Connect with us

Dvgsuddi Kannada | online news portal | Kannada news online

ಶಿವಸೇನಾ ಅಲ್ಲ, ಸೋನಿಯಾ ಸೇನೆ ; ಮಹಾರಾಷ್ಟ್ರ ಸರ್ಕಾರದ ವಿರುದ್ಧ ಮತ್ತೆ ಕಿಡಿಕಾರಿದ ನಟಿ ಕಂಗಾನ

ರಾಷ್ಟ್ರ ಸುದ್ದಿ

ಶಿವಸೇನಾ ಅಲ್ಲ, ಸೋನಿಯಾ ಸೇನೆ ; ಮಹಾರಾಷ್ಟ್ರ ಸರ್ಕಾರದ ವಿರುದ್ಧ ಮತ್ತೆ ಕಿಡಿಕಾರಿದ ನಟಿ ಕಂಗಾನ

ಮುಂಬೈ: ಮಹಾರಾಷ್ಟ್ರ ಮತ್ತು  ಬಾಲಿವುಡ್ ನಟಿ ಕಂಗನಾ ರಣಾವತ್ ನಡುವೆ ವಾಕ್ಸಮರ  ಮುಂದುವರೆದಿದೆ.  ಶಿವಸೇನಾ ಅಲ್ಲ, ಅದು ಸೋನಿಯಾ ಸೇನೆ ಎಂದು ಕಿಡಿಕಾರಿದ್ದಾರೆ.

ಬೃಹತ್ ಮುಂಬೈ ಮುನಿಸಿಪಲ್ ಕಾರ್ಪೋರೇಶನ್ ಬುಧವಾರ  ಕಂಗನಾ ಅವರ ಮನೆ ಮತ್ತು ಕಚೇರಿಯನ್ನು ಒಡೆದು ಹಾಕಿತ್ತು. ಈಗ ಈ ಪ್ರಕರಣ ಕೋರ್ಟಿನಲ್ಲಿದ್ದು, ಇಂದು ಇದರ ಪ್ರಕರಣ ವಿಚಾರಣೆ ನಡೆಯಲಿದೆ.  ಇದಕ್ಕೂ ಮೊದಲು ಕಂಗನಾ ಶಿವಸೇನಾ ವಿರುದ್ಧ  ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವ ಸಿದ್ಧಾಂತವನ್ನು ಇಟ್ಟುಕೊಂಡು ಬಾಳಾ ಸಾಹೇಬ್ ಠಾಕ್ರೆ ಅವರು ಶಿವಸೇನಾವನ್ನು ಕಟ್ಟಿದರೋ, ಇಂದು ಅಧಿಕಾರಕ್ಕಾಗಿ ಅದೇ ಸಿದ್ಧಾಂತವನ್ನು ಮಾರಾಟ ಮಾಡುವ ಮೂಲಕ ಶಿವಸೇನಾ ಈಗ ಸೋನಿಯಾ ಸೇನೆ ಆಗಿದೆ. ಗೂಂಡಾಗಳು ನನ್ನ ಮನೆಯನ್ನು ಒಡೆದು ಹಾಕಿದ್ದಾರೆ. ಅವರನ್ನು ನಾಗರಿಕ ಅಧಿಕಾರಿಗಳು ಎಂದು ಕರೆಯಬೇಡಿ, ಅದು ಸಂವಿಧಾನದಕ್ಕೆ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

kangan 2

ಸರಣಿ ಟ್ವೀಟ್ ಮಾಡುತ್ತಿರುವ ಕಂಗನಾ, ಇಂದು ನನ್ನ ಧ್ವನಿಯನ್ನು ಮುಚ್ಚಿಸಲು ಪ್ರಯತ್ನ ಮಾಡಿದರೆ ಅದು ನಾಳೆ ಕೋಟಿ ಜನರ ಪ್ರತಿಧ್ವನಿಯಾಗಿ ಬದಲಾಗುತ್ತೆ. ಉದ್ಧವ್ ಠಾಕ್ರೆ ಗ್ಯಾಂಗ್ ಮತ್ತು ಕರಣ್ ಜೋಹರ್ ಗ್ಯಾಂಗ್ ನನ್ನ ಮನೆ ಆಫೀಸ್ ಅನ್ನು ಒಡೆದು ಹಾಕಿದೆ. ನನ್ನ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತದೆ. ಆದರೆ ನಾನು ಸತ್ತರೂ ನಿಮ್ಮ ಬಂಡವಾಳವನ್ನು ಬಹಿರಂಗ ಮಾಡುತ್ತೇನೆ ಎಂದು ಕಂಗನಾ ಸವಾಲ್ ಎಸೆದಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ರಾಷ್ಟ್ರ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top