Connect with us

Dvgsuddi Kannada | online news portal | Kannada news online

ಆರ್‌ಎಕ್ಸ್-100 ಬೈಕ್  ಕೊಡಿಸದಿದ್ದಕ್ಕೆ ವಿದ್ಯಾರ್ಥಿ ನೇಣಿಗೆ ಶರಣು

ಕ್ರೈಂ ಸುದ್ದಿ

ಆರ್‌ಎಕ್ಸ್-100 ಬೈಕ್  ಕೊಡಿಸದಿದ್ದಕ್ಕೆ ವಿದ್ಯಾರ್ಥಿ ನೇಣಿಗೆ ಶರಣು

ಡಿವಿಜಿ ಸುದ್ದಿ, ದಾವಣಗೆರೆ: ಆರ್‌ಎಕ್ಸ್-100 ಬೈಕ್ ಕೊಡಿಸಲಿಲ್ಲವೆಂದು ಡಿಪ್ಲೋಮಾ ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಕೆಟಿಜೆ ನಗರ ವ್ಯಾಪ್ತಿಯ ಅಂಬಿಕಾ ನಗರದಲ್ಲಿ ನಡೆದಿದೆ.

ಅಂಬಿಕಾ ನಗರದ ಬಿ ಬ್ಲಾಕ್‍ನ ನಿವಾಸಿ ಮಂಜುನಾಥ್ (20) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಮಂಜುನಾಥ್ ಸಿವಿಲ್ ಇಂಜಿನಿಯರ್ ಡಿಪ್ಲೋಮಾ ವಿದ್ಯಾರ್ಥಿಯಾಗಿದ್ದ. ಮೃತ ವಿದ್ಯಾರ್ಥಿ ಗ್ರಾಮಾಂತರ ಪೊಲೀಸ್ ಠಾಣೆಯ ಹಿರಿಯ ಪೇಗೆ ದೇವೇಂದ್ರಪ್ಪ ಅವರ ಮಗ .

ಮಂಜುನಾಥ್‍ಗೆ ಈಗಾಗಲೇ ರಾಯಲ್ ಎನ್‍ಫೀಲ್ಡ್ ಬೈಕ್ ಕೊಡಿಸಲಾಗಿದ್ದರೂ, ತನಗೆ ಆರ್‌ಎಕ್ಸ್-100 ಬೈಕ್ ಕೊಡಿಸುವಂತೆ ಕೇಳಿದ್ದ. ಮಗನ ಹಠದಿಂದಾಗಿ ತಂದೆಯೂ ಸಹ ಒಂದು ವಾರದಲ್ಲಿ ಬೈಕ್ ಕೊಡಿಸುವುದಾಗಿ ಭರವಸೆ ನೀಡಿದ್ದರು.ಆದರೆ,  ಮಂಜುನಾಥ್ ಬೇಸರಗೊಂಡು ಸೋಮವಾರ ರಾತ್ರಿ ಊಟ ಮಾಡದೆ ಮಹಡಿಗೆ ಹೋಗಿದ್ದ.ಮಗ ಮಲಗಲು  ಹೋಗಿದ್ದಾನೆ ಎಂದು ಪೋಷಕರು ತಿಳಿದ್ದರು. ಆದರೆ ಮಂಜುನಾಥ್  ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಕ್ರೈಂ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top