ಹೇ ಕಾಣದ ಕರಾಳವೇ….

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ನನ್ನ ಜನರನ್ನು ಕಾಡದಿರು, ಕಳವಳಿಸದಿರು, ಆಕ್ರಮಿಸದಿರು, ಹರಿದಾಡದಿರು, ಕೊಲ್ಲದಿರು…
ಕರುಣೆ ಇಲ್ಲವೇ ನಿನಗೆ …?
ಮಸಣದಿ ನನ್ನವರು ತನ್ನವರೆಂಬ ಮಂದಿಗಳೇ ಇಲ್ಲದೇ ಅನಾಥ ಭಾವದಲಿ ಬೂದಿಯಾಗುವ ಆ ಶವಗಳ ಆಕ್ರಂದನ ಕೇಳುತ್ತಿಲ್ಲವೇ…?
ಜನ‌ರ ಮನದೊಳಗಿನ ಭಯ ಕಾಣುತ್ತಿಲ್ಲವೇ…?
ನಿನ್ನ ಅಟ್ಟಹಾಸವ ಹುಟ್ಟಡಗಿಸುವ ನನ್ನ ಮಿತ್ರನೊರ್ವ ಬರುವುದು ಇನ್ನೂ ಸ್ವಲ್ಪ ತಡವಾಗಬಹುದೇನೊ!!

ಅದಕ್ಕಾಗಿ ನಾನೇ ನನ್ನೊಳಗಿನ ಬುದ್ಧನೊಲುಮೆ ಇಂದಲೇ ಬೇಡುವೆನು ನಿನ್ನ…
ದಯಮಾಡಿ ಕೃಪೆ ತೋರಿ ಕರುಣಿಸು,
ನನ್ನನ್ನೂ ಸೇರಿ‌ ನನ್ನ ಕೆಲ ಜನರು ನಿನ್ನಿಂದ ಕಲಿತಿದ್ದೇವೆ ಒಂದಿಷ್ಟು…
ಅದಕ್ಕಾಗಿ ಆ ಕಾಳಜಿಯ ಕನಿಕರದಿ ಹೇಳುತಿರುವೇ ನಾನು…
ಸಾಕು ನನ್ನ ಜನರನ್ನು ಜೀವಿಸಲು ಬಿಡು…
ಹೇ ಕಾಣದ ಕರಾಳವೇ..,
ಸ್ವತಂತ್ರ ನೀಡೆಲ್ಲರಿಗೆ…
ಸ್ವತಂತ್ರ ನೀಡೆಲ್ಲರಿಗೆ…

✍🏻 ರಾಘು ದೊಡ್ಡಮನಿ, ದಾವಣಗೆರೆ
ಮೊ: 9844363474

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *