Connect with us

Dvgsuddi Kannada | online news portal | Kannada news online

ಪಾದರಾಯನಪುರ ಮಸೀದಿಯಲ್ಲಿದ್ದ 19 ವಿದೇಶಿ ತಬ್ಲೀಗಿಗಳ ವಿರುದ್ಧ ಎಫ್ ಐಆರ್

ಪ್ರಮುಖ ಸುದ್ದಿ

ಪಾದರಾಯನಪುರ ಮಸೀದಿಯಲ್ಲಿದ್ದ 19 ವಿದೇಶಿ ತಬ್ಲೀಗಿಗಳ ವಿರುದ್ಧ ಎಫ್ ಐಆರ್

ಡಿವಿಜಿ ಸುದ್ದಿ, ಬೆಂಗಳೂರುನಗರದ ಪಾದರಾಯನಪುರದ ಸುಬಾನಿಯ ಮಸೀದಿಯಲ್ಲಿ ನೆಲೆಸಿದ್ದ 19 ವಿದೇಶಿ  ತಬ್ಲೀಗಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಜ. 5ರಂದು ಪ್ರವಾಸ ವೀಸಾದಡಿ ಭಾರತಕ್ಕೆ ಬಂದಿದ್ದರು. ಹಲವು ಧಾರ್ಮಿಕ ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಕೊನೆಯಲ್ಲಿ, ಬೆಂಗಳೂರಿಗೆ ಬಂದು ಪಾದರಾಯನಪುರ ಸುಬಾನಿಯ ಮಸೀದಿಯಲ್ಲಿ ಉಳಿದುಕೊಂಡಿದ್ದರು. ಸ್ಥಳೀಯ ಉಮರ್ ಇ ಫಾರೂಕಿಯಾ ಟ್ರಸ್ಟ್ ವತಿಯಿಂದ ಧರ್ಮ ಪ್ರಚಾರ ಕಾರ್ಯಕ್ರಮ ನಡೆಸುತ್ತಿದ್ದರು.

ಕಿರ್ಗಿಸ್ಥಾನಕ್ಕೆ ಸೇರಿದ 19 ಮಂದಿ ವಿದೇಶಿ ತಬ್ಲೀಗಿಗಳು ಇದ್ದರು. ಅವರಲ್ಲಿ ಕೊರೊನಾ ಸೋಂಕು ಇರುವ ಅನುಮಾನವಿತ್ತು. ಹೀಗಾಗಿ ಕ್ವಾರಂಟೈನ್‌ ಮಾಡಲಾಗಿತ್ತು. ಇಂದಿರಾನಗರದ ಆಸ್ಪತ್ರೆಯಲ್ಲಿಟ್ಟು ನಂತರ, ಸಾರಾಯಿಪಾಳ್ಯದ ಹಜ್ ಭವನಕ್ಕೆ ಬಿಡಲಾಗಿತ್ತು. ಈಗ ಅವರೆಲ್ಲರ ವಿರುದ್ಧ ವಿದೇಶಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top