ಡಿವಿಜಿ ಸುದ್ದಿ, ಬೆಂಗಳೂರು: ಕೊರೊನಾ ವೈರಸ್ ನಿಂದ ಜೀವ ಉಳಿಸಲು ಸರ್ಕಾರ ಹೋರಾಟ ಮಾಡುತ್ತಿದೆ. ಸರ್ಕಾರ ಜೀವ ಉಳಿಸುವ ಕಡೆ ಮಾತ್ರ ಕೇಂದ್ರಿಕೃತವಾಗಿದೆ. ಆದರೆ, ಜೀವನ ರಕ್ಷಿಸದೇ ಹೋದರೆ ಹಸಿವಿನಿಂದ ಜನ ಜೀವನ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಕೋವಿಡ್ -19 ವೈರಸ್ ನಿಂದ 'ಜೀವ ಮತ್ತು ಜೀವನ’ ಎರಡನ್ನೂ ಉಳಿಸುವುದು ಮುಖ್ಯ. ಈ ವರೆಗಿನ @CMofKarnataka ಪ್ರಯತ್ನಗಳು ಜೀವ ಉಳಿಸುವ ಬಗ್ಗೆಯೇ ಹೆಚ್ಚು ಕೇಂದ್ರಿತವಾಗಿದೆ. ‘’ಜೀವನ’’ ರಕ್ಷಿಸುವ ಪ್ರಯತ್ನ ಮಾಡದೆ ಇದ್ದರೆ ರೋಗಕ್ಕಿಂತ ಹಸಿವಿನಿಂದ ಹೆಚ್ಚು ಜನ ಜೀವ ಕಳೆದುಕೊಳ್ಳಬಹುದು.
— Siddaramaiah (@siddaramaiah) April 16, 2020
ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ಕೊರೋನಾ ವೈರಸ್ ನಿಂದ ಅಮೂಲ್ಯವಾದ ಜೀವದ ಜೊತೆ ಜೀವನವನ್ನೂ ಉಳಿಸಬೇಕಿದ. ಇದಕ್ಕಾಗಿ ತಜ್ಞರು, ಉದ್ಯಮಿಗಳು,ಅಧಿಕಾರಿಗಳು ಮತ್ತು ಹಿರಿಯ ರಾಜಕೀಯ ನಾಯಕರನ್ನೊಳಗೊಂದ ಕಾರ್ಯ ಪಡೆಯನ್ನು ತುರ್ತಾಗಿ ರಚಿಸಬೇಕಿದೆ ಎಂದು ಒತ್ತಾಯಿಸಿದ್ದಾರೆ.
ಕೋವಿಡ್-19 ವೈರಸ್ ನಿಂದ ಅಮೂಲ್ಯವಾದ ಜೀವದ ಜೊತೆ ಜೀವನವನ್ನೂ ಉಳಿಸುವುದಕ್ಕಾಗಿ ತಜ್ಞರು, ಉದ್ಯಮಿಗಳು, ಅಧಿಕಾರಿಗಳು ಮತ್ತು ಹಿರಿಯ ರಾಜಕೀಯ ನಾಯಕರನ್ನೊಳಗೊಂಡ ಕಾರ್ಯಪಡೆಯನ್ನು ತುರ್ತಾಗಿ ರಚಿಸಬೇಕೆಂದು @CMofKarnataka ಅವರನ್ನು ಒತ್ತಾಯಿಸುತ್ತೇನೆ.
— Siddaramaiah (@siddaramaiah) April 16, 2020
ಮತ್ತೊಂದು ಟ್ವಿಟ್ ನಲ್ಲಿ ಉದ್ಯಮಿಗಳು ಮುಚ್ಚಿವೆ. ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಅಸಂಘಟಿತ ಕ್ಷೇತ್ರದ ಕಾರ್ಮಿಕರು ಅಕ್ಷರಶಃ ನಿರ್ಗತಿಕರಾಗಿದ್ದಾರೆ. ಮಾರುಕಟ್ಟೆಯಲ್ಲಿ ಹಣ್ಣು, ತರಕಾರಿ ಇಲ್. ರೈತರು ಬೆಳೆದ ಬೆಳೆ ಬೀದಿಗೆ ಚೆಲ್ಲುತ್ತಿದ್ದಾರೆ. ಈ ಬಗ್ಗೆ ಸರ್ಕಾರ ತರ್ತಾಗಿ ಗಮನಹರಿಸಬೇಕಿದೆ ಎಂದಿದ್ದಾರೆ.
ಉದ್ಯಮಗಳು ಮುಚ್ಚಿವೆ, ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಅಸಂಘಟಿತ ಕ್ಷೇತ್ರದ ಕಾರ್ಮಿಕರು ಅಕ್ಷರಶ: ನಿರ್ಗತಿಕರಾಗಿದ್ದಾರೆ. ಮಾರುಕಟ್ಟೆಯಲ್ಲಿ ಹಣ್ಣು-ತರಕಾರಿ ಇಲ್ಲ, ರೈತರು ಬೆಳೆಯನ್ನು ಬೀದಿಗೆ ಚೆಲ್ಲುತ್ತಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ತುರ್ತಾಗಿ ಗಮನಹರಿಸಬೇಕಾಗಿದೆ.
— Siddaramaiah (@siddaramaiah) April 16, 2020



