ಡಿವಿಜಿ ಸುದ್ದಿ, ಹರಪನಹಳ್ಳಿ : ತಾಲ್ಲೂಕಿನ ಉಚ್ಚoಗಿದುರ್ಗದಲ್ಲಿ ಕೊರೊನಾ ವೈರಸ್ ಹರಡದಂತೆ ಸತತ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತರಿಗೆ ಜಗಳೂರು ಶಾಸಕ ಎಸ್ ವಿ ರಾಮಚಂದ್ರ ಸನ್ಮಾನ ಮಾಡಿದರು.
ಸನ್ಮಾನ ನಂತರ ಮಾತನಾಡಿ ಎಸ್ ವಿ ರಾಮಚಂದ್ರಪ್ಪ , ಉಚ್ಚoಗಿದುರ್ಗದಲ್ಲಿ ಆಶಾ ಕಾರ್ಯಕರ್ತರು ಕೊರೊನಾ ರೋಗ ಹರಡದಂತೆ ಮನೆ ಮನೆಗೆ ತೆರಳಿ ಹೊರಗಿನಿಂದ ಬಂದ ಗ್ರಾಮಸ್ಥರ ಪಟ್ಟಿ ಮಾಡಿ ರೋಗ ಹರಡದಂತೆ ಜಾಗೃತಿ ಮೂಡಿದ್ದಾರೆ. ಪ್ರತಿ ಅಂಗಡಿಗಳಿಗೆ ಸರಕಾರದ ನಿಯಮದ ಪ್ರಕಾರ ಬಂದ್ ಮಾಡುವಂತೆ ಸೂಚನೆ ನೀಡುವ ಜೊತೆಗೆ ದಾವಣಗೆರೆಯಿಂದ ಬಂದ ಮದ್ಯ ಪ್ರಿಯರನ್ನು ಗ್ರಾಮಕ್ಕೆ ಬರದಂತೆ ತಡೆಯಲು ಹೋರಾಟ ಮಾಡಿದ್ದಾರೆ. ಜನರು ಮನೆಯಲ್ಲಿ ಇರಲು ಜಾಗೃತಿ ಮಾಡಿಸಿದ್ದು ಆಶಾ ಕಾರ್ಯಕರ್ತರು ಅತ್ಯುತ್ತಮ ಸೇವೆ ಮಾಡಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ನಾಗವೇಣಿ,ತಾಲ್ಲೂಕು ಪಂಚಾಯಿತಿ ಇ. ಒ ಅನಂತ್ ರಾಜು, ಮುಖಂಡರಾದ ರಶ್ಮಿ ರಾಜಪ್ಪ, ಎಸ್. ಹನುಮಂತಪ್ಪ, ಗುರುಮೂರ್ತಿ ಸ್ವಾಮಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಮೇಶ್ ಉಪಸ್ಥಿತರಿದ್ದರು.



