ಡ್ರೋನ್ ಪ್ರತಾಪ್ ವಾಸ್ತವ್ಯ ಹೂಡಿದ್ದ ದಾವಣಗೆರೆಯ ಹೋಟೆಲ್ ಮಾಲೀಕನ ಎದುರು ಬಾಯಬಿಟ್ಟಿದ್ದ ಸತ್ಯ ಏನು ಗೊತ್ತಾ..?

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ಡಿವಿಜಿ ಸುದ್ದಿ, ದಾವಣಗೆರೆ:  ರಾಜ್ಯದಲ್ಲಿ ಕೊರೊನಾ ಅಬ್ಬರದ ಮಧ್ಯೆ ಡ್ರೋನ್ ಪ್ರತಾಪ್ ಭಾರೀ ಟ್ರೋಲ್ ಗೆ ಒಳಗಿದ್ದಾನೆ. ಅದು ಮೀಡಿಯಾ, ಸೋಷಿಯಲ್ ಮೀಡಿಯಾ ಸೇರಿದಂತೆ ಎಲ್ಲ ಕಡೆ ಪ್ರತಾಪನದ್ದೇ  ಸುದ್ದಿ… ಟ್ರೋನ್ ತಯಾರಿಕೆಯಲ್ಲಿ  ಸಾಧನೆ ಮಾಡಿರುವುದಾಗಿ ತನ್ನನ್ನು ತಾನು  ಬಿಂಬಿಸಿಕೊಂಡು ಇಡೀ ರಾಜ್ಯದ ಜನತೆಗೆ ಕಾಗೆ ಹಾರಿಸಿದ ಡ್ರೋನ್ ಪ್ರತಾಪ್ ನಿಗೆ  ಇನ್ನೊಂದು ವಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಾನು ಟ್ರೋಲ್ ಆಗುತ್ತೇನೆ ಎಂಬು ಸತ್ಯ ಗೊತ್ತಿತ್ತಂತೆ….

ಪ್ರತಾಪ್  ದಾವಣಗೆರೆಯ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದ ಮಾಲೀಕನ ಬಳಿ ಈ ವಿಚಾರವಾಗಿ ಮಾತನಾಡಿದ್ದು ಇದೀಗ ವೈರಲ್ ಆಗುತ್ತಿದೆ.  ಪ್ರಧಾನಿ ನರೇಂದ್ರ ಮೋದಿ ಅವರು  ನನಗೆ ಫೋನ್ ಮಾಡಿ ನೌಕರಿಯ ಆಫರ್ ಕೊಟ್ಟಿದ್ದಾರೆ.  ಅದನ್ನು ತಿರಸ್ಕರಿಸಿದರೆ ಮಾಧ್ಯಮಗಳಲ್ಲಿ ಟ್ರೋಲ್ ಆಗುತ್ತೇನೆ ಎಂಬುದು ನನಗೆ ಗೊತ್ತಿದೆ.  ಹೀಗಾಗಿ ಆಫರ್ ಬಂದಿದ್ದರೂ, ಬಂದಿಲ್ಲ  ಎಂದು ಹೇಳುತ್ತಿದ್ದೇನೆ ಎಂದು  ಮಂಡ್ಯದ ಡ್ರೋನ್ ಪ್ರತಾಪ್ , ದಾವಣಗೆರೆಯ  ಅರುಣಾ ಚಿತ್ರಮಂದಿರ ಬಳಿಯ ಶ್ರೀಗಂಧ ರೆಸಿಡೆನ್ಸಿ ಹೋಟೆಲ್‌ನ ಮಾಲೀಕ ಜೊತೆ ಮಾತನಾಡಿದ್ದನು.

prathapa 2

ಈ ಬಗ್ಗೆ ಶ್ರೀಗಂಧ ರೆಸಿಡೆನ್ಸಿ ಹೋಟೆಲ್‌ನ ಮಾಲೀಕ  ವಿನಾಯಕ ಅವರು ಮಾತನಾಡಿ, ಜುಲೈ 1ರಿಂದ 8ರವರವರೆಗೆ ನಗರದ ತಮ್ಮ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ ಪ್ರತಾಪ್‌, ತಮ್ಮೊಂದಿಗೆ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದರು. ಅದರಲ್ಲಿ ಮುಖ್ಯವಾಗಿ ಪ್ರಧಾನಿಯೇ  ದೂರವಾಣಿ ಕರೆ ಮಾಡಿ ಡಿಆರ್‌ಡಿಒದಲ್ಲಿ ಉದ್ಯೋಗದ ಆಫರ್ ಮಾಡಿದ್ದಾರೆ. ಅದನ್ನು ಒಪ್ಪಿಕೊಳ್ಳಬೇಕೋ, ಬಿಡಬೇಕೋ  ಗೊತ್ತಿಲ್ಲ. ಆದರೆ, ತಿರಸ್ಕರಿಸಿದರೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಆಗುತ್ತೇನೆ ಎಂದು ಹೇಳಿದ್ದನು.

prathapa 3

ಟ್ರೋಲ್ ಆದ ನಂತರ ಮೂರು ದಿನಗಳ ಹಿಂದೆ ನನಗೆ ದೂರವಾಣಿ ಕರೆ ಮಾಡಿ ಫ್ರಾನ್ಸ್‌ನಿಂದ  ನನಗೊಂದು  ಅವಕಾಶ ಬಂದಿದೆ. ಅದನ್ನು ಒಪ್ಪಿಕೊಂಡರೆ ಎಲ್ಲವೂ ಮುಚ್ಚಿಹೋಗುತ್ತದೆ ಎಂದು ಹೇಳಿದ್ದನಂತೆ. ನಮ್ಮ ಹೋಟೆಲ್‌ ಬಂದಿದ್ದಾಗ ಅವರು ಮಾತನಾಡಿದ ವಿಡಿಯೋವನ್ನು  ಸಾಮಾಜಿಕ ಜಾಲತಾಣಕ್ಕೆ  ಅಪ್‌ಲೋಡ್ ಮಾಡಬೇಕು ಎಂದುಕೊಂಡಿದ್ದೆ..ಅಷ್ರಲ್ಲಿಯೇ  ಅವರು ಟ್ರೋಲ್ ಆದರು.  ಜುಲೈ 8ರಂದು ಕೊಠಡಿ ಖಾಲಿ ಮಾಡಿದ ಬಳಿಕ ಅವರ ಬಗ್ಗೆ ಟೀಕೆಗಳು ಬಂದವು. ಕೆಲಸದ ನಿಮಿತ್ತ ವಾಸ್ತವ್ಯ ಹೂಡುತ್ತಿದ್ದೇನೆಯೇ ಹೊರತು, ಕ್ವಾರಂಟೈನ್‌ಗಾಗಿ ಅಲ್ಲ ಎಂದಿದ್ದರು. ನಮ್ಮ ಹೋಟೆಲ್‌ಗೆ ಇದಕ್ಕೂ ಮುನ್ನ  ಒಂದು ಬಾರಿ ಬಂದಿದ್ದರು ಎಂದು ತಿಳಿಸಿದರು.

 

 

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *