ಡಿವಿಜಿ ಸುದ್ದಿ, ಬೆಂಗಳೂರು: ಕೋವಿಡ್ 19 ಮಹಾಮಾರಿಗೆ ತತ್ತರಿಸಿದ ರಾಜ್ಯ ಆರ್ಥಿಕತೆ ಚೇತರಿಕೆಗೆ ರಾಜ್ಯ ಸರ್ಕಾರ ಶಾಸಕರ ಸಂಬಳಕ್ಕೆ ಕತ್ತರಿ ಹಾಕಿದೆ. ಈ ಬಗ್ಗೆ ಅಧಿಕೃತವಾಗಿ ಇಂದು ಸರ್ಕಾರ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶದ ಪ್ರಕಾರ ಏಪ್ರಿಲ್ 1 ರಿಂದ ಒಂದು ವರ್ಷ ಅವಧಿಗ ಶಾಸಕರ ವೇತನದಲ್ಲಿ ಶೇ.30ರಷ್ಟು ಕಡಿತವಾಗಲಿದೆ. ಶಾಸಕರ ವೇತನ, ಪಿಂಚಣಿ, ಇತರೆ ಭತ್ಯೆ, ದೂರವಾಣಿ ವೆಚ್ಚ, ಚುನಾವಣೆ ಕ್ಷೇತ್ರ ಭತ್ಯೆ, ಅಂಚೆ ವೆಚ್ಚ, ಕೊಠಡಿ ಸೇವಕರ ಭತ್ಯೆ, ಚುನಾವಣಾ ಪ್ರಯಾಣ ಭತ್ಯೆ, ನಿಗಧಿತ ವಿಮಾನ, ರೈಲ್ವೆ ಪ್ರಯಾಣ ಭತ್ಯೆಯಲ್ಲಿ ಶೇ.30ರಷ್ಟು ಕಡಿತಗೊಳ್ಳಲಿದೆ.

ಯಾರ ಸಂಬಳ ಎಷ್ಟು ಇದೆ..?
ಮುಖ್ಯಮಂತ್ರಿ
ಸಂಬಳ – 50 ಸಾವಿರ ರೂ.ಮಾಸಿಕ
ಅತಿಥ್ಯ ಭತ್ಯೆ – 3 ಲಕ್ಷ ಸಾವಿರ ರೂ.
ವಾಹನ ಭತ್ಯೆ – 1 ಸಾವಿರ ಲೀಟರ್
ಮನೆ ಬಾಡಿಗೆ – 80 ಸಾವಿರ
ಸಂಪುಟ ದರ್ಜೆ ಸಚಿವರು
ಸಂಬಳ – 40 ಸಾವಿರ ರೂ.
ಅತಿಥ್ಯ ಭತ್ಯೆ – 3 ಲಕ್ಷ ರೂ.
ವಾಹನ ಭತ್ಯೆ – 1 ಸಾವಿರ ಲೀಟರ್
ಮನೆ ಬಾಡಿಗೆ – 80 ಸಾವಿರ ರೂ.
ಶಾಸಕರು
ಸಂಬಳ – 25 ಸಾವಿರ ರೂ.
ಕ್ಷೇತ್ರ ಪ್ರಯಾಣ ಭತ್ಯೆ – 40 ಸಾವಿರ ರೂ.
ದೂರವಾಣಿ ವೆಚ್ಚ – 20 ಸಾವಿರ ರೂ.
ಕ್ಷೇತ್ರ ಭತ್ಯೆ – 40 ಸಾವಿರ ರೂ.
ಪ್ರಯಾಣ ಭತ್ಯೆ ಪ್ರತಿ ಕಿ.ಮೀ.25 ರೂ. ಹೆಚ್ಚಳ
ಹೊರ ರಾಜ್ಯ ಭತ್ಯೆ – 2 ಸಾವಿರ ರೂ
ಔಷಧಿ ಭತ್ಯೆ – 5 ಸಾವಿರ ರೂ.



