Connect with us

Dvgsuddi Kannada | online news portal | Kannada news online

ಹಸಿದವರಿಗೆ ಅನ್ನ ನೀಡಿದ ನಲ್ಲೂರು ಸಹೋದರರ ಸೇವೆ ಶ್ಲಾಘನೀಯ: ಡಿ. ಬಸವರಾಜ್

ಪ್ರಮುಖ ಸುದ್ದಿ

ಹಸಿದವರಿಗೆ ಅನ್ನ ನೀಡಿದ ನಲ್ಲೂರು ಸಹೋದರರ ಸೇವೆ ಶ್ಲಾಘನೀಯ: ಡಿ. ಬಸವರಾಜ್

 ಡಿವಿಜಿ ಸುದ್ದಿ, ದಾವಣಗೆರೆ: ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವರಿಗೆ ಕಳೆದ ಒಂದು ವಾರದಿಂದ ನಗರ ವಿವಿಧ ಬಡಾವಣಗೆಯಲ್ಲಿ ಆಹಾರದ ಕಿಟ್ ವಿತರಿಸುತ್ತಿರುವ ಬೆಳ್ಳಿ, ಬಂಗಾರ ವರ್ತಕರಾದ ನಲ್ಲೂರು ಸಹೋದರರ ಸೇವೆ ಶ್ಲಾಘನೀಯ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್ ಅಭಿಪ್ರಾಯಪಟ್ಟರು.

nalluru food kit 2

ನಗರದ ಎಸ್ ಜೆಎಂ ನಗರದಲ್ಲಿ ಬಡ ಜನರಿಗೆ ನಲ್ಲೂರು ಸಹೋದರರಾದ ಎಸ್. ರಾಜಕುಮಾರ್ ಹಾಗೂ ಎಸ್ ರಾಘವೇಂದ್ರ ಅವರು ನೀಡಿದ ಆಹಾರದ ಕಿಟ್ ವಿತರಿಸಿ ಮಾತನಾಡಿದರು.

ಕೊರೊನಾ ವೈರಸ್ ಪರಿಣಾಮ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಇದರಿಂದ ಬಡವರು, ಕೂಲಿ ಕಾರ್ಮಿಕರಿಗೆ ತುಂಬಾ ತೊಂದರೆ ಆಗಿದೆ. ಇದನ್ನು ಮನಗಂಡ ಖ್ಯಾತ ಬೆಳ್ಳಿ, ಬಂಗಾರ ವರ್ತಕರಾದ ನಲ್ಲೂರು ಸಹೋದರರು ಬಡವರಿಗೆ  ಆಹಾರ ಕಿಟ್ ನೀಡುತ್ತಿದ್ದಾರೆ. ಇವರ ಸೇವೆ ದೇವರು ಮೆಚ್ಚುವಂತಹದು ಎಂದರು.

nalluru food kit 3

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಅಲ್ಲಾವಲಿ ಗಾಜಿಖಾನ್,  ಆರ್. ಅಬ್ದುಲ್, ಇನ್ ಟ್ಯಾಕ್ ಜಿಲ್ಲಾಧ್ಯಕ್ಷ ಕೆ.ಎಂ. ಮಂಜುನಾಥ್, ಕೊಂಡಜ್ಜಿ ಮಲ್ಲಿಕಾರ್ಜುನ್, ಡಿ.ಶಿವಕುಮಾರ್,  ಶ್ರೀನಿವಾಸ್  ವಿ, ಕೆಪಿಸಿಸಿ ಸಾಮಾಜಿಕ ಜಾಲತಾಣದ ಕಾರ್ಯದರ್ಶಿ ಕೆ.ಎಲ್. ಹರೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸುದ್ದಿಗಾಗಿ ವಾಟ್ಸಾಪ್ : 7483892205

ಇಮೇಲ್: dvgsuddi@gmail.com

 

 

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top