Connect with us

Dvgsuddi Kannada | online news portal | Kannada news online

ದಾವಣಗೆರೆ: ನೀರು ಪೂರೈಕೆ ವ್ಯತ್ಯಯ ವಿರುದ್ಧ ಪಾಲಿಕೆ ವಿಪಕ್ಷ ನಾಯಕ ನಾಗರಾಜ್ ಕಿಡಿ

ದಾವಣಗೆರೆ

ದಾವಣಗೆರೆ: ನೀರು ಪೂರೈಕೆ ವ್ಯತ್ಯಯ ವಿರುದ್ಧ ಪಾಲಿಕೆ ವಿಪಕ್ಷ ನಾಯಕ ನಾಗರಾಜ್ ಕಿಡಿ

ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಹೆಸರಿಗೆ ಮಾತ್ರ ಸ್ಮಾರ್ಟ್ ಸಿಟಿ ಆಡಳಿತದಲ್ಲಿ ಮಾತ್ರ ವರ್ಸ್ಟ್ ಸಿಟಿ ಎಂಬಂತಾಗಿದೆ.  ನಾಗರಿಕರಿಗೆ ಅತಿ ಮುಖ್ಯವಾಗಿ ಬೇಕಾಗಿರುವುದು ನೀರಿನ ಸೌಕರ್ಯ. ಆದರೆ, ಪಾಲಿಕೆ ಆಡಳಿತ ಈ ಬಗ್ಗೆ ಸರಿಯಾಗಿ ಗಮನಹರಿಸುತ್ತಿಲ್ಲ ಎಂದು ಪಾಲಿಕೆ ವಿರುದ್ಧ ವಿಪಕ್ಷ ನಾಯಕ ಎ. ನಾಗರಾಜ್ ಕಿಡಿಕಾರಿದರು.

doddabhathi

ಕಾಂಗ್ರೆಸ್ ಪಾಲಿಕೆಯ ಸದಸ್ಯರು ದೊಡ್ಡಬಾತಿ ಪಂಪಹೌಸ್ ಗೆ ಭೇಟಿ ನೀಡಿ ಅಲ್ಲಿರುವ ಅವ್ಯವಸ್ಥೆಯ ಪರಿಶೀಲನೆ ನಂತರ ಮಾತನಾಡಿದರು. ಹಳೆಯ ದಾವಣಗೆರೆ ಮತ್ತು ಹೊಸ ದಾವಣಗೆರೆಯ ಕೆಲವು ವಾರ್ಡುಗಳಿಗೆ ರಾಜನಹಳ್ಳಿ ಪಂಪಹೌಸ್ ನಿಂದ ನೀರು ಬರುತ್ತಿತ್ತು.  ಅಲ್ಲಿರುವ 1000 hp 2, 500 hp 3  ಮೋಟಾರುಗಳ ಪೈಕಿ 500 hp1 ಮೋಟರ್ ಹೊರತುಪಡಿಸಿ ಇನ್ನುಳಿದ 4 ಮೋಟಾರ್ ಗಳು ರಿಪೇರಿಗೆ ಬಂದಿವೆ.

ದೊಡ್ಡ ಬಾತಿಯ ಪಂಪಹೌಸ್ ನಲ್ಲಿ 550 hp 5 ಮೋಟಾರುಗಳ ಪೈಕಿ 5 ಕೆಟ್ಟು ನಿಂತಿವೆ.  ಅದರಲ್ಲಿ ಎರಡು ಮೋಟಾರುಗಳು ನಾಲ್ಕು ತಿಂಗಳಿನಿಂದ ರಿಪೇರಿಗೆ ಬಂದಿದ್ದ,  ಅವುಗಳನ್ನು ದುರಸ್ತಿ ಮಾಡದೇ ಪಾಲಿಕೆ ನಿರ್ಲಕ್ಷ್ಯ ವಹಿಸಿದೆ.  ಪಾಲಿಕೆಯ ಈ ರೀತಿಯ ನಿರ್ಲಕ್ಷ್ಯ  ನೋಡಿದರೆ ನಾವು  ಸ್ಮಾರ್ಟ್ ಸಿಟಿಯಲ್ಲೋ ಅಥವಾ ವರ್ಸ್ಟ್ ಸಿಟಿಯಲ್ಲೋ ಎಂಬ ಅನುಮಾನ ಬರುವಂತಾಗಿದೆ ಎಂದರು.

ಈ ಸದರ್ಭದಲ್ಲಿ ಪಾಲಿಕೆ ಸದಸ್ಯರಾದ ದೇವರಮನೆ ಶಿವಕುಮಾರ್, ಗಡಿ ಗುಡಾಳ್ ಮಂಜುನಾಥ್, ಕೆ.ಚಮನ್ ಸಾಬ್, ಪಾಮೆನಹಳ್ಳಿ ನಾಗರಾಜ್, ಮುಖಂಡರಾದ ಉಮೇಶ್, ಸಾಮಾಜಿಕ ಜಾಲತಾಣದ ಕೆ.ಎಲ್. ಹರೀಶ್ ಬಸಾಪುರ ಉಪಸ್ಥಿತರಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top