ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ ಇಂದು ಮತ್ತೆ ಕೊರೊನಾ ವೈರಸ್ ತ್ರಿಶತಕದ ಗಡಿ ದಾಟಿದ್ದು, ಬರೋಬ್ಬರಿ 378 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿನಿಂದ ಒಂದೇ ದಿನ 6 ಮಂದಿ ಸಾವನ್ನಪ್ಪಿದ್ದಾರೆ.
ಜಿಲ್ಲೆಯಲ್ಲಿ ಇಂದು ಕೊರೊನಾದಿಂದ 208 ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಗುಣಮುಖರಾಗಿ ಡಿಸ್ಚಾರ್ಜ್ ಸಂಖ್ಯೆ 6,236ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 8,526 ಮಂದಿ ಸೋಂಕಿತರಿದ್ದಾರೆ. ಇಂದು ಕೊರೊನಾದಿಂದ 6 ಮೃತಪಟ್ಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 179ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 2011 ಸಕ್ರಿಯ ಪ್ರಕರಣಗಳಿವೆ.
ಇಂದು ದಾವಗೆರೆಯಲ್ಲಿ194, ಹರಿಹರ 34, ಜಗಳೂರು 08, ಚನ್ನಗಿರಿ 79, ಹೊನ್ನಾಳಿ 43 ಹಾಗೂ ಹೊರ ಜಿಲ್ಲೆಯಿಂದ ಬಂದ 20 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.
ಇಂದು ಚನ್ನಗಿರಿಯ ವೆಂಕಟೇಶ್ವರ ಕ್ಯಾಂಪ್ ನ 45 ವರ್ಷದ ಮಹಿಳೆ. ಹರಿಹರದ ಹರಗನಹಳ್ಳಿಯ 48 ವರ್ಷದ ಪುರುಷ, ದಾವಣಗೆರೆಯ ಎಂಸಿಸಿ ಬಿ ಬ್ಲಾಕ್ ನ 62 ವರ್ಷದ ಮಹಿಳೆ, ಮಗಾನಹಳ್ಳಿಯ 58 ಮಹಿಳೆ, ರಿಂಗ್ ರಸ್ತೆಯ 55 ಪುರುಷ ಹಾಗೂ ದಾವಣಗೆರೆ ಕುರುಬರ ಕೇರಿಯ 60 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.



