Connect with us

Dvgsuddi Kannada | online news portal | Kannada news online

ದಾವಣಗೆರೆ: 9 ತಿಂಗಳ ಮಗಳನ್ನು ಉಳಿಸಿಕೊಳ್ಳಲು ಪತ್ರಕರ್ತನ ಪರದಾಟ; ಸಹೃದಯರು ಕೈಲಾದ ಸಹಾಯ ಮಾಡಿ..

ದಾವಣಗೆರೆ

ದಾವಣಗೆರೆ: 9 ತಿಂಗಳ ಮಗಳನ್ನು ಉಳಿಸಿಕೊಳ್ಳಲು ಪತ್ರಕರ್ತನ ಪರದಾಟ; ಸಹೃದಯರು ಕೈಲಾದ ಸಹಾಯ ಮಾಡಿ..

ಡಿವಿಜಿ ಸುದ್ದಿ, ದಾವಣಗೆರೆ: ಈತ ಅಣ್ಣಪ್ಪ ಅಂತಾ. ದಾವಣಗೆರೆ ಬಳಿಯ ಹೊಸಕುಂದವಾಡದ ನಿವಾಸಿ. ಸಂಜೆ ವಾಣಿ ಪತ್ರಿಕೆ ವರದಿಗಾರನಾಗಿದ್ದ, ಕೊರೊನಾ ಸಂಕಷ್ಟದ ಸಮಯದಲ್ಲಿ ಕೆಲಸ ಕಳೆದ ಕೊಂಡವರಲ್ಲಿ ಈತನು ಒಬ್ಬ. ಈ ಸಂಕಷ್ಟದ ನಡುವೆಯೇ ಮತ್ತೊಂದು ಸಂಕಷ್ಟ ಎದುರಾಗಿದೆ.

ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿರುವ ತನ್ನ ಒಂಬತ್ತು ತಿಂಗಳ ಮನಸ್ವಿ ಎಂಬ ಮಗಳನ್ನು ಉಳಿಸಿಕೊಳ್ಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಗಳಿಗೆ ರೋಗ ನಿರೋಧಕ ಶಕ್ತಿ(COMBINED IMMUNODEFICIENCY) ಇಲ್ಲ. ಹೀಗಾಗಿ ಒಂದು ತಿಂಗಳಿಂದ ಬೆಂಗಳೂರಿನ ನಾರಾಯಣ ಹೃದಯಾಲಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಿತ್ಯ ಹತ್ತು ಸಾವಿರ ರೂಪಾಯಿ ಬರೀ ಔಷಧಿಗೆ ಖರ್ಚಾಗುತ್ತಿದೆ.

annappa 3

ಮಗುವಿಗೆ BONE MORROW TRONSPLANT ಮಾಡಬೇಕು ವೈದ್ಯರು ಸಲಹೆ ನೀಡಿದ್ದಾರೆ. ಇದಕ್ಕೆ 20 ರಿಂದ 25 ಲಕ್ಷ ರೂಪಾಯಿ ವೆಚ್ಚವಾಗಲಿದೆ. ಈಗಾಗಲೇ ಸಂಕಷ್ಟದಲ್ಲಿರುವ ಅಣ್ಣಪ್ಪಗೆ ಈ ಹಣವನ್ನು ಜೋಡಿಸುವುದು ಕಷ್ಟವಾಗಿದೆ. ಮಗಳ ಸ್ಥಿತಿ ಕಂಡು ಕಣ್ಣೀರು ಹಾಕುತ್ತಿದ್ದಾನೆ. ಹೀಗಾಗಿ ಹನಿ ಹನಿ ಕೂಡಿದರೆ ಹಳ್ಳ ಎನ್ನುವಂತೆ ಸಹೃದಯರು ನಿಮ್ಮ ಕೈಲಾದ ಸಹಾಯ ಮಾಡಿದರೆ, ತುಂಬಾ ಸಹಾಯವಾಗಲಿದೆ. ಹೆಚ್ಚಿನ ಅಣ್ಣಪ್ಪ ಹೊಸಕುಂದವಾಡ ಫೋನ್ ನಂಬರ್: 8660625034 ಸಂಪರ್ಕಿಸಿ

ಬ್ಯಾಂಕ್ ಖಾತೆ ಸಂಖ್ಯೆ:

annappa 2

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top