ಡಿವಿಜಿ ಸುದ್ದಿ, ದಾವಣಗೆರೆ: ಆರ್ಎಕ್ಸ್-100 ಬೈಕ್ ಕೊಡಿಸಲಿಲ್ಲವೆಂದು ಡಿಪ್ಲೋಮಾ ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಕೆಟಿಜೆ ನಗರ ವ್ಯಾಪ್ತಿಯ ಅಂಬಿಕಾ ನಗರದಲ್ಲಿ ನಡೆದಿದೆ.
ಅಂಬಿಕಾ ನಗರದ ಬಿ ಬ್ಲಾಕ್ನ ನಿವಾಸಿ ಮಂಜುನಾಥ್ (20) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಮಂಜುನಾಥ್ ಸಿವಿಲ್ ಇಂಜಿನಿಯರ್ ಡಿಪ್ಲೋಮಾ ವಿದ್ಯಾರ್ಥಿಯಾಗಿದ್ದ. ಮೃತ ವಿದ್ಯಾರ್ಥಿ ಗ್ರಾಮಾಂತರ ಪೊಲೀಸ್ ಠಾಣೆಯ ಹಿರಿಯ ಪೇಗೆ ದೇವೇಂದ್ರಪ್ಪ ಅವರ ಮಗ .
ಮಂಜುನಾಥ್ಗೆ ಈಗಾಗಲೇ ರಾಯಲ್ ಎನ್ಫೀಲ್ಡ್ ಬೈಕ್ ಕೊಡಿಸಲಾಗಿದ್ದರೂ, ತನಗೆ ಆರ್ಎಕ್ಸ್-100 ಬೈಕ್ ಕೊಡಿಸುವಂತೆ ಕೇಳಿದ್ದ. ಮಗನ ಹಠದಿಂದಾಗಿ ತಂದೆಯೂ ಸಹ ಒಂದು ವಾರದಲ್ಲಿ ಬೈಕ್ ಕೊಡಿಸುವುದಾಗಿ ಭರವಸೆ ನೀಡಿದ್ದರು.ಆದರೆ, ಮಂಜುನಾಥ್ ಬೇಸರಗೊಂಡು ಸೋಮವಾರ ರಾತ್ರಿ ಊಟ ಮಾಡದೆ ಮಹಡಿಗೆ ಹೋಗಿದ್ದ.ಮಗ ಮಲಗಲು ಹೋಗಿದ್ದಾನೆ ಎಂದು ಪೋಷಕರು ತಿಳಿದ್ದರು. ಆದರೆ ಮಂಜುನಾಥ್ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.



