ಡಿವಿಜಿ ಸುದ್ದಿ, ದಾವಣಗೆರೆ: ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವೇ ಲಾಕ್ ಡೌನ್ ನಿಂದ ಜಿಲ್ಲೆಯ ಬೀಜ, ಗೊಬ್ಬರ ಮಾರಾಟಗಾರಿಗೆ ತೊಂದರೆಯಾಗಿದೆ. ಈ ವಿಚಾರವನ್ನು ಇಂದು ಜಿಲ್ಲಾಧಿಕಾರಿಗಳು ಸಿಎಂ ಜೊತೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಪ್ರಸ್ತಾಪಿಸಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಬೀಜ, ಗೊಬ್ಬರ ಮಾರಾಟ ಮಾಡಲು ಅನುಮತಿ ನೀಡಿದ್ದಾರೆ ಎಂದು ಬಿಜೆಪಿ ಜಿಲ್ಲಾ ರೈತಮೊರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ್ ತಿಳಿಸಿದ್ದಾರೆ.
ಲಾಕ್ ಡೌನ್ ನಿಂದ ರೈತರಿಗೆ ಮತ್ತು ಮಾರಾಟಗಾರಿಗೆ ತೊಂದರೆಯಾಗಿತ್ತು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ನಂತರ ನಡೆದ ಮಾನ್ಯ ಮುಖ್ಯಮಂತ್ರಿಗಳ ವೀಡಿಯೊ ಕಾನ್ಸರೆನ್ಸ್ ನಲ್ಲಿ ಈ ವಿಷಯ ಚರ್ಚಿಸಲಾಯಿತು. ಮುಖ್ಯಮಂತ್ರಿಗಳು ನಾಳೆಯಿಂದ ಎಲ್ಲಾ ಬೀಜ ಮತ್ತು ರಸಗೊಬ್ಬರ ಅಂಗಡಿಗಳು ರೈತರ ಅನುಕೂಲಕ್ಕಾಗಿ ಅಂಗಡಿಗಳನ್ನು ತೆರೆಯಲು
ಸೂಚನೆ ಕೊಟ್ಟಿದ್ದಾರೆ ಎಂದರು.
ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯಾಪಾರ ಮಾಡಬೇಕು.ಅಂಗಡಿಗೆ ಹೋಗಿಬರಲು ಪಾಸ್ ಗಳನ್ನೂ ಮಹಾನಗರ ಪಾಲಿಕೆ ಯಲ್ಲಿ ಅಂಗಡಿಯ ಲೈಸೆನ್ಸ್ ಕಾಪಿ ಕೊಟ್ಟು ಮಾಲೀಕರ ಹಾಗೂ ಕೆಲಸಗಾರರ ಪಾಸ್ ಪಡೆಯಲು ತಿಳಿಸಲಾಗಿದೆ. ಅಂಗಡಿ ತೆರೆಯಲು ಸಮಯದ ನಿರ್ಬಂಧ ಇರುವುದಿಲ್ಲ ಎಂದು ತಿಳಿಸಿದ್ದಾರೆ.



