Connect with us

Dvgsuddi Kannada | online news portal | Kannada news online

ತರಳಬಾಳು ಹುಣ್ಣಿಮೆಯಿಂದ ಲೋಕ ಕಲ್ಯಾಣ, ಸರ್ವ ಜನಾಂಗಕ್ಕೆ ಶಾಂತಿ: ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀ

ಪ್ರಮುಖ ಸುದ್ದಿ

ತರಳಬಾಳು ಹುಣ್ಣಿಮೆಯಿಂದ ಲೋಕ ಕಲ್ಯಾಣ, ಸರ್ವ ಜನಾಂಗಕ್ಕೆ ಶಾಂತಿ: ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀ

ಸಿರಿಗೆರೆ: ತರಳಬಾಳು ಹುಣ್ಣಿಮೆ ಮಹೋತ್ಸವ ಲೋಕ ಕಲ್ಯಾಣ ಹಾಗೂ ಸರ್ವ ಜನಾಂಗದ ಶಾಂತಿ ತೋಟವನ್ನಾಗಿಸಿದವರು ಹಿರಿಯ ಶ್ರೀಗಳಾದ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರು ಎಂದು ಸಿರಿಗೆರೆಯ ತರಳಬಾಳು ತರಳಬಾಳು ಬೃಹನ್ಮಠದ ಡಾ.‌ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸ್ಮರಣೆ ಮಾಡಿಕೊಂಡರು.

ಗುರು ಶಾಂತೇಶ್ವರ ಭವನದಲ್ಲಿ ಕೊರೊನಾ ಹಿನ್ನೆಲೆ ಸರಳವಾಗಿ ತರಳಬಾಳು ಹುಣ್ಣಿಮೆ ಮಹೋತ್ಸವ ಆಚರಿಸಲಾಯಿತು. ನಂತರ ಶ್ರೀಗಳು ಆಶೀರ್ವಚನ ನೀಡಿದರು.

ತರಳಬಾಳು ಹುಣ್ಣಿಮೆ ಮಹೋತ್ಸದಿಂದ ಲೋಕ ಕಲ್ಯಾಣವಾಗಬೇಕು ಮತ್ತು ಎಲ್ಲ ಸಮುದಾಯಗಳ ಶಾಂತಿ ತೋಟ ಆಗಬೇಕು ಎಂಬುದು ಹಿರಿಯ ಗುರುಗಳ ಆಶಯವಾಗಿತ್ತು. ಅವರ ಆಶಯದಂತೆ ತರಳಬಾಳು ಹುಣ್ಣಿಮೆ ಮಹೋತ್ಸವ ಪರಂಪರೆ ನಡೆದುಕೊಂಡು ಬರುತ್ತಿದೆ ಎಂದರು.

ನಾವು ಪ್ರತಿ ವರ್ಷ ಹುಣ್ಣಿಮೆ ದಿನದಂದು ಚಂದ್ರನನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ಯಾಕೆಂದರೆ ನಾವು ವೇದಿಕೆ ಕಾರ್ಯಕ್ರಮ ದಲ್ಲಿ ಇರುತ್ತಿದ್ದೇವು. ಆದರೆ, ಈ ಬಾರಿ ಹುಣ್ಣಿಮೆ ಬೆಳದಿಂಗಳಲ್ಲಿ ತರಳಬಾಳು ಮಹೋತ್ಸವ ಆಚರಿಸಿಕೊಳ್ಳುತ್ತಿದ್ದೇವೆ‌. ಚಂದ್ರನ ಬೆಳಕು ಕೇವಲ ಉಳ್ಳವರ ಮನೆ ಮೇಲೆ ಮಾತ್ರ ಬೀಳುವುದಿಲ್ಲ. ಚಂದ್ರನ ಬೆಳಕಿನಲ್ಲಿ ಭೇಧ- ಭಾವ ಇಲ್ಲ. ಇಲ್ಲಿ ಸೇರಿದ ಮಕ್ಕಳೂ ಕೂಡ ಚಂದ್ರನಂತೆ ಹೊಳೆಯುವಂತಾಗಬೇಕು. ಎಲ್ಲ ಕಡೆ ನಿಮ್ಮ ಪ್ರತಿಭೆ ಪ್ರದರ್ಶನವಾಗಬೇಕು ಎಂದರು.

IMG 20210228 084147

ತರಳಬಾಳು ಹುಣ್ಣಿಮೆ ಮಹೋತ್ಸವದಿಂದ ಬರಗಾಲದ ನಾಡಿಗೆ ಭಾಗ್ಯವಾದಂತಾಗಿದೆ. ಅನೇಕ ನೀರಾವರಿ ಯೋಜನೆಗಳು ಕಾರ್ಯರೂಪಕ್ಕೆ ಬಂದವು. ಇದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕುಮಾರಸ್ವಾಮಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಕಾರಣಕರ್ತರು.

ಮುಂದಿನ ವರ್ಷ ನಿಗದಿಯಂತೆ ಕೊಟ್ಟೂರಲ್ಲಿ ತರಳನಾಳು ಹುಣ್ಣಿಮೆ ಮಹೋತ್ಸವ ನಡೆಯಲಿದೆ. ಆ ಭಾಗಕ್ಕೂ ಕೂಡ ನೀರಾವರಿ ಯೋಜನೆ ಫಲ ದೊರೆಯಲಿದೆ ಎಂಬುದು ನಮ್ಮ ಆಶಯವಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗುವುದು.

ಕೊರೊನಾ ಕಾರಣದಿಂದ ಈ ಬಾರಿ ಸರಳವಾಗಿ ಹುಣ್ಣಿಮೆ ಮಹೋತ್ಸವ ಆಚರಿಸಲು ತೀರ್ಮಾನಿಸಲಾಗಿತ್ತು. ಭಕ್ತರು ಅಚ್ಚುಕಟ್ಟಾಗಿ ಶಿಸ್ತಿನಿಂದ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top