ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ ಭಾನುವಾರ ಹೊಸದಾಗಿ 11 ಕೊರೊನಾ ಪಾಸಿಟಿವ್ ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 356 ಪಾಸಿಟ್ ಪ್ರಕರಣಗಳು ಪತ್ತೆಯಾಗುದ್ದು, ಒಟ್ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಬಳ್ಳಾರಿ ಜಿಲ್ಲೆಯಿಂದ ಬಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಮತ್ತು ಸ್ಥಳೀಯ ಆಜಾದ್ನಗರದ ವೃದ್ಧ ಮೃತಪಟ್ಟಿದ್ದಾರೆ.
ಹೃದಯದ ಸಮಸ್ಯೆ ಇದ್ದ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ 53 ವರ್ಷದ ವ್ಯಕ್ತಿ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದು ಕೊಟ್ಟೂರಿಗೆ ಮರಳಿದ್ದರು. ಬಳಿಕ ಮತ್ತೆ ಅನಾರೋಗ್ಯ ಉಂಟಾಗಿ ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಸೇರಿದ್ದರು. ಜೂನ್ 30ರಂದು ಮೃತಪಟ್ಟಿದ್ದರು.
ಇನ್ನು ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಆಜಾದ್ನಗರದ 68 ವರ್ಷದ ವೃದ್ಧ ಶನಿವಾರ ಮೃತಪಟ್ಟಿದ್ದಾರೆ. ಹೊನ್ನಾಳಿ ತಾಲ್ಲೂಕಿನ ತಮ್ಮ ಸಂಬಂಧಿಕರ ಮನೆಗೆ ಅವರು ಈಚೆಗೆ ತೆರಳಿದ್ದರು. ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಖಾಸಗಿ ವೈದಪಡೆದಿದ್ದರು ಸಲಹೆ ನೀಡಿದ್ದರು. ಅಲ್ಲದ. ಜುಲೈ 1ರಂದು ಆಸ್ಪತ್ರೆಗೆ ದಾಖಲಾಗಿದ್ದರು.
11 ಪಾಸಿಟಿವ್ ಪ್ರಕರಣ
ನಿಟುವಳ್ಳಿ ಕೊಟ್ಟೂರೇಶ್ವರ ಬಡಾವಣೆಯ 25 ವರ್ಷದ ಯುವಕ (ಪಿ.21681), ಹರಿಹರ ಗೌಸಿಯಾ ಕಾಲೊನಿಯ 30 ವರ್ಷದ ವ್ಯಕ್ತಿಗೆ (ಪಿ.21682) ಶೀತಜ್ವರ ಎಂದು ಗುರುತಿಸಲಾಗಿದೆ. ಹೊನ್ನಾಳಿ ತಾಲ್ಲೂಕಿನ ಕ್ಯಾಸಿನಕೆರೆಯ 39 ವರ್ಷದ ಮಹಿಳೆಗೆ (ಪಿ.21684) 19 ವರ್ಷದ ಬಾಲಕನ (ಪಿ.16672) ಸಂಪರ್ಕದಿಂದ ಸೋಂಕು ಬಂದಿದೆ.
ದಾವಣಗೆರೆ ಬೀಡಿ ಲೇಔಟ್ನ 48 ವರ್ಷದ ವ್ಯಕ್ತಿ (ಪಿ.21683) ಮತ್ತು 26 ವರ್ಷದ ಯುವತಿಗೆ (ಪಿ.21685) ಬೀಡಿ ಲೇಔಟ್ನ 15 ವರ್ಷದ ಬಾಲಕನಿಂದ (ಪಿ.10389) ಸೋಂಕು ತಗುಲಿದೆ.
ತೆಲಂಗಾಣದಿಂದ ಎಸ್ಎಸ್ ಲೇಔಟ್ನ ಕುಟುಂಬ ಹಿಂತಿರುಗಿದ್ದು, ಕುಟುಂಬದ ನಾಲ್ವರಿಗೆ ಕೊರೊನಾ ಬಂದಿದೆ. 38 ಮತ್ತು 32 ವರ್ಷದ ಪುರುಷರು (ಪಿ.21687, ಪಿ.21688) ಐದು ವರ್ಷದ ಬಾಲಕಿ (ಪಿ.21689), ಏಳು ವರ್ಷದ ಬಾಲಕ (ಪಿ.21690) ಸೋಂಕು ಬಂದವರು.
ಈ ಮನೆಯವರ (ಪಿ.21687) ಸಂಪರ್ಕದಿಂದ ಎಸ್ಎಸ್ ಲೇಔಟ್ನ 32 ವರ್ಷದ ಮಹಿಳೆಗೂ (ಪಿ.21686) ಸೋಂಕು ಬಂದಿದೆ.
ಭಾನುವಾರ ಏಳು ಮಂದಿ ಬಿಡುಗಡೆಗೊಂಡಿದ್ದಾರೆ. ಇಲ್ಲಿವರೆಗೆ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ 301 ಮಂದಿ ಬಿಡುಗಡೆಗೊಂಡಿದ್ದಾರೆ. 11 ಮಂದಿ ಮೃತಪಟ್ಟಿದ್ದಾರೆ. 44 ಸಕ್ರಿಯ ಪ್ರಕರಣಗಳಿವೆ.



