ಘಮ ಘಮಿಸಿದ ವೈವಿಧ್ಯಮಯ ಖಾದ್ಯಗಳು..

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ಡಿವಿಜಿ ಸುದ್ದಿ.ಕಾಂ. ದಾವಣಗೆರೆ: ಉತ್ತರ ಕರ್ನಾಟಕ ಖಡಕ್ ರೊಟ್ಟಿ, ಬಾಯಲ್ಲಿ ನೀರು ತರಿಸೋ ವಿಭಿನ್ನ ಶೈಲಿಯ ಚಟ್ನಿಪುಡಿ, ಪಲ್ಯ, ನಾರ್ಥ್ ಇಂಡಿಯಾನ್  ಫುಡ್ ಇಷ್ಟಪಡೋರಿಗಂತೂ ಪರೋಟಾ, ದಾಲ್, ವೆಜ್ ಫೈಡ್ ರೈಸ್, ಪಾಲಾವ್, ಪಾನಿಪುರಿ, ಕಚೋರಿ, ಗೋಬಿ, ಪಾವ್ ಬಜ್ಜಿ.. ಇನ್ನು ಚೈನೀಸ್ ಫುಡ್ ಲೈಕ್ ಮಾಡೋವರಿಗೆ ಡಿಫರೆಂಟ್ ಫುಡ್… ಅಯ್ಯೋ ಇದೇನಪ್ಪಾ ಫೈಸ್ಟಾರ್ ಹೋಟೆಲ್ ನಲ್ಲಿ ಸಿಗೋದು  ಐಟಂಗಳನ್ನು ಕೌಂಟ್ ಮಾಡ್ತಿದ್ದಾರೆ ಅಂದುಕೊಂಡ್ರಾ..! ಇದ್ಯಾವುದು ಫೈಸ್ಟಾರ್ ಹೋಟೆಲ್ ಫುಡ್ ಗಳಲ್ಲ… ಕಾಲೇಜ್ ವಿದ್ಯಾರ್ಥಿಗಳೇ ರೆಡಿ ಮಾಡಿರೋ ಫುಡ್ ಐಟಂಗಳು… ಅಷ್ಟಕ್ಕೂ ಯಾವ ಕಾಲೇಜ್ ವಿದ್ಯಾರ್ಥಿಗಳು ಈ ಫುಡ್ ತಯಾರು ಮಾಡಿರೋದು ಅಂತೀರಾ.. ಈ ಸ್ಟೋರಿ ಓದಿ..

ಡೈಲಿ ಅದೇ ಸಿಲಬಸ್, ಅದೇ ಲಕ್ಚರಿಂಗ್  ಕೇಳಿ ಬೋರ್ ಆಗಿದ್ದ ವಿದ್ಯಾರ್ಥಿಗಳಿಗೆ  ಬಿಎಸ್ ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ `ಆಹಾರ ಮೇಳ’ ಆಯೋಜಿಸಲಾಗಿತ್ತು .ಬಿಕಾಂ, ಬಿಬಿಎಂ, ಬಿಸಿಎ, ಮ್ಯಾನೇಜ್ಮೆಂಟ್  ವಿದ್ಯಾರ್ಥಿಗಳೇ ಆಹಾರ ಮೇಳದ ಸಂಪೂರ್ಣ ಜವಾಬ್ದಾರಿ ತಗೆದುಕೊಂಡಿದ್ದು ವಿಶೇಷವಾಗಿತ್ತು.

food fest dvgsuddi 4

ಕಾರ್ಗಿಲ್ -99,  ಫೇರ್ ಮಾನ್ ಟೀ,  ಫುಡ್ ಆಫ್ ಹೆವನ್, ಸ್ಪೈಸಿ ಗಾರ್ಡನ್,  ಉತ್ತರ   ಕರ್ನಾಟಕ ಸ್ಪೆಷಲ್, ಯಮ್ಮಿ ಟೇಸ್ಟ್,  ಟೇಸ್ಟ್ ಆಫ್ ಇಂಡಿಯಾ, ‍ ಚಾರ್ಟ್ ಸಿಟಿ-2017  ಹೆಸರಿನ ಸ್ಟಾಲ್‌ಗಳನ್ನು ಹಾಕಲಾಗಿತ್ತು. ಕಾಲೇಜಿನ 850 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಾವೇ ಹಣ ಖರ್ಚು ಮಾಡಿ  ಆಹಾರ ಮೇಳ ಆಯೋಜಿಸಿದ್ರು. ಸ್ಟಾಲ್ ಬುಕ್ಕಿಂಗ್, ಟಿಕೆಟ್ ಬುಕಿಂಗ್, ಬಂಡವಾಳ ಕ್ರೊಢೀಕರಣ ಸೇರಿದಂತೆ ಒಂದು ಉದ್ಯಮ ಯಶಸ್ವಿಗೊಳಿಸಲು ಅಗತ್ಯವಾದ   ಎಲ್ಲ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವುದು ಕಾಲೇಜಿನ ಮುಖ್ಯ ಉದ್ದೇಶವಾಗಿತ್ತು. ಮೇಳದಲ್ಲಿ 5 ಸಾವಿರಕ್ಕೂ ಹೆಚ್ಚು ಗ್ರಾಹಕರು ಆಹಾರ ಮೇಳದಲ್ಲಿ ಭಾಗಿಯಾಗಿದ್ದು ಮತ್ತೊಂದು ವಿಶೇಷ.

food fest dvgsuddi 2

ಕಾರ್ಯಕ್ರಮ ಉದ್ಘಾಟಿಸಿದ ಪ್ರಾಂಶುಪಾಲ ಎಂ.ಎಚ್ ಬೇತೂರು ಮಠ, ವಿದ್ಯಾರ್ಥಿಗಳಿಗೆ ಥೆರಿ ಕ್ಲಾಸ್ ಗಳಿಗಿಂತ ಪ್ರಾಕ್ಟಿಕಲ್ ಕ್ಲಾಸ್ ಗಳು ಮುಖ್ಯವಾಗಿವೆ. ಈ ಹಿನ್ನೆಲೆಯಲ್ಲಿ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಜ್ಞಾನ ಹೆಚ್ಚಿಸುವ ದೃಷ್ಟಿಯಿಂದ  ಈ ಆಹಾರ ಮೇಳ ಆಯೋಜಿಸಲಾಗಿದೆ. ಭವಿಷ್ಯದಲ್ಲಿ ವಿದ್ಯಾರ್ಥಿಗಳು ಎದುರಿಸಬೇಕಾದ  ಉದ್ಯಮ ಸವಾಲುಗಳನ್ನು ತಿಳಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.

food fest dvgsuddi 5

ಬಿ.ಎಸ್.ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜಿನ ಅಧ್ಯಕ್ಷ  ಬಿ.ಸಿ. ಶಿವಕುಮಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ  ವ್ಯಾಪಾರದ  ಅನುಭವ ಇರುವುದಿಲ್ಲ. ಹೀಗಾಗಿ  ವ್ಯಾಪಾರದಲ್ಲಿನ ಲಾಭ, ನಷ್ಟದ ಅನುಭವ  ಪಡೆಯುವ ಉದ್ದೇಶದಿಂದ  ಆಹಾರ ಮೇಳ ಆಯೋಜಿಸಲಾಗಿದೆ ಎಂದು ಹೇಳಿದರು.

ವಿನಾಯಕ ಎಜ್ಯುಕೇಷನ್ ಟ್ರಸ್ಟ್ ಉಪಾಧ್ಯಕ್ಷ ಕೆ.ಎಂ.ಹೊಳಿಯಪ್ಪ,  ಟ್ರಸ್ಟಿ ಎನ್.ಎ. ಮುರುಗೇಶ್, ಪಿಇಎಸ್ ಶಾಲೆ ಅಧ್ಯಕ್ಷ ಆರ್.ವೆಂಕಟರೆಡ್ಡಿ,  ಅಥಣಿ, ಎಸ್‌ಬಿಸಿ ಕಾಲೇಜಿನ ಪ್ರಾಧ್ಯಾಪಕರಾದ  ಷಣ್ಮುಖಪ್ಪ, ರಾಜಶೇಖರ್ ಉಪಸ್ಥಿತರಿದ್ದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *