Connect with us

Dvgsuddi Kannada | online news portal | Kannada news online

ದಾವಣಗೆರೆ: ಎಬಿವಿಪಿ ಸಂಘಟನೆಯಿಂದ ಆತ್ಮ ನಿರ್ಭರ್ ಭಾರತ್ ಅಭಿಯಾನ

ದಾವಣಗೆರೆ

ದಾವಣಗೆರೆ: ಎಬಿವಿಪಿ ಸಂಘಟನೆಯಿಂದ ಆತ್ಮ ನಿರ್ಭರ್ ಭಾರತ್ ಅಭಿಯಾನ

ಡಿವಿಜಿ ಸುದ್ದಿ, ದಾವಣಗೆರೆ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್  ವತಿಯಿಂದ “ಆತ್ಮ ನಿರ್ಭರ್ ಭಾರತ್ ಅಭಿಯಾನ”ವನ್ನು ನಗರದ ರಾಮ್ ಅಂಡ್ ಕೋ ವೃತ್ತ ದಲ್ಲಿ ಆಚರಿಸಲಾಯಿತು.

ಚೀನಾ ವಸ್ತುಗಳನ್ನು ಬಹಿಷ್ಕರಿಸಿ ದೇಶಿಯ ವಸ್ತುಗಳನ್ನು ಬಳಸಿ ಎನ್ನುವ ಅಭಿಯಾನ ದಲ್ಲಿ ನಡೆ ಮುಂದೆ ನಡೆ ಮುಂದೆ ನಡೆ ಮುಂದೆ ದೇಶಿ ವಸ್ತುಗಳನ್ನು ಬಳಸುತ್ತ ಸಾಗೋಣ ಮುಂದೆ.  BOYCOTT CHINA PRODUCTS   ಈ ರೀತಿಯಾಗಿ ಪೋಸ್ಟರ್ ಬರಹಗಳ ಮೂಲಕ ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಎಂದು ಅಭಾವಿಪ ಕಾರ್ಯಕರ್ತರು ನಾಗರಿಕರಲ್ಲಿ ಮನವಿ ಮಾಡಿದರು.

ಒಂದು ವಿಭಿನ್ನ ಪ್ರಯತ್ನದ ಮೂಲಕ ದೇಶದ ಏಳಿಗೆಗೆ ಒಂದು ಮಾದರಿಯಾದರು. ಜಪಾನ್ ಮತ್ತು ಭಾರತದ ಜನರ ದೇಶಪ್ರೇಮದ ಬಗ್ಗೆ ಮತ್ತು  ಇದರಿಂದಾಗುವ ಎಕಾನಮಿ ಬಗ್ಗೆ ಯಾವ ಪರಿಣಾಮ ಬೀಳುತ್ತದೆ. ಅದಕ್ಕಾಗಿ ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಸ್ವದೇಶಿ ವಸ್ತುಗಳನ್ನು ಬಳಸಿ … ಎಂದು ನಾಗರಿಕರಿಗೆ ಒಂದು ನೈಜ್ಯ ಉದಾಹರಣೆಯ ಮೂಲಕ  ಎಬಿವಿಪಿ ನಗರಾಧ್ಯಕ್ಷ ಪವನ್ ರೇವಣಕರ್  ಮನವಿ ಮಾಡಿದರು.

ರಾಜ್ಯ ಕಾರ್ಯಕಾರಣಿ ಸದಸ್ಯರಾದ ಶರತ್ ,ನಗರ ಕಾರ್ಯದರ್ಶಿ ಇಟಗಿ ಆಕಾಶ್, ಅರುಣ್ ಮತ್ತು ಪೃಥ್ವಿ, ಸುಮನ್, ವಿಜಯ್ ಉಪಸ್ಥಿತರಿದ್ದರು.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top