ಡಿವಿಜಿ ಸುದ್ದಿ, ಬೆಂಗಳೂರು: ಕೊರೊನಾ ವೈರಸ್ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ವಿಡಿಯೋ ಮೂಲಕ ಟಿಪ್ಸ್ ನೀಡಿದ್ದಾರೆ.
ಮಾನ್ಯ ಮುಖ್ಯಮಂತ್ರಿ ಶ್ರೀ @BSYBJP ಅವರು, ಕೊರೊನ ಸೋಂಕು ಹರಡುವಿಕೆ ತಡೆಗಟ್ಟಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳು ಹಾಗೂ ಸಾರ್ವಜನಿಕರು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಮಾತನಾಡಿದ್ದಾರೆ. pic.twitter.com/c4bv8tAnZ8
— CM of Karnataka (@CMofKarnataka) March 18, 2020
ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿನ ಖುದ್ದು ರಾಜ್ಯದ ಮುಖ್ಯಮಂತ್ರಿಗಳೇ ಸಾರ್ವಜನಿಕರ ಆತಂಕ ದೂರ ಮಾಡಲು ಮುಂದಾಗಿದ್ದಾರೆ. ಸಿಎಂ ಯಡಿಯೂರಪ್ಪರವರು ಆರೋಗ್ಯ ಇಲಾಖೆ ನೀಡಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಕೊರೊನಾ ಸೋಂಕನ್ನು ಹೇಗೆ ತಡೆಗಟ್ಟಬಹುದೆಂದು ವಿಡಿಯೋ ಸಂದೇಶದ ಮೂಲಕ ಅಮೂಲ್ಯ ಟಿಪ್ಸ್ ಗಳನ್ನು ನೀಡಿದ್ದಾರೆ. ಆತಂಕ ಪಡದೇ ಕೊರೊನಾ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ರಾಜ್ಯದ ಜನರಲ್ಲಿ ಸಿಎ ಮನವಿ ಮಾಡಿಕೊಂಡಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಒಬ್ಬ ವ್ಯಕ್ತಿ ಮೃತಪಟ್ಟಿರುವುದೂ ಸೇರಿದಂತೆ, ಈವರೆಗೆ ಸೋಂಕು ಖಚಿತವಾಗಿರುವ ಒಟ್ಟು 14 'ಕೋವಿಡ್ -19 ' ಪ್ರಕರಣಗಳು ವರದಿಯಾಗಿವೆ.@BSYBJP pic.twitter.com/6TLxgAuQ5B
— CM of Karnataka (@CMofKarnataka) March 18, 2020
ಸಿಎಂ ವಿಡಿಯೋ ಸಂದೇಶ
- ಜನ ಜಂಗುಳಿಯಿಂದ ದೂರವಿರಿ.
2.ಆದಷ್ಟು ಮನೆಯಲ್ಲೇ ಇರಿ, ಅಗತ್ಯ ಇದ್ದರೆ ಮಾತ್ರ ಹೊರಗೆ ಬನ್ನಿ.
3. ಕೈಗಳನ್ನು ಚೆನ್ನಾಗಿ ಆಗಾಗ್ಗೆ ಸೋಪಿನಲ್ಲಿ ತೊಳೆಯುತ್ತಿರಿ.
4. ಶುದ್ಧ ಕುಡಿಯುವ ನೀರನ್ನೇ ಕುಡಿಯಿರಿ.
5. ಯಾವುದೇ ದೊಡ್ಡ ಸಮಾವೇಶ, ಸಮಾರಂಭ ಆಯೋಜಿಸಬೇಡಿ.
6. ವಿದೇಶಗಳಿಂದ ಹಿಂತಿರುಗಿದರೆ ಆರೋಗ್ಯ ಇಲಾಖೆಗೆ ಖಂಡಿತಾ ಮಾಹಿತಿ ನೀಡಿ.
7. ಕೆಮ್ಮು, ನೆಗಡಿ, ಜ್ವರ, ಗಂಟಲು ಉರಿಯೂತ ಕಂಡು ಬಂದರೆ ತಕ್ಷಣವೇ ವೈದ್ಯರನ್ನು ಕಾಣಿರಿ.
8. ಕೊರೊನಾ ದೃಡಪಟ್ಟರೆ 14 ದಿನ ಪ್ರತ್ಯೇಕವಾಗಿರಿ, ಕಡ್ಡಾಯ ಚಿಕಿತ್ಸೆ ಪಡೆಯಿರಿ.
9. ಯಾರೂ ಭಯಭೀತರಾಗಬೇಡಿ, ಸರ್ಕಾರ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡಿದೆ.
10. ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ, ಸರ್ಕಾರದ ಮಾಹಿತಿಯನ್ನಷ್ಟೇ ನಂಬಿ.



