ಡಿವಿಜಿ ಸುದ್ದಿ, ರಾಮನಗರ: ಮಹಾಮಾರಿ ಕೊರೊನಾ ಭೀತಿ ಕೋಳಿ ಸಾಕಾಣಿಕೆ ಉದ್ಯಮಕ್ಕೆ ಹೊಡೆತ ನೀಡಿದ್ದು, ಸಾಕಣಿಕೆದಾರರು ಕೋಳಿಗಳನ್ನು ಜೀವಂತವಾಗಿ ಸಮಾಧಿ ಮಾಡಲು ಮುಂದಾಗಿದ್ದಾರೆ. ಜಿಲ್ಲೆಯ ಕೋಳಿ ಫಾರಂ ಮಾಲೀಕನೊಬ್ಬ 17 ಸಾವಿರ ಕೋಳಿಗಳನ್ನು ಜೀವಂತವಾಗಿ ಗುಂಡಿಯಲ್ಲಿ ಜೀವಂತ ಸಮಾಧಿ ಮಾಡಿದ ಘಟನೆ ಚನ್ನಪಟ್ಟಣದಲ್ಲಿ ನಡೆದಿದೆ.
ಚನ್ನಪಟ್ಟಣದ ಫಯಾಜ್ ಅಹಮದ್ ಹಾಗೂ ರಿಯಾಜ್ ಅಹಮದ್ ಎಂಬವರು ಚಿಕನ್ ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ತಾವು ಸಾಕಾಣಿಕೆ ಮಾಡುತ್ತಿದ್ದ ಕೋಳಿ ಫಾರಂ ಬಳಿಯೇ ಜೆಸಿಬಿ ಯಂತ್ರದ ಸಹಾಯದಿಂದ ಗುಂಡಿ ತೆಗೆದು 17 ಸಾವಿರ ಕೋಳಿಗಳನ್ನು ಜೀವಂತವಾಗಿ ಸಮಾಧಿ ಮಾಡಿದ್ದಾರೆ.
ಕಳೆದ ಒಂದು ವಾರದಿಂದ ಕೋಳಿ ಮಾಂಸವನ್ನೇ ಕೇಳುವವರಿಲ್ಲದಂತಾಗಿದೆ. ಮಾರುಕಟ್ಟೆಯಲ್ಲಿ 80ರಿಂದ 100 ರೂ. ಇದ್ದ ಕೆಜಿ ಕೋಳಿ ಮಾಂಸ ಮತ್ತೆ ಕುಸಿದಿದ್ದು, ಪೌಲ್ಟ್ರಿ ಸೆಂಟರ್ ಮಾಲೀಕರು ಕೋಳಿ ಮಾಂಸ ಮಾರಾಟದಿಂದ ಹಿಂದೆ ಸರಿಯುತ್ತಿದ್ದಾರೆ.ಕೋಳಿ ಸಾಕಣಿಕೆದಾರರು ಸಾಕಿದ ಕೋಳಿಗಳನ್ನು ಕೆಜಿಗೆ 2ರಿಂದ 3 ರೂ. ಕೇಳುತ್ತಿದ್ದಾರೆ. ಇದೀಗ ಕೋಳಿಯನ್ನು ಕೇಳುವವರೇ ಇಲ್ಲದಂತಾಗಿದೆ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಉಚಿತವಾಗಿ ಸಾರ್ವಜನಿಕರಿಗೆ ನೀಡಲು ಮುಂದಾದ್ರೂ ಸಹ ಕೋಳಿಯನ್ನು ತೆಗೆದುಕೊಂಡು ಹೋಗುವವರೇ ಇಲ್ಲದಂತಾಗಿದೆ. ಹೀಗಾಗಿ ಕೋಳಿ ಫಾರಂ ಬಳಿಯೇ ಜೆಸಿಬಿ ಯಂತ್ರದ ಮೂಲಕ 5 ಗುಂಡಿಗಳನ್ನು ತೆಗೆದು ಸುಮಾರು 17 ಸಾವಿರ ಕೋಳಿಗಳನ್ನು ಜೀವಂತವಾಗಿ ಸಮಾಧಿ ಮಾಡಿದ್ದಾರೆ.
ಸುಮಾರು 80 ಲಕ್ಷ ರೂಪಯಿ ಬಂಡವಾಳ ಹೂಡಿ ಕೋಳಿ ಫಾರಂ ಹಾಕಿದ್ದೇವು. ಇದೀಗ ಸಂಪೂರ್ಣವಾಗಿ ನಷ್ಟವಾಗಿದೆ. ಹೀಗಾಗಿ ಕೋಳಿಗಳನ್ನು ಜೀವಂತವಾಗಿ ಗುಂಡಿಗಳಲ್ಲಿ ಸಮಾಧಿ ಮಾಡ್ತಿದ್ದೇವೆ. ಸರ್ಕಾರ ಕುಕ್ಕುಟೋದ್ಯಮದ ಕಡೆಗೂ ಗಮನ ಹರಿಸಿ ಪರಿಹಾರ ನೀಡುವಂತಾಗಬೇಕು ಎಂದು ಫಾರಂ ಮಾಲೀಕ ಫಯಾಜ್ ಅಹಮದ್ ತಿಳಿಸಿದರು.



