Connect with us

Dvgsuddi Kannada | online news portal | Kannada news online

ಸಾರಿಗೆ ನೌಕರರಿಗೆ ಒಂದು ವರ್ಷ ವೇತನ ರಹಿತ ರಜೆ ..!

ಪ್ರಮುಖ ಸುದ್ದಿ

ಸಾರಿಗೆ ನೌಕರರಿಗೆ ಒಂದು ವರ್ಷ ವೇತನ ರಹಿತ ರಜೆ ..!

ಡಿವಿಜಿ ಸುದ್ದಿ, ಬೆಂಗಳೂರು: ಭಾರೀ ನಷ್ಟದ ಸುಳಿಯಲ್ಲಿರುವ ಸಾರಿಗೆ ಸಂಸ್ಥೆಗಳು, ತನ್ನ ಅಧಿಕಾರಿ ಮತ್ತು ನೌಕರರಿಗೆ ವೇತನ ರಹಿತ ಒಂದು ವರ್ಷ ವರೆಗೆ  ರಜೆ ನೀಡಲು ಸಿದ್ಧತೆ ನಡೆಸಿದೆ.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚುತ್ತಿರುವುದರಿಂದ ಬಸ್‌ಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ  ನಡೆಸುತ್ತಿಲ್ಲ. ನೌಕರರ ಆರೋಗ್ಯ ಮತ್ತು ನಿಗಮಗಳ ಆರ್ಥಿಕ ದೃಷ್ಟಿಯಿಂದ ಒಂದು ವರ್ಷದ ವಿಶೇಷ ರಜೆ ನೀಡಲು ಯೋಚಿಸಿದೆ.

ksrtc

ಈ ಕುರಿತು ಸಾರಿಗೆಯ ನಿಗಮಗಳಾದ  ಬಿಎಂಟಿಸಿ, ವಾಯವ್ಯ ಮತ್ತು ಈಶಾನ್ಯ ಸಾರಿಗೆ ಸಂಸ್ಥೆಗಳ  ನಿರ್ದೇಶಕರಿಗೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಪತ್ರ ಬರೆದಿದ್ದಾರೆ. ಒಂದು ವೇಳೆ ರಜೆ ಪಡೆದವರ ಹುದ್ದೆಯ ಹಕ್ಕು ನಿಗಮದಲ್ಲಿ  ಉಳಿಯಲಿದೆ. ಸಿಬ್ಬಂದಿ ಕೋರಿದರೆ ಮಾತ್ರ ರಜೆ ಮಂಜೂರು ಮಾಡಬಹುದು’ ಎಂದಿದ್ದಾರೆ.

5 ವರ್ಷಗಳ ತನಕ ವಿಶೇಷ ರಜೆ ಮಂಜೂರು ಮಾಡಲು ಅವಕಾಶ ಇತ್ತು. ನೌಕರರ ಮೇಲೆ ಒತ್ತಡ ಹೇರಿ ರಜೆ ನೀಡಲ್ಲ. ಬಯಸಿದವರಿಗಷ್ಟೇ ರಜೆ ಮಂಜೂರು ಮಾಡಲಾಗುವುದು. ಈ ಕುರಿತು ಇನ್ನೂ ಆದೇಶ ಬಂದಿಲ್ಲ ಎಂದು ಕೆಎಸ್ ಆರ್ ಟಿಸಿ ಎಂಡಿ ತಿಳಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top