರಕಾರಿ ವಿತರಿಸಿದರು.
1000 ಕುಟುಂಬಗಳಿಗೆ ದಿನ ನಿತ್ಯ ಅಗತ್ಯವಾದ ತರಕಾರಿಗಳನ್ನು ನೀಡಿದರು. ಈ ಸಂದರ್ಭದಲ್ಲಿ ವಾರ್ಡ್ ನ ಮುಖಂಡರು, ಯುವಕರು ಸಾಥ್ ನೀಡಿದರು.




