Connect with us

Dvgsuddi Kannada | online news portal | Kannada news online

ದಾವಣಗೆರೆ: ತರಳಬಾಳು ಬಡಾವಣೆ, ಬಸವಪಟ್ಟಣಕ್ಕೂ ವ್ಯಾಪಿಸಿದ ಕೊರೊನಾ ಸೋಂಕು

ಪ್ರಮುಖ ಸುದ್ದಿ

ದಾವಣಗೆರೆ: ತರಳಬಾಳು ಬಡಾವಣೆ, ಬಸವಪಟ್ಟಣಕ್ಕೂ ವ್ಯಾಪಿಸಿದ ಕೊರೊನಾ ಸೋಂಕು

ಡಿವಿಜಿ ಸುದ್ದಿ, ದಾವಣಗೆರೆ:  ದಾವಣಗೆರೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ಸೋಂಕು ನಿಯಂತ್ರಣಕ್ಕೆ ಸಿಗುವ ಲಕ್ಷಣ ಕಾಣುತ್ತಿಲ್ಲ. ಇಲ್ಲಿವರೆಗೆ ಹಳೇ ದಾವಣಗೆರೆ ಭಾಗದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ  ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿತ್ತು. ಆದರೀಗ, ಹೊಸ ದಾವಣಗೆರೆಯ ಭಾಗಕ್ಕೆ ವಿಸ್ತರಿಸಿಕೊಂಡಿದೆ.

corona 1

ಹೊಸ ದಾವಣಗೆರೆಯ ಶಿವಕುಮಾರಸ್ವಾಮಿ ಬಡಾವಣೆಯಲ್ಲಿ ಶುಕ್ರವಾರ ಒಬ್ಬರಲ್ಲಿ ಕಾಣಿಸಿಕೊಂಡಿದ್ದ ಕೊರೊನಾ ಸೋಂಕು, ಇಂದು ಪ್ರತಿಷ್ಠಿತ ಬಡಾವಣೆಗಳಲ್ಲೊಂದಾದ  ತರಳಬಾಳು ಬಡಾವಣೆಯಲ್ಲಿ ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿರುವ 47 ವರ್ಷದ ಮಹಿಳೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇದಲ್ಲದೆ ಚನ್ನಗಿರಿ ತಾಲ್ಲೂಕಿನ ಬಸವಪಟ್ಟಣಕ್ಕೂ ಕೊರೊನಾ ವ್ಯಾಪಿಸಿದ್ದು, ಗುಜರಾತಿನಿಂದ ಬಂದಿದ್ದ 39 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.

ಜಿಲ್ಲೆಯಲ್ಲಿ ಇಂದು ಒಟ್ಟು 11 ಕೊರೊನಾ ಪಾಸಿಟಿವ್ ಪ್ರಕಣಗಳು ದಾಖಲಾಗಿದ್ದು, ವಿನಾಯಕ ನಗರದ ನಿವಾಸಿ 69 ವರ್ಷದ  ಪಿ- 1378 ಕೇಸ್ ನಿಂದ   38 ವರ್ಷದ ಪುರುಷ, 9 ಮತ್ತು 14 ವರ್ಷದ ಬಾಲಕರು  ಹಾಗೂ 36 ವರ್ಷದ ಮಹಿಳೆಯಲ್ಲಿ ಸೋಂಕು ತಗಲಿದೆ.

ppe kit 2 1

ಜಾಲಿನಗರದ ಮಹಿಳೆ ಕೇಸ್ ನಂಬರ್ 933 ರಿಂದ   9 ವರ್ಷದ ಬಾಲಕ , 26 ವರ್ಷದ ಮಹಿಳೆ, ಹಾಗೂ 22 ವರ್ಷದ ಯುವತಿಗೆ ವೈರಸ್ ಹರಡಿದೆ. ಇನ್ನು ಭಾಷಾನಗರದ 33 ವರ್ಷದ ಪುರುಷ  ಹಾಗೂ ಜಾಲಿನಗರದ  63 ವರ್ಷದ ಮಹಿಳೆಯಲ್ಲಿ ತೀವ್ರ ಉಸಿರಾಟ ತೊಂದರೆಯಿಂದ ಸೋಂಕು ಬಂದಿದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top