ಡಿವಿಜಿ ಸುದ್ದಿ, ದಾವಣಗೆರೆ : ಜಿಲ್ಲೆ ಸುರಿಯುತ್ತಿರುವ ಭಾರೀ ಮಳೆಗೆ 30 ಗ್ರಾಮದಲ್ಲಿ ನೆರೆ ಹಾವಳಿ ಉಂಟಾಗಿದ್ದು,882 ಮನೆಗಳು ಕುಸಿದಿವೆ. ಇನ್ನು 3,308 ಹೆಕ್ಟೇರ್ ಭತ್ತದ ಬೆಳೆ ನಾಶವಾಗಿದ್ದು, 213 ಹೆಕ್ಟೇರ್ ತೋಟಗಾರಿಕೆ ಬೆಳೆಗೆ ಹಾನಿ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೇಳಗಿ ಮಾಹಿತಿ ನೀಡಿದರು.
ಮಳೆ ಹಾನಿಯಾಗಿ ನಾಲ್ಕು ದಿನದ ನಂತರ ದಾವಣಗೆರೆಗೆ ಆಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಅವರಿಗೆ ಮಾಹಿತಿ ನೀಡಿದರು.
ನಾಲ್ಕು ದಿನಗಳ ಮಳೆಗೆ ಜಿಲ್ಲೆಯಲ್ಲಿ ಇಬ್ಬರ ಸಾವು. ಜಿಲ್ಲೆಯ 30 ಗ್ರಾಮಗಳ ವ್ಯಾಪ್ತಿಯಲ್ಲಿ ಮಳೆಯಿಂದ ತೀವ್ರ ಹಾನಿಯಾಗಿದೆ.
882 ಮನೆಗಳು ಕುಸಿತಗೊಂಡಿದ್ದು, 14 ಜಾನುವಾರಗಳು ಸತ್ತಿವೆ. 3 ಮನೆ ಸಂಪೂರ್ಣ ಹಾನಿಯಾಗಿದ್ದು, 7 ಭಾಗಶಃ , ಇನ್ನು 802 ಪಾಶ್ವ ಮನೆ ಹಾನಿಯಾಗಿವೆ. ಎಬಿಸಿ ಕೆಟಗರಿ ಯಲ್ಲಿ ಪರಿಹಾರ ವಿತರಣೆಗೆ ನಿರ್ಧಾರ. ಎಬಿ ಕೆಟಗರಿಯ ಮನೆಗಳಿಗೆ ಪ್ರತಿ ಮನೆಗೆ 5ಲಕ್ಷ, ಮೊದಲ ಹಂತದಲ್ಲಿ ಮನೆ ಕಟ್ಟಿಕೊಳ್ಳಲು 1 ಲಕ್ಷ ಕೊಡಬೇಕು ನಿರ್ಧರಿಸಲಾಗಿದೆ. ಈಗಾಗಲೇ 62 ಜನರಿಗೆ ತಲಾ 10 ಸಾವಿರ ನೀಡಲಾಗಿದೆ ಎಂದರು.



