Connect with us

Dvgsuddi Kannada | online news portal | Kannada news online

ದಾವಣಗೆರೆ: ಚೀನಾ ವಸ್ತು ಬಹಿಷ್ಕರಿಸುವಂತೆ ಎಬಿವಿಪಿ ಮನವಿ

ದಾವಣಗೆರೆ

ದಾವಣಗೆರೆ: ಚೀನಾ ವಸ್ತು ಬಹಿಷ್ಕರಿಸುವಂತೆ ಎಬಿವಿಪಿ ಮನವಿ

ಡಿವಿಜಿ ಸುದ್ದಿ, ದಾವಣಗೆರೆ:  ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ದಾವಣಗೆರೆ ವತಿಯಿಂದ ಆತ್ಮ ನಿರ್ಭರ್ ಭಾರತ ಅಭಿಯಾನದ ಮೂಲಕ ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ಜನರಲ್ಲಿ  ಮನವಿ ಮಾಡಿದರು.

ನಗರದ ಗಾಂಧಿ ವೃತ್ತ ದಲ್ಲಿ ಅಭಿಯಾನ ನಡೆಸಿದ ಎಬಿವಿಪಿ,  ಚೀನಾ ವಸ್ತುಗಳನ್ನು  ಬಹಿಷ್ಕರಿಸುವಂತೆ ಪೋಸ್ಟರ್ ಬರಹಗಳ ಮೂಲಕ ಅರಿವು ಮೂಡಿಸಿದರು.

ನಾವೆಲ್ಲಾ ಚೀನಾ ಕುತಂತ್ರ ವಿರುದ್ಧ ಹೋರಾಡಬೇಕಾಗಿದೆ. ಕೊರೊನಾ ಸಮಯದಲ್ಲಿ ಚೀನಾ  ನಮ್ಮ ಯೋಧರ ವಿರುದ್ಧ ದಂಗೆ ಎದ್ದಿದೆ. ಇನ್ಮುಂದೆ ನಾವ್ಯಾರು ಯಾವುದೇ ಕಾರಣಕ್ಕೂ ಆ ದೇಶದ  ವಸ್ತುಗಳನ್ನು ಬಳಸಬಾರದು. ಆದೇಶದ ವಸ್ತುಗಳನ್ನು ಉಪಯೋಗಿಸಿದರೆ ನಮಗೆ ತೊಂದರೆ. ನಮ್ಮ ದೇಶದ ವಸ್ತುಗಳನ್ನು ಉಪಯೋಗಿಸಿ  ಭಾರತ ಸ್ವಾಲಂಬಿ ಆಗುವ ಸಮಯ ಬಂದಿದೆ ಎಂದು ಮನವಿ ಮಾಡಿದರು.

ಚೀನಾ ವಸ್ತುವನ್ನು ನಾವು ಖರೀದಿಸಿದರೆ ನಮ್ಮ ಪ್ರತಿಯೊಂದು ಮನೆಯ ದೀಪದ ಜ್ಯೋತಿಯನ್ನು ಹಾರಿಸಿದಂಗೆ ,ಯಾವುದೇ ಕಾರಣಕ್ಕೂ ಚೀನಾ ವಸ್ತುಗಳನ್ನು ಉಪಯೋಗಿಸುವುದು ನಾವು ಮುಂದಾಗಬಾರದು ಎಂದು ಕಾರ್ಯಕರ್ತ ವಿಜಯ್  ಹೇಳಿದರು.

ನಗರ ಕಾರ್ಯದರ್ಶಿ ಇಟಗಿ ಆಕಾಶ್ ಮಾತನಾಡಿ, ಆತ್ಮನಿರ್ಭರ್ ಭಾರತ್ ಸಮೃದ್ಧ ಭಾರತ ಅಭಿಯಾನ. ಇನ್ನು ಮುಂದೆ ನಾವು ಚೈನಾ ಹಾಗು ಇತರೆ ವಿದೇಶಿ ವಸ್ತುಗಳನ್ನ ಬಹಿಷ್ಕರಿಸೋ ಸಂಕಲ್ಪ ಮಾಡೋಣ, ಆರ್ಥಿವಾಗಿ ಚೀನಾದ ಬೆನ್ನು ಮೂಳೆ ಮುರಿಯೋಣ ಎಂದರು. ಕಾರ್ಯಕರ್ತರಾದ ಪೃಥ್ವಿ, ಸುಮನ್,ಮೋಹಿತ್,ಆದಿ,ಸುಹಾಸ್,ಅಮಿತ್,ರಾಜು, ಇತರರಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top