ಡಿವಿಜಿ ಸುದ್ದಿ, ದಾವಣಗೆರೆ: ಎಟಿಎಂ ಕಾರ್ಡ್ ಬಳಸಲು ಬಾರದವರಿಂದ ಪಿನ್ ನಂಬರ್ ಪಡೆದು ನಗರದ ಎಟಿಎಂಗಳಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರನ್ಬು ಸಿಇಎನ್ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಈ ಆರೋಪಿಗಳು ಎಟಿಎಂ ಕಾರ್ಡ್ ಬಳಕೆ ಮಾಡಲು ಬರದವನ್ನೇ ಟಾರ್ಗೆಟ್ ಮಾಡಿ ಹಣ ದರೋಡೆ ಮಾಡುತ್ತಿದ್ದರು. ಮೊದಲು ಹಣ ಬಿಡಿಸಿಕೊಡುವುದಾಗಿ ನಂಬಿಸಿ ಪಿನ್ ಪಡೆಯುತ್ತಿದ್ದರು. ನಂತರ ತಮ್ಮ ಸ್ವೈಪ್ ಮಷಿನಲ್ಲಿ ನಕಲಿ ಕಾರ್ಡ್ ಬಳಸಿ ಹಣ ದೋಚುತ್ತಿದ್ದರು.
ಉತ್ತರ ಪ್ರದೇಶದ ಸರೋಜ್ , ಹರಿಲಾಲ್ ಬಂಧಿತರಾದ ಆರೋಪಿಗಳಾಗಿದ್ದಾರೆ. ಹರರಪನಹಳ್ಳಿ ತಾಲ್ಲೂಕಿನ ಬಂಡಿ ರಾಜಪ್ಪ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಬಂಧಿಸಲಾಗಿದೆ. ಬಂಧಿತರು ದಾವಣಗೆರೆ, ಹರಿಹರ, ಹರಪನಹಳ್ಳಿ ಸೇರಿತೆ ರಾಜ್ಯದ ವಿವಿಧ ಭಾಗದಲ್ಲಿ ಇಂತಹ ಕೃತ್ಯ ನಡೆಸುತ್ತಿದ್ದರು.



